<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಉದ್ದವ್ ಬಣಕ್ಕೆ ಹೊಸ ಸಂಕಷ್ಟ? ಸ್ಪೀಕರ್ ಗೆ ಪತ್ರ ಬರೆದ ಯುಬಿಟಿ

ಉದ್ದವ್ ಬಣಕ್ಕೆ ಹೊಸ ಸಂಕಷ್ಟ? ಸ್ಪೀಕರ್ ಗೆ ಪತ್ರ ಬರೆದ ಯುಬಿಟಿ
Summary: There are discussions that the Uddhav Thackeray-led Shiv Sena (UBT) faction is facing another rebellion. In this context, the party has written a letter to the Lok Sabha Speaker and has decided to draw attention to the actions and words of some MPs. This move, which has led to a new development in Maharashtra politics, has created curiosity and is likely to affect the political equations in the coming days.

belagavi news :

ಮುಂಬೈ, ಜೂನ್ 17: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಬಂಡಾಯದ ಭೀತಿ ತಲೆದೋರಿದ ಬೆನ್ನಲ್ಲೇ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಮಹತ್ವದ ರಾಜಕೀಯ ನಡೆ ಕೈಗೊಂಡಿದೆ. ಪಕ್ಷದ ಕೆಲ ಸಂಸದರು ಬಣ ಬದಲಾಯಿಸುವ ಸಾಧ್ಯತೆಗಳ ಕುರಿತು ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲೇ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ UBT ಔಪಚಾರಿಕ ಪತ್ರ ಬರೆದು ಸಂಸತ್ತಿನಲ್ಲಿ ತಮ್ಮನ್ನೇ ಶಿವಸೇನೆಯ ಅಧಿಕೃತ ರಾಜಕೀಯ ಪಕ್ಷವೆಂದು ಗುರುತಿಸಬೇಕೆಂದು ಒತ್ತಾಯಿಸಿದೆ. ಈ ಬೆಳವಣಿಗೆ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದ್ದು ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತಷ್ಟು ಬಯಲಾಗುವ ಸೂಚನೆ ನೀಡಿದೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಬಂಡಾಯದ ಕಾವು ಹೆಚ್ಚಾಗಿರುವ ಬೆನ್ನಲ್ಲೇ,ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ UBT ಎಚ್ಚರಿಕೆಯ ರಾಜಕೀಯ ನಡೆ ಕೈಗೊಂಡಿದೆ. ಪಕ್ಷದ ಕೆಲ ಸಂಸದರು ಬಣ ಬದಲಾಯಿಸುವ ಸಾಧ್ಯತೆಗಳ ನಡುವೆ, ಲೋಕಸಭಾ ಸ್ಪೀಕರ್ ಗೆ ಪತ್ರ ಬರೆದಿರುವ UBT, ಬಂಡಾಯ ಸಂಸದರಿಗೆ ಯಾವುದೇ ರೀತಿಯ ಮಾನ್ಯತೆ ಅಥವಾ ಸ್ಥಾನಮಾನ ನೀಡಬಾರದು ಎಂದು ಒತ್ತಾಯಿಸಿದೆ. ಅಲ್ಲದೆ, ಪಕ್ಷಾಂತರಕ್ಕೆ ಯತ್ನಿಸಿದರೆ ಅಂಟಿ -ಡಿಫೆಕ್ಷನ್ ಕಾನೂನಿನಡಿ ಕ್ರಮ ಕೈಗೊಳ್ಳಲು ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದೆ. 'ಆಪರೇಷನ್ ಟೈಗರ್' ಕುರಿತ ಊಹಾಪೋಹಗಳು ಜೋರಾಗಿರುವ ಸಂದರ್ಭದಲ್ಲೇ, ಜೂನ್ 19 ಯೊಳಗೆ ಸಂಭವಿಸಬಹುದಾದ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು UBT ಈ ಮಹತ್ವದ ಹೆಜ್ಜೆ ಇಟ್ಟಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಸ್ಪೀಕರ್ ಗೆ ಬರೆದ ಪತ್ರದಲ್ಲಿ ಏನಿದೆ?

Sponsored

ಶಿವಸೇನೆ (UBT) ಬಣದಿಂದ ಸಂಭವನೀಯ ಬಂಡಾಯದ ಸುಳಿವುಗಳ ನಡುವೆ, ಪಕ್ಷದ ಹಿರಿಯ ಸಂಸದ ಹಾಗೂ ಸಂಸದೀಯ ನಾಯಕ ಅರವಿಂದ್ ಸಾವಂತ್ ಲೋಕಸಭಾ ಸ್ಪೀಕರ್ ಗೆ ಮಹತ್ವದ ಪತ್ರ ಸಲ್ಲಿಸಿದ್ದಾರೆ. ಈ ಪತ್ರದಲ್ಲಿ ಶಿವಸೇನೆ (UBT) ಯಿಂದ ಬೇರ್ಪಡುವ ಯಾವುದೇ ಬಂಡಾಯ ಗುಂಪು ಅಥವಾ ಸ್ವತಂತ್ರ ಬಣಕ್ಕೆ ಲೋಕಸಭೆಯಲ್ಲಿ ಪ್ರತ್ಯೇಕ ಗುರುತು, ಸ್ಥಾನಮಾನ ಅಥವಾ ವಿಶೇಷ ಸೌಲಭ್ಯಗಳನ್ನು ನೀಡಬಾರದು ಎಂದು ಸ್ಪಷ್ಟವಾಗಿ ಮನವಿ ಮಾಡಲಾಗಿದೆ.

ಇನ್ನೂ, ಬಂಡಾಯ ಸಂಸದರು ಯಾವುದೇ ವಿಶೇಷ ಮಾನ್ಯತೆ ಅಥವಾ ಸ್ಥಾನಮಾನಕ್ಕಾಗಿ ಸ್ಪೀಕರ್ ಅವರನ್ನು ಸಂಪರ್ಕಿಸಿದರೆ, ಅಂತಹ ಬೇಡಿಕೆ ಕುರಿತು ನಿರ್ಧಾರ ಕೈಗೊಳ್ಳುವ ಮೊದಲು ಮೂಲ ಶಿವಸೇನೆ (UBT) ಪಕ್ಷಕ್ಕೆ ತನ್ನ ವಾದ ಮಂಡಿಸಲು ಸಂಪೂರ್ಣ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ, ಅಗತ್ಯವಿದ್ದರೆ ಸಂವಿಧಾನದ 10ನೇ ವೇಳಾಪಟ್ಟಿಯಡಿ ಜಾರಿಯಲ್ಲಿರುವ ಪಕ್ಷಾಂತರ ವಿರೋಧಿ ಕಾಯ್ದೆ ( Anti - Defection Law) ಅನ್ವಯ ಕಾನೂನು ಕ್ರಮ ಕೈಗೊಳ್ಳುವ ಹಕ್ಕನ್ನು ಪಕ್ಷ ಕಾಯ್ದಿರಿಸಿಕೊಂಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಬೆಳವಣಿಗೆ ಮಹಾರಾಷ್ಟ್ರ ರಾಜಕೀಯದಲ್ಲಿ ಬಂಡಾಯದ ರೀತಿ ಮತ್ತಷ್ಟು ಗಾಢವಾಗುತ್ತಿರುವ ಸೂಚನೆ ನೀಡಿದೆ.

ಜೂನ್ 19ರ ಶಿವಸೇನೆ ಸಂಸ್ಥಾಪನಾ ದಿನದಂದೇ ಪಕ್ಷಾಂತರ?

ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆಯೊಂದು ರೂಪುಗೊಳ್ಳುತ್ತಿರುವ ಸೂಚನೆಗಳು ಸಿಕ್ಕಿವೆ. ಮೂಲಗಳ ಪ್ರಕಾರ,ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಯ ಏಳು ಸಂಸದರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಪಕ್ಷದೊಳಗಿನ ಅಸಮಾಧಾನ ಮತ್ತೊಮ್ಮೆ ಬಹಿರಂಗವಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ.

Sponsored

ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶಮುಖ್, ನಾಗೇಶ್ ಪಾಟೀಲ್ ಅಷ್ಟಿಕರ್, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕ್ಚೌರೆ ಹಾಗೂ ಸಂಜಯ್ ಜಾಧವ್ ಸೇರಿದಂತೆ ಹಲವು ಸಂಸದರು ದೆಹಲಿಯಲ್ಲಿ ಸಂಸತ್ ಶ್ರೀಕಾಂತ್ ಸಿಂಧೆ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಈ ಸಭೆ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಹುಟ್ಟಿಸಿದೆ.

ಮೂಲಗಳ ಪ್ರಕಾರ, ಬಂಡಾಯಕ್ಕೆ ಸಜ್ಜಾಗಿರುವ ಸಂಸದರು ಮೊದಲ ಹಂತದಲ್ಲಿ ಲೋಕಸಭೆಯಲ್ಲಿ ಪ್ರತ್ಯೇಕ ಬಣ ರಚಿಸುವ ಸಾಧ್ಯತೆ ಇದೆ. ಅದರ ಬಳಿಕ ಜೂನ್ 19ರಂದು ನಡೆಯಲಿರುವ ಶಿವಸೇನೆಯ ಸಂಸ್ಥಾಪನಾ ದಿನದಂದೇ ಅಧಿಕೃತವಾಗಿ ಏಕನಾಥ್ ಶಿಂಧೆ ಬಣದೊಂದಿಗೆ ವಿಲೀನಗೊಳ್ಳುವ ರಾಜಕೀಯ ತಂತ್ರ ರೂಪಿಸಲಾಗಿದೆ ಎನ್ನಲಾಗುತ್ತಿದೆ. ಈ ಬೆಳವಣಿಗೆ ನಿಜವಾದರೆ, ಉದ್ದವ್ ಬಣಕ್ಕೆ ಇದು ಮತ್ತೊಂದು ದೊಡ್ಡ ರಾಜಕೀಯ ಆಘಾತವಾಗುವ ಸಾಧ್ಯತೆ ಇದೆ.

ಮಹಾರಾಷ್ಟ್ರದಲ್ಲಿ ಬಿರುಸುಗೊಂಡ 'ಆಪರೇಷನ್ ಟೈಗರ್ ' ಉದ್ದವ್ ಬಣಕ್ಕೆ ಮತ್ತೊಂದು ದೊಡ್ಡ ಸಂಕಷ್ಟ?

ಮಹಾರಾಷ್ಟ್ರ ರಾಜಕೀಯದಲ್ಲಿ 'ಆಪರೇಷನ್ ಟೈಗರ್' ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇದರ ಪರಿಣಾಮ ಕೇವಲ ಸಂಸದರ ಮಟ್ಟಕ್ಕೆ ಸೀಮಿತವಾಗಿಲ್ಲ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಯ ಹಲವು ಶಾಸಕರು ಕೂಡ ಪ್ರತಿಸ್ಪರ್ಧಿ ಶಿಬಿರದೊಂದಿಗೆ ಸಂಪರ್ಕದಲ್ಲಿದ್ದು, ಪಕ್ಷದೊಳಗಿನ ಅಸಮಾಧಾನ ಹೊಸ ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ.

Sponsored

ಆಡಳಿತಾರೂಢ ಮೈತ್ರಿಕೂಟ ಈ ರಾಜಕೀಯ ಕಾರ್ಯಾಚರಣೆಗೆ 'ಆಪರೇಷನ್ ಟೈಗರ್' ಎಂಬ ಸಂಕೇತನಾಮ ನೀಡಿದೆ ಎನ್ನಲಾಗಿದ್ದು, ಇದು ಮಹಾರಾಷ್ಟ್ರದ ರಾಜಕೀಯ ಸಮೀಕರಣಗಳನ್ನೇ ಬದಲಿಸುವ ಶಕ್ತಿಯನ್ನು ಹೊಂದಿದೆ ಎಂಬ ಚರ್ಚೆಗಳು ಜೋರಾಗಿವೆ. ಸಂಸದರ ಬಳಿಕ ಶಾಸಕರ ವಲಯದಲ್ಲೂ ಚಟುವಟಿಕೆಗಳು ಹೆಚ್ಚಾಗಿರುವುದು ಉದ್ದವ್ ಬಣದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಬೆಳವಣಿಗೆಗಳ ನಡುವೆ ಪಕ್ಷದ ಶಾಸಕರು ಕೈಕೊಡುವ ಸಾಧ್ಯತೆಯನ್ನು ತಡೆಯಲು ಉದ್ದವ್ ಠಾಕ್ರೆ ಅಲರ್ಟ್ ಆಗಿದ್ದಾರೆ. ಇದೇ ಕಾರಣಕ್ಕೆ ಜೂನ್ 22ರಂದು ಸಂಜೆ 4 ಗಂಟೆಗೆ ಮುಂಬೈನ 'ಶಿವಾಲಯ' ಪಕ್ಷದ ಕಚೇರಿಯಲ್ಲಿ ಎಲ್ಲಾ ಶಾಸಕರ ತುರ್ತು ಸಭೆ ಕರೆದಿದ್ದು, ಮುಂದಿನ ರಾಜಕೀಯ ತಂತ್ರ ಹಾಗೂ ಪಕ್ಷದ ಏಕತೆ ಕುರಿತು ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ಸಭೆ ಮಹಾರಾಷ್ಟ್ರ ರಾಜಕೀಯದ ಮುಂದಿನ ದಿಕ್ಕನ್ನು ನಿರ್ಧರಿಸುವ ಮಹತ್ವದ ಘಟ್ಟವಾಗಬಹುದು.

Also Read:

ವಿದ್ಯಾರ್ಥಿಗಳಿಗೆ ಕಿರುಕುಳ ಆರೋಪ: ಚಿಕ್ಕೋಡಿಯಲ್ಲಿ ಶಿಕ್ಷಕನ ಮೇಲೆ ಪೋಷಕರ ಆಕ್ರೋಶ, ಅಮಾನತು

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online