Belagavi News:
ರಾಜ್ಯದ ಗಮನ ಸೆಳೆದಿರುವ ಧರ್ಮಸ್ಥಳ ಬಂಗ್ಲೆಗುಡ್ಡೆ ಬುರುಡೆ ಪ್ರಕರಣದ ರಹಸ್ಯ ಭೇದಿಸಲು ವಿಶೇಷ ತನಿಕಾ ತಂಡ ಹೊಸ ತಂತ್ರಜ್ಞಾನಗಳ ನೆರವು ಪಡೆಯಲು ಮುಂದಾಗಿದೆ. ಪ್ರಕರಣದಲ್ಲಿ ಪತ್ತೆಯಾಗಿರುವ ಏಳು ಬುರುಡೆಗಳ ಮೂಲವನ್ನು ಪತ್ತೆಹಚ್ಚಲು ತನಿಖೆ ಪ್ರಮುಖ ಸವಾಲ್ ಆಗಿ ಪರಿಣಮಿಸಿದ್ದು, ಇದಕ್ಕಾಗಿ ಅತ್ಯಧುನಿಕ ಐಸೋಟೋಪ್ ಎನಾಲಿಸಿಸ್ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಲಾಗಿದೆ.
ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಪತ್ತೆಯಾದ ಬುರುಡೆಗಳ ಹಿನ್ನೆಲೆ ಹಾಗೂ ಅವು ಯಾರಿಗೆ ಸೇರಿದ್ದವು ಎಂಬುದನ್ನು ಖಚಿತಪಡಿಸಿಕೊಳ್ಳಲು SIT ತೀರ್ವ ಕಸರತ್ತು ನಡೆಸುತ್ತಿದೆ. ತನಿಖೆಯ ಒಂದು ಭಾಗವಾಗಿ ಬುರುಡೆಗಳ ಮೂಲವನ್ನು ಪತ್ತೆ ಹಚ್ಚುವುದು ಮಹತ್ವದ್ದಾಗಿದ್ದು, ಮತ್ತೊಂದು ಭಾಗವಾಗಿ ಪ್ರಕರಣದ ಹಿಂದೆ ಯಾವುದೇ ಸಂಚು ಅಥವಾ ಷಡ್ಯಂತ್ರವಿದೆಯೇ ಎಂಬುವುದರ ಕುರಿತು ಪರಿಶೀಲನೆ ನಡೆಯುತ್ತಿದೆ.
ಐಸೋಟೋಪ್ ಎನಾಲಿಸಿಸ್ ತಂತ್ರಜ್ಞಾನವು ಮಾನವ ಅವಶೇಷಗಳ ಆಹಾರ ಪದ್ಧತಿ, ಭೌಗೋಳಿಕ ಹಿನ್ನೆಲೆ ಮತ್ತು ಜೀವನಶೈಲಿಯ ಕುರಿತು ಮಹತ್ವದ ಸುಳಿವುಗಳನ್ನು ನೀಡಬಲ್ಲದು. ಈ ಪರೀಕ್ಷೆಯ ಮೂಲಕ ಬುರುಡೆಗಳು ಯಾವ ಪ್ರದೇಶದ ವ್ಯಕ್ತಿಗಳಿಗೆ ಸೇರಿದ್ದವು, ಅವರು ಯಾವ ರೀತಿ ಆಹಾರ ಸೇವಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.
ಇತ್ತೀಚಿಗೆ ಧರ್ಮಸ್ಥಳ ಬುರುಡೆ ಪ್ರಕರಣ ಮತ್ತು ಸುದ್ದಿಯ ಕೇಂದ್ರ ಬಿಂದುವಾಗಿದ್ದು, ನಟ ಪ್ರಕಾಶ್ ರಾಜ್ ಅವರ ಹೆಸರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.ಈ ಬೆಳವಣಿಗೆ ಪ್ರಕರಣದತ್ತ ಸಾರ್ವಜನಿಕರ ಗಮನವನ್ನು ಮತ್ತಷ್ಟು ಸೆಳೆದಿದೆ.
SIT ಅಂತಿಮ ವರದಿ ಸಲ್ಲಿಸುವ ಮುನ್ನ 7 ಬುರುಡೆಗಳ ನಿಖರ ಗುರುತು ಪತ್ತೆ ಹಚ್ಚುವುದು ಅತ್ಯಂತ ಅಗತ್ಯವಾಗಿದೆ. ಹೀಗಾಗಿ ವೈಜ್ಞಾನಿಕ ಸಾಕ್ಷಾಧಾರಗಳ ನೆರವಿನಿಂದ ಪ್ರಕರಣದ ಸತ್ಯಾಂಶ ಹೊರ ತೆಗೆದುಕೊಳ್ಳಲು ತನಿಖಾ ತಂಡ ನಿರಂತರ ಪ್ರಯತ್ನ ನಡೆಸುತ್ತಿದೆ.
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಹೊಸ ತಿರುವು - ಹೇಳು ಬುರುಡೆಗಳ ಮೂಲ ಪತ್ತೆಗೆ ಐಸೋಟೋಪ್ ಎನಾಲಿಸಿಸ್ ಮೊರೆ ಹೋದ ಎಸ್ಐಟಿ:
ವಿಶ್ವದ ಗಮನ ಸೆಳೆದ ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ತನಿಖೆ ತೀವ್ರ ರಾಜ್ಯ ಮಾತ್ರವಲ್ಲ, ದೇಶ ವಿದೇಶಗಳಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳ ಬಂಗ್ಲೆಗುಡ್ಡೆ ಬುರುಡೆ ಪ್ರಕರಣದ ತನಿಖೆ ಇದೀಗ ಹೊಸ ಹಂತ ತಲುಪಿದೆ. ಪ್ರಕರಣದ ರಹಸ್ಯ ಭೇದಿಸಲು ವಿಶೇಷ ತನಿಕ ತಂಡ ಅತ್ಯಧುನಿಕ ವೈಜ್ಞಾನಿಕ ತಂತ್ರಗಳ ನೆರವು ಪಡೆಯಲು ಮುಂದಾಗಿದ್ದು, ಪತಿಯಾಗಿರುವ ಏಳು ಬುರುಡೆಗಳ ಮೂಲ ಪತ್ತೆಗೆ ಐಸೋಟೋಪ್ ಎನಾಲಿಸಿಸ್ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ.
ಬಂಗ್ಲೆ ಗುಡ್ಡೆ ಬುರುಡೆಗಳ ಮೂಲ ಪತ್ತೆಯೇ ಎಸ್ ಐ ಟಿ ಗೆ ದೊಡ್ಡ ಸವಾಲು :
ಧರ್ಮಸ್ಥಳ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಪತ್ತೆಯಾದ ಏಳು ಬುರುಡೆಗಳು ಯಾರಿಗೆ ಸೇರಿದ್ದವು? ಅವು ಯಾವ ಕಾಲಘಟ್ಟದವು? ಮೃತರು ಯಾವ ಪ್ರದೇಶದವರು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಎಸ್ಐಟಿಯ ಪ್ರಮುಖ ಗುರಿಯಾಗಿದೆ. ಅಂತಿಮ ತನಿಕ ವರದಿ ಸಲ್ಲಿಕೆಗೆ ಈ ಮಾಹಿತಿ ಅತ್ಯಂತ ಮಹತ್ವದ್ದಾಗಿರುವುದರಿಂದ ತನಿಖಾಧಿಕಾರಿಗಳು ವೈಜ್ಞಾನಿಕ ಪರೀಕ್ಷೆಗಳತ್ತ ಗಮನಹರಿಸಿದ್ದಾರೆ.
ಬುರುಡಿಗಳಲ್ಲಿರುವ ರಾಸಾಯನಿಕ ಅಂಶಗಳನ್ನು ವಿಶ್ಲೇಷಿಸುವ ಮೂಲಕ ಮೃತ ವ್ಯಕ್ತಿಗಳ ಆಹಾರ ಪದ್ಧತಿ, ಅವರು ವಾಸಿಸಿದ್ದ ಭೌಗೋಳಿಕ ಪ್ರದೇಶ ಹಾಗೂ ಜೀವನ ಶೈಲಿಯ ಬಗ್ಗೆ ಮಹತ್ವದ ಸುಳಿವುಗಳನ್ನು ಪಡೆಯಬಹುದು ಎಂಬ ನಿರೀಕ್ಷೆ ಇದೆ. ಈ ಮಾಹಿತಿಯು ತನಿಖೆಗೆ ಹೊಸ ದಿಕ್ಕು ನೀಡುವ ಸಾಧ್ಯತೆ ಇದೆ.
ಐಸಮಸ್ಥಾನಿ ವಿಶ್ಲೇಷಣೆ ಎಂದರೆ ಒಂದು ವಸ್ತುವಿನಲ್ಲಿರುವ ವಿವಿಧ ಐಸೋಟೋಪ್ ಗಳ ಪ್ರಮಾಣವನ್ನು ಅಳೆಯುವ ಅತ್ಯಧುನಿಕ ವೈಜ್ಞಾನಿಕ ವಿಧಾನ. ಈ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಮಾಸ್ ಸ್ಪೆಕ್ಟ್ರೋಮೆಟ್ರಿ ತಂತ್ರಜ್ಞಾನ ಬಳಸಲಾಗುತ್ತದೆ.
ಈ ವಿಶ್ಲೇಷಣೆಯ ಮೂಲಕ :
1. ವ್ಯಕ್ತಿಯ ಆಹಾರ ಪದ್ಧತಿ ತಿಳಿಯಬಹುದು
2. ಮೂಲ ಭೌಗೋಳಿಕ ಹಿನ್ನೆಲೆ ಪತ್ತೆಯಾಗಬಹುದು
3. ಜೀವನಶೈಲಿ ಹಾಗೂ ವಲಸೆ ಚರಿತ್ರೆಯ ಸುಳಿವು ಸಿಗಬಹುದು
4. ಅವಶೇಷಗಳ ಮೂಲ ಮತ್ತು ವಯಸ್ಸಿನ ಬಗ್ಗೆ ಮಾಹಿತಿ ದೊರೆಯಬಹುದು
ಇದೇ ಕಾರಣಕ್ಕೆ ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಐಸೋಟೋಪ್ ಎನಾಲಿಸಿಸ್ ಪರೀಕ್ಷೆಯನ್ನು ಎಸ್ಐಟಿ ಮಹತ್ವದ ತನಿಕ ಅಸ್ತ್ರವಾಗಿ ಬಳಸಲು ಮುಂದಾಗಿದೆ.
ತನಿಖೆಯ ಮೇಲೆ ಹೆಚ್ಚಿದ ಕುತೂಹಲ :
ಧರ್ಮಸ್ಥಳ ಬುರುಡೆ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ಪ್ರಕರಣದ ಸತ್ಯಾಂಶ ಏನು ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ. ಇದೀಗ ಐಸೋಟೋಪ್ ಏನಾಲೈಸಸ್ ಪರೀಕ್ಷೆಯ ಫಲಿತಾಂಶಗಳು ತನಿಖೆಗೆ ನಿರ್ಣಾಯಕ ತಿರುವು ನೀಡಬಹುದೇ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಕರಾವಳಿ ಭಾಗದವರಾ ಮೃತರು? ಐಸೋಟೋಪ್ ಪರೀಕ್ಷೆಯಿಂದ ಸಿಗಲಿದೆ ಉತ್ತರ ! :
ಧರ್ಮಸ್ಥಳ ಬಂಗ್ಲಿಗುಡ್ಡೆ ಬುರುಡೆ ರಹಸ್ಯ ಭೇದಿಸಲು ಎಸ್ಐಟಿ ತೀವ್ರ ಕಸರತ್ತು ರಾಜ್ಯದ ಗಮನ ಸೆಳೆಯುತ್ತಿರುವ ಧರ್ಮಸ್ಥಳ ಬಂಗ್ಲೆ ಗುಡ್ಡೆ ಬುರುಡೆ ಪ್ರಕರಣದ ತನಿಕೆಯಲ್ಲಿ ವಿಶೇಷ ತನಿಕಾ ತಂಡ ಮಹತ್ವದ ಹೆಜ್ಜೆ ಇಟ್ಟಿದೆ. ಪತ್ತೆಯಾಗಿರುವ ಮಾನವ ಅತ್ತಿ ಪಂಜರಗಳು ಹಾಗೂ ಬುರುಡೆಗಳ ಮೂಲವನ್ನು ಪತ್ತೆಹಚ್ಚಲು ಅತ್ಯಾಧುನಿಕ ಐಸೋಟೋಪ್ ಪರೀಕ್ಷೆ ನಡೆಸಲು ಸಿದ್ಧತೆ ನಡೆದಿದ್ದು, ಮೃತರು ಕರಾವಳಿ ಭಾಗದವರಾ ಅಥವಾ ರಾಜ್ಯದ ಬೇರೆ ಪ್ರದೇಶದವರಾ ಎಂಬುವುದರ ಬಗ್ಗೆ ಮಹತ್ವದ ಸುಳಿವು ಸಿಗುವ ನಿರೀಕ್ಷೆ ಇದೆ.
ಐಸೋಟೋಪ್ ವಿಶ್ಲೇಷಣೆಯ ಮೂಲಕ ಮೃತರ ಆಹಾರ ಪದ್ಧತಿ, ಕುಡಿಯುವ ನೀರಿನ ಮೂಲ ಹಾಗೂ ಅವರು ವಾಸಿಸಿದ್ದ ಭೌಗೋಳಿಕ ಪ್ರದೇಶದ ಕುರಿತು ಅಂದಾಜು ಮಾಹಿತಿ ಲಭ್ಯವಾಗಲಿದೆ. ಈ ವರದಿಯ ಆಧಾರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಪತ್ತೆಯಾಗಿರುವ ವ್ಯಕ್ತಿಗಳ ಮಾಹಿತಿಯೊಂದಿಗೆ ಅಧಿಕಾರಿಗಳು ತಾಳೆ ಹಾಕಲಿದ್ದಾರೆ.
ತನಿಕಾ ಮೂಲಗಳ ಪ್ರಕಾರ, ಬುರುಡೆಗಳು ಮತ್ತು ಅಸ್ತಿಪಂಜರಗಳು ಯಾವ ಪ್ರದೇಶದ ವ್ಯಕ್ತಿಗಳಿಗೆ ಸೇರಿದ್ದವು ಎಂಬ ಕನಿಷ್ಠ ಮಾಹಿತಿ ದೊರೆತರೂ ತನಿಕೆಗೆ ಮಹತ್ವದ ದಿಕ್ಕು ಸಿಗಲಿದೆ.
ಡಿಎನ್ಎ ಪರೀಕ್ಷೆಗೆ ಈಗಾಗಲೇ ಮಾದರಿ ರವಾನೆ :
ಬಂಗ್ಲಿಗುಡ್ಡೆ ಪ್ರದೇಶದಲ್ಲಿ ಪತ್ತೆಯಾದ ಮಾನವ ಆಸ್ತಿ ಪಂಜರಗಳ ಮಾದರಿಗಳನ್ನು ಡಿಎನ್ಎ ಪರೀಕ್ಷೆಗಾಗಿ ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಡಿಎನ್ಎ ಪರೀಕ್ಷಾ ವರದಿ ಹಾಗೂ ಐಸೋಟೋಪ್ ವಿಶ್ಲೇಷಣೆಯ ಫಲಿತಾಂಶಗಳನ್ನು ಸಂಯೋಜಿಸಿ ಮೃತರ ಗುರುತು ಪತ್ತೆಹಚ್ಚಲು ಎಸ್ಐಟಿ ಯೋಜನೆ ರೂಪಿಸಿದೆ.
ಎಂಟು ಕುಟುಂಬಗಳ ರಕ್ತದ ಮಾದರಿ ಸಂಗ್ರಹ :
ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾಣೆಯಾದವರ ಮಾಹಿತಿಯನ್ನು ಸಂಗ್ರಹಿಸಿರುವ ತನಿಕಾ ತಂಡ ಈಗಾಗಲೇ ಎಂಟು ಕುಟುಂಬಗಳ ಸದಸ್ಯರ ರಕ್ತದ ಮಾದರಿಯನ್ನು ಪಡೆದುಕೊಂಡಿದೆ. ಡಿಎನ್ಎ ಹೋಲಿಕೆ ಮೂಲಕ ಅಸ್ತಿಪಂಜರಗಳು ಕಾಣೆಯಾದವರೊಂದಿಗೆ ಸಂಬಂಧ ಹೊಂದಿದೆಯೇ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ.
ಧರ್ಮಸ್ಥಳ ಬುರುಡೆಗಳ ಪ್ರಕರಣದಲ್ಲಿ ಸಂಭವನೀಯ ಷಡ್ಯಂತ್ರದ ಬಗ್ಗೆ ಕಲಿಕೆ ನಡೆಯುತ್ತಿರುವುದು ಒಂದು ಭಾಗವಾದರೆ, ಪತ್ತೆಯಾದ ಬುರುಡೆಗಳು ಮತ್ತು ಅಸ್ಥಿಪಂಜರಗಳ ನಿಖರ ಮೂಲ ಪತ್ತೆ ಹಚ್ಚುವುದು ಮತ್ತೊಂದು ಪ್ರಮುಖ ಸವಾಲಾಗಿದೆ. ಅಂತಿಮ ವರದಿಯಲ್ಲಿ ಕನಿಷ್ಟ ಈ ಅವಶೇಷಗಳು ಯಾವ ಪ್ರದೇಶದ ವ್ಯಕ್ತಿಗಳಿಗೆ ಸೇರಿದ್ದವು ಎಂಬ ಮಾಹಿತಿಯನ್ನು ದಾಖಲಿಸುವ ಗುರಿ ಎಸ್ಐಟಿ ಹೊಂದಿದೆ ಎಂದು ತಿಳಿದುಬಂದಿದೆ.
ಐಸೋಟೋಪ ಪರೀಕ್ಷೆ, ಡಿಎನ್ಎ ವಿಶ್ವವೇಷಣೆ ಮತ್ತು ನಾಪತ್ತೆಯಾದವರ ಮಾಹಿತಿಯ ಹೊಂದಾಣಿಕೆ ತನಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದಾಗಿದೆ. ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ಧರ್ಮಸ್ಥಳ ಬುರುಡೆ ಪ್ರಕರಣದ ರಹಸ್ಯ ಬಯಲಾಗುತ್ತದೆಯೇ ಎಂಬ ಕುತೂಹಲ ಇದೀಗ ಮತ್ತಷ್ಟು ಹೆಚ್ಚಿದೆ.
Also Read:
ಪ್ರಕಾಶ್ ರಾಜ್ ಗೆ ಸಂಕಷ್ಟ: 4 ಕಡೆ ವೋಟರ್ ಐಡಿ ಆರೋಪ; ಅರೆಸ್ಟ್ ವಾರಂಟ್