<?= $pageTitle ?>
Logo
ಮುಖಪುಟ ಓದುವುದು ಕೇಳು
Business

ಸಿಂಗರ್ ಬಾಂಡ್ ವಿತರಣೆಗೆ ಪುರಸಭೆ ₹100 ಕೋಟಿ ಪ್ರೋತ್ಸಾಹ ಧನ ಘೋಷಣೆ

ಸಿಂಗರ್ ಬಾಂಡ್  ವಿತರಣೆಗೆ ಪುರಸಭೆ ₹100 ಕೋಟಿ ಪ್ರೋತ್ಸಾಹ ಧನ ಘೋಷಣೆ
Summary: ಪುರಸಭೆ ಸಿಂಗಲ್ ಬಾಂಡ್ ವಿತರಣೆಗೆ ₹100 ಕೋಟಿ ಪ್ರೋತ್ಸಾಹ ಧನ: ಸ್ಥಳೀಯ ಬಂಡವಾಳ ಹೂಡಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಪ್ರೇರಣೆ
Belagavi News:
ಪುರಸಭೆಗಳಿಂದ ಸಿಂಗಲ್ ಬಾಂಡ್ ವಿತರಣೆಗೆ ₹ 100 ಕೋಟಿ ಪ್ರೋತ್ಸಾಹ ಧನ ಘೋಷಿಸಲಾಗಿದೆ. ಈ ಯೋಜನೆ ಸ್ಥಳೀಯ ಬಂಡವಾಳ ಹೂಡಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಪುರಸಭೆಗಳ ಆರ್ಥಿಕ ಸ್ಥಿತಿಯನ್ನು ಬಲ ಪಡಿಸಲು ಉದ್ದೇಶಿಸಿದೆ. ಹೂಡಿಕೆದಾರರು ಮತ್ತು ಸಾರ್ವಜನಿಕರಿಗೆ ಇದು ಹೊಸ ಆರ್ಥಿಕ ಅವಕಾಶಗಳನ್ನು ನೀಡಲಿದೆ.

ಕೇಂದ್ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಪ್ರಕಟಿಸಿರುವ ಪುರಸಭೆ ನಿಗಮಗಳ ಸಿಂಗಲ್ ಬಾಂಡ್ ವಿತರಣೆಗೆ ₹ 100 ಕೋಟಿ ಪ್ರೋತ್ಸಾಹ ಧನ ನೀಡುವ ಯೋಜನೆ ರೂಪಿಸಲಾಗಿದೆ.

ಈ ಯೋಜನೆಯು ಪುರಸಭೆಗಳಿಗೆ ಮೂಲಸೌಕರ್ಯ ಅಭಿವೃದ್ಧಿ ಬಂಡವಾಳ ಹೂಡಿಕೆ ಮತ್ತು ಆರ್ಥಿಕ ಸ್ಥಿರತೆಯನ್ನು ಬಳಪಡಿಸುವ ಪ್ರಮುಖ ಉಪಕರಣವಾಗಲಿದೆ ಸಿಂಗಲ್ ಬಾಂಡ್ ವಿತರಣೆಯ ಮೂಲಕ ಸ್ಥಳೀಯ ಸಂಸ್ಥೆಗಳು ತಮ್ಮ ಹಣಕಾಸು ವ್ಯವಸ್ಥೆಯನ್ನು ಸುಧಾರಣೆ ಮಾಡಿ ಸಾರ್ವಜನಿಕ ಯೋಜನೆಗಳಿಗೆ ಹೆಚ್ಚಿನ ಹೂಡಿಕೆಗಳನ್ನು ತರುವ ಸಾಧ್ಯವಾಗುತ್ತದೆ.
ಹೂಡಿಕೆದಾರರು ಈ ಬಾಂಡ್ ಯೋಜನೆ ಮೂಲಕ ಸ್ಥಳೀಯ ಅಭಿವೃದ್ಧಿ ಯೋಜನೆಗಳಲ್ಲಿ ಭಾಗವಹಿಸಲು ಅವಕಾಶ ಪಡೆಯುತ್ತಾರೆ. ಹಣಕಾಸು ಸಚಿವರು ಈ ಘೋಷಣೆಯ ಪುರುಷ್ಠಾನಗಳ ಆರ್ಥಿಕ ಸಬಲೀಕರಣ ಮತ್ತು ಶಹರಿ ಅಭಿವೃದ್ಧಿಗೆ ಪ್ರಮುಖ ಪ್ರೇರಣೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ 2026 27ರ ಬಜೆಟ್ಟಿನಲ್ಲಿ ಪ್ರಸ್ತಾಪಿಸಿದು, ಪುರಸಭೆ ನಿಗಮಗಳು ನೀಡುವ 1,000 ಕೋಟಿ ರೂ. ಗಿಂತ ಅಧಿಕ ಮೊತ್ತದ ಸಿಂಗಲ್ ಬಾಂಡ್ ವಿತರಿಸಲು 100 ಕೋಟಿ ರೂ. ಪ್ರೋತ್ಸಾಹ ಧನ ನೀಡಲಾಗುವುದೆಂದು ತಿಳಿಸಿದರು.
ಈ ಯೋಜನೆಯು ಪುರಸಭೆಗಳ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸ್ಥಳೀಯ ಹೂಡಿಕೆಗಳ ಪ್ರೇರಣೆಗೆ ಪ್ರಮುಖವಾಗಲಿದೆ.
ಸರ್ಕಾರದ ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳನ್ನು ಬಲಪಡಿಸುವ ಭಾಗವಾಗಿ ಆರ್ ಇ ಸಿ ಲಿಮಿಟೆಡ್ (ಹಿಂದೆ ಗ್ರಾಮೀಣ ವಿದ್ಯುಧಿಕರಣ ನಿಗಮ) ಮತ್ತು ಪವರ್ ಫೈನಾನ್ಸ್ ಕಾರ್ಪೊರೇಷನ್ ಪುನಾರಚನೆ ಮಾಡಲಾಗುವುದು ಎಂದು ಹಣಕಾಸು ಸಚಿವೆ ಘೋಷಿಸಿದರು.

ಅಲ್ಲದೆ, ವಿಕಸಿತ ಭಾರತಕ್ಕಾಗಿ ಬ್ಯಾಂಕಿಂಗ್' ಕುರಿತಂತೆ ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸುವ ಬಗ್ಗೆ ನಿರ್ಮಲ ಸೀತಾರಾಮನ್ ಪ್ರಸ್ತಾಪಿಸಿದರು ದೇಶದ ಬ್ಯಾಂಕಿಂಗ್ ವಲಯವು ಬಲವಾದ ಬ್ಯಾಲೆನ್ಸ ಶೀಟ್ ಮತ್ತು ಐತಿಹಾಸಿಕ ಅಧಿಕ ಲಾಭವನ್ನು ಸಾಧಿಸಿದ್ದು ಭವಿಷ್ಯದ ಆರ್ಥಿಕ ಗುರಿಗಳನ್ನು ತಲುಪಲು ಸಿದ್ಧವಾಗಿದೆ ಎಂದವರು ತಿಳಿಸಿದ್ದಾರೆ.

ವಿದೇಶಿ ವಿನಿಮಯದ ನಿರ್ವಹಣೆ ಸಾಲೇತರ್ ಸಾಧನಗಳ ನಿಯಮಗಳನ್ನು ಪರಿಶೀಲಿಸುವ ಬಗ್ಗೆ ಪ್ರಸ್ತಾಪಿಸಿದ ಸಚಿವರು ದೇಶದಲ್ಲಿ ಸುಮಾರು 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ ಎಂದು ಒತ್ತಿ ಹೇಳಿದರು.

ಇನ್ನಷ್ಟು ಓದಿರಿ:
ಹೈಸ್ಪೀಡ್ ರೈಲು ಕಾರಿಡಾರ್: 7 ಮಾರ್ಗಗಳಲ್ಲಿ ಭಾರತಕ್ಕೆ ಬಂಪ್, ಸೀತಾರಾಮನ್ ಘೋಷಣೆ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online