<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಆರ್ ಜಿ ಕರ್ ಸಂತ್ರಸ್ತೆ ತಾಯಿಗೆ ಪಶ್ಚಿಮ ಬಂಗಾಳದಲ್ಲಿ ಅದ್ಭುತ ಜಯ

ಆರ್ ಜಿ ಕರ್ ಸಂತ್ರಸ್ತೆ  ತಾಯಿಗೆ ಪಶ್ಚಿಮ ಬಂಗಾಳದಲ್ಲಿ ಅದ್ಭುತ ಜಯ
Summary: This election was fought from the perspective of citizens against the system instead of Didi against Modi, and according to BJP leaders in West Bengal, the party has got a mandate accordingly.

belagavi news :

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪಾಣಿಹಟಿ ಕ್ಷೇತ್ರದಲ್ಲಿ ರಾಜಕೀಯವಾಗಿ ಗಮನಾರ್ಹ ತಿರುವಾಗಿ ಕಾಣುತ್ತಿದೆ. ಆರ್ ಜಿ ಕರ್ ಏ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೂಲಕ ಬಿಜೆಪಿ ಸಾಮಾನ್ಯ ಚುನಾವಣಾ ನರೇಟಿವ್ ಅನ್ನು ಬದಲಾಯಿಸಲು ಪ್ರಯತ್ನಿಸಿದೆ.

ಸಾಮಾನ್ಯವಾಗಿ ಬೀದಿ ವಿರುದ್ಧ ಮೋದಿ ಎಂಬ ರಾಜಕೀಯ ಹೋರಾಟವಾಗಿ ಕಾಣುತ್ತಿದ್ದ ಸ್ಪರ್ಧೆಯನ್ನು,"ನಾಗರಿಕರು ವ್ಯವಸ್ಥೆ"ಎಂಬ ಭಾವನಾತ್ಮಕ ಹಾಗೂ ಸಾಮಾಜಿಕ ಹೋರಾಟವಾಗಿ ರೂ ಪಾಂತರಿಸಲಾಗಿದೆ. ಇದರಿಂದ ಮತದಾರರ ಮನಸ್ಸಿನಲ್ಲಿ ವ್ಯವಸ್ಥೆಯ ವಿರುದ್ಧ ಅಸಮಾಧಾನವನ್ನು ರಾಜಕೀಯ ಶಕ್ತಿಯಾಗಿ ಬಳಸಿಕೊಳ್ಳುವ ಪ್ರಯತ್ನವಾಗಿ ಗೋಚರಿಸುತ್ತದೆ.

2011 ರಿಂದ ಟಿಎಂಸಿಯ ಭದ್ರಕೋಟೆಯಾಗಿದ್ದ ಪಾಣಿಹಟಿ ಕ್ಷೇತ್ರದಲ್ಲಿ 87,975 ಮತಗಳನ್ನು ಪಡೆದು 28,836 ಮತಗಳ ಅಂತರದಿಂದ ಗೆಲುವು ಸಾಧಿಸುವುದು, ಈ ತಂತ್ರ ಯಶಸ್ವಿಯಾಗಿ ದೆ ಎಂಬುದನ್ನು ಸೂಚಿಸುತ್ತದೆ. ವಿಶೇಷವಾಗಿ, ವ್ಯಕ್ತಿಗತ ದುಃಖ ಮತ್ತು ನ್ಯಾಯಕ್ಕಾಗಿ ಹೋರಾಟವನ್ನು ರಾಜಕೀಯ ವೇದಿಕೆಗೆ ತರುವ ಮೂಲಕ ಮತದಾರರೊಂದಿಗೆ ಭಾವನಾತ್ಮಕ ಸಂಬಂಧ ಸಾಧಿಸಲಾಗಿದೆ. ಒಟ್ಟಾರೆ, ಈ ಫಲಿತಾಂಶ ವು ಚುನಾವಣಾ ರಾಜಕೀಯದಲ್ಲಿ ಕಥನ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಮತ್ತೆ ಒತ್ತಿ ಹೇಳುತ್ತದೆ.

Sponsored

ಪಶ್ಚಿಮ ಬಂಗಾಳದ ಪಾಣಿಹಟಿ ಕ್ಷೇತ್ರದಲ್ಲಿ ನಡೆದ ಚುನಾವಣೆಯು ಈ ಬಾರಿ ಸಾಮಾನ್ಯ ರಾಜಕೀಯ ಸ್ಪರ್ಧೆಯನ್ನು ಮೀರಿ ಸಾಮಾಜಿಕ ನ್ಯಾಯದ ಸಂಕೇತವಾಗಿ ಪರಿಣಮಿಸಿದೆ. ಆರ್ ಜಿ ಕರ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿರುವುದು, ಜನಾಭಿಪ್ರಾಯದ ಸ್ಪಷ್ಟ ಸಂದೇಶವೆಂದು ವ್ಯಾಖ್ಯಾನಿಸಲಾಗುತ್ತಿದೆ. ಪಾಣಿಹಟಿ ಕ್ಷೇತ್ರದಲ್ಲಿ ಪ್ರಚಾರದ ಸಂದರ್ಭಗಳು ಉದ್ದೀನತೆಯಿಂದ ಕೂಡಿದ್ದವು ಎಂಬ ಆರೋಪಗಳು ಕೇಳಿ ಬಂದಿವೆ. ಮತದಾನದ ದಿನ ಕೆಲ ಟಿಎಂಸಿ ಕಾರ್ಯಕರ್ತರು ತಮಗೆ ಬೆದರಿಕೆ ಹಾಕಿದರು ಎಂದು ಅವರು ಆರೋಪಿಸಿದರೆ, ಇನ್ನೊಂದೆಡೆ ಟಿಎಂಸಿ ನಾಯಕರು ಅವರ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡಿದರು. ಚುನಾವಣಾ ಪ್ರಚಾರದ ವೇಳೆ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕೆಲವು ಹೇಳಿಕೆಗಳನ್ನು ಉಲ್ಲೇಖಿಸಿ, ಟೀಕಿಸಿದರು.

ಮಹಿಳೆಯರ ಸುರಕ್ಷತೆ ಕುರಿತಾಗಿ ಸರ್ಕಾರದ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಅವರು, "ಈ ಬಾರಿ ಬಂಗಾಳ ಪ್ರತಿಕ್ರಿಸುತ್ತದೆ"ಎಂದು ಅಭಿಪ್ರಾಯ ಪಟ್ಟಿದ್ದರು. ಈ ಎಲ್ಲಾ ರಾಜಕೀಯ ಗದ್ದಲದ ನಡುವೆಯೂ, ಅಂತಿಮ ಫಲಿತಾಂಶವನ್ನು ಹಲವಾರು"ನ್ಯಾಯಕ್ಕಾಗಿ ಜಡರ ಅಭಿಪ್ರಾಯ"ಎಂದು ನೋಡುತ್ತಿದ್ದಾರೆ. ವ್ಯಕ್ತಿಗತ ನೋವು ಮತ್ತು ನ್ಯಾಯದ ಬೇಡಿಕೆಯನ್ನು ರಾಜಕೀಯ ವೇದಿಕೆಯಲ್ಲಿ ಪ್ರತಿಬಿಂಬಿಸಿದ ಈ ಘಟನೆ, ಮತದಾರರ ಮನಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಸಂತ್ರಸ್ತೆಯ ತಾಯಿಯ ಪ್ರತಿಯೊಂದು ಚುನಾವಣಾ ಸಮಾವೇಶವು ಸಾಮಾನ್ಯ ರಾಜಕೀಯ ಮಾತುಕತೆಗಳಿಗಿಂತ ವಿಭಿನ್ನವಾಗಿ, ಆರ್ ಜಿ ಕರ್ ದುರಂತದ ನೆನಪನ್ನು ಜೀವಂತವಾಗಿಟ್ಟಿತು. "ನನ್ನ ಮಗಳಿಗೆ ಆಗಿದ್ದ ಅನ್ಯಾಯ ಯಾರಿಗಾದರು ಸಂಭವಿಸಬಹುದು" ಎಂಬ ಅವರ ಮಾತುಗಳು ಬಂಗಾಳದ ಮನೆ ಮನೆಗೂ ತಲುಪಿದ್ದು, ಜನರ ಮನಸ್ಸಿನಲ್ಲಿ ಗಾಡ ಪ್ರತಿ ಧ್ವನಿಯನ್ನು ಮೂಡಿಸಿತು. ಈ ಪ್ರಕರಣ ಕ್ರಮ ನಮ್ಮ ಮಹಿಳಾ ಸುರಕ್ಷತೆ ಕುರಿತ ರಾಜ್ಯ ವ್ಯಾಪಿ ಚರ್ಚೆಯಾಗಿ, ಜನಾಭಿಪ್ರಾಯ ಸಂಗ್ರಹಣೆಯಾಗಿ ರೂಪಾಂತರಗೊಂಡಿತು.

ಫಲಿತಾಂಶಕ್ಕೆ ಕೆಲವೇ ದಿನಗಳ ಮೊದಲು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ದಾಖಲೆ ಪ್ರಮಾಣದ 91.62% ಮತದಾನವು ಈ ವಿಚಾರ ತೀವ್ರತೆಯನ್ನು ತೋರಿಸಿತು . ಈ ಸಂದರ್ಭ ಸಂತ್ರಸ್ತೆ ತಾಯಿ ಆಡಳಿತ ಪಕ್ಷಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದರು. ಮಹಿಳೆಯರ ಸುರಕ್ಷತೆ ಕುರಿತಾಗಿ ಸರಕಾರದ ನಿರ್ಲಕ್ಷವನ್ನು ಅವರು ತೀವ್ರವಾಗಿ ಟೀಕಿಸಿ, ಬದಲಾವಣೆಗೆ ಜನರು ಸಜ್ಜಾಗಿದ್ದಾರೆ ಎಂಬ ಸಂದೇಶವನ್ನು ಒತ್ತಿ ಹೇಳಿದರು.

Sponsored

Also Read:

ಮರು ಎಣಿಕೆ ಡ್ರಾಮಾ : ಜೀವರಾಜ್ ಹೇಳಿಕೆ ರಾಜಕೀಯದಲ್ಲಿ ಸಂಚಲನ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online