<?= $pageTitle ?>
Logo
ಮುಖಪುಟ ಓದುವುದು ಕೇಳು
Trending

CJP Protest: ದೆಹಲಿಯಲ್ಲಿ ಕೇಂದ್ರ ಸರ್ಕಾರ-ಸಿಜೆಪಿ ವಕ್ತಾರರ ಮೂರನೇ ಸುತ್ತಿನ ಸಭೆ

CJP Protest: ದೆಹಲಿಯಲ್ಲಿ ಕೇಂದ್ರ ಸರ್ಕಾರ-ಸಿಜೆಪಿ ವಕ್ತಾರರ ಮೂರನೇ ಸುತ್ತಿನ ಸಭೆ
Summary: The third round of talks was held between CJP spokespersons and the Central Government in the backdrop of the Delhi Jantar Mantar protest. Here is complete information on the NEET controversy, the demands of the protesters and the government's next decision.

Belagavi News :

NEET ವಿವಾದದ ನಡುವೆ ಕೇಂದ್ರ ಸರ್ಕಾರದ CJP 3ನೇ ಸುತ್ತಿನ ಸಭೆ: ದೆಹಲಿಯಲ್ಲಿ ಮಹತ್ವದ ಮಾತುಕತೆ

ನವದೆಹಲಿ: ದೆಹಲಿಯ ಕಾನ್ ಸ್ಟಿಟ್ಯೂಷನ್ ಕ್ಲಬ್ ನಲ್ಲಿ ಕೇಂದ್ರ ಸರ್ಕಾರ ಮತ್ತು "ಕಾಕ್ರೋಚ್ ಜನತಾ ಪಾರ್ಟಿ" (CJP) ನಿಯೋಗದ ನಡುವೆ 3ನೇ ಸುತ್ತಿನ ಮಾತುಕತೆ ನಡೆಯುತ್ತಿದೆ.

NEET ಪೇಪರ್ ಲೀಕ್ ವಿವಾದ, ಪರೀಕ್ಷಾ ಅಕ್ರಮಗಳು ಹಾಗೂ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಪ್ರತಿನಿಧಿಗಳು ಮತ್ತು ಪ್ರತಿಭಟನಾನಿರತ CJP ನಾಯಕರ ನಡುವೆ ಈ ಮಹತ್ವದ ಸಭೆ ಆಯೋಜಿಸಲಾಗಿದೆ.

ಕೇಂದ್ರ ಸರ್ಕಾರದ ಪರವಾಗಿ ಸಚಿವರಾದ "ಜೆ.ಪಿ. ನಡ್ಡಾ " ಮತ್ತು " ಜಿತೇಂದ್ರ ಸಿಂಗ್ " ಸಭೆಯಲ್ಲಿ ಭಾಗವಹಿಸಿದ್ದು, CJP ಪರವಾಗಿಲ್ಲ ರಾಷ್ಟ್ರೀಯ ವಕ್ತಾರರಾದ " ಸೌರವ್ ದಾಸ್ " ಮತ್ತು " ಅಶುತೋಷ ರಾಂಕಾ" ನಿಯೋಗವನ್ನು ಮುನ್ನಡೆಸುತ್ತಿದ್ದಾರೆ.

ಈ ಹಿಂದೆ NEET ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಅವರ ರಾಜೀನಾಮೆಯ ಬಳಿಕ CJP ತನ್ನ ಪ್ರತಿಭಟನೆಯನ್ನು ಮುಂದುವರಿಸಲಿದೆಯೇ ಅಥವಾ ಹಿಂಪಡೆಯಲಿದೆಯೇ ಎಂಬುದು ಈ ಸಭೆಯ ಫಲಿತಾಂಶದ ಬಳಿಕ ಸ್ಪಷ್ಟವಾಗುವ ಸಾಧ್ಯತೆಯಿದೆ.

ವಿದ್ಯಾರ್ಥಿಗಳ ಹಿತಾಸಕ್ತಿ, ಪರೀಕ್ಷಾ ವ್ಯವಸ್ಥೆಯಲ್ಲಿನ ಸುಧಾರಣೆಗಳು ಮತ್ತು CJP ಮುಂದಿಟ್ಟಿರುವ ಬೇಡಿಕೆಗಳ ಕುರಿತು ನಡೆಯುತ್ತಿರುವ ಈ ಚರ್ಚೆಯತ್ತ ರಾಜಕೀಯ ವಲಯದ ಗಮನ ನೆಟ್ಟಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online