Belagavi News :
ಆಭರಣ ಖರೀದಿಸಲು ಜ್ಯುವೆಲರಿ ಅಂಗಡಿಗೆ ಬಂದಿದ್ದ ಮಹಿಳೆಯೊಬ್ಬರು ನೀರೆಂದು ಭಾವಿಸಿ ಆ್ಯಸಿಡ್ ಸೇವಿಸಿ ಅಸ್ಪೆಕ್ಟಗೊಂಡಿರುವ ಅಪಘಾತಕಾರಿ ಘಟನೆ ಉತ್ತರ ಪ್ರದೇಶದ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಬಳಿಕ ಮಹಿಳೆಯನ್ನು ತಕ್ಷಣ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಮಾಹಿತಿಯ ಪ್ರಕಾರ, ಅರ್ಜುನ್ ನಗರ ಪ್ರದೇಶದ ನಿವಾಸಿಯಾಗಿರುವ ಮಹಿಳೆ ಶುಕ್ರವಾರ ಸಂಜೆ ಸ್ಥಳೀಯ ಆಭರಣ ಅಂಗಡಿಗೆ ಒಡವೆ ಖರೀದಿಸಲು ತೆರಳಿದ್ದರು. ಆಭರಣಗಳನ್ನು ವೀಕ್ಷಿಸುತ್ತಿದ್ದ ವೇಳೆ ಅವರಿಗೆ ತೀವ್ರ ಬಾಯಾರಿಕೆಯಾಗಿದ್ದು, ಅಂಗಡಿಯ ಸಿಬ್ಬಂದಿಯ ಬಳಿ ಕುಡಿಯಲು ನೀರು ಕೇಳಿದ್ದಾರೆ.
ಈ ವೇಳೆ ಸಿಬ್ಬಂದಿ ನೀಡಿದ ಬಾಟಲಿಯಿಂದ ಮಹಿಳೆ ಒಂದು ಶಿಪ್ ಕುಡಿದ ತಕ್ಷಣ ಬಾಯಿ ಮತ್ತು ಗಂಟಲಲ್ಲಿ ತೀವ್ರ ಉರಿ ಹಾಗೂ ನೋವು ಕಾಣಿಸಿಕೊಂಡಿದೆ. ಬಳಿಕ ಅದು ನೀರಲ್ಲ, ಆಭರಣಗಳನ್ನು ಸ್ವಚ್ಛಗೊಳಿಸಲು ಬಳಸುವ ಆ್ಯಸಿಡ್ ಎಂಬುವುದು ಗೊತ್ತಾಗಿದೆ. ತಕ್ಷಣ ಮಹಿಳೆ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ್ದು, ತಳದಲ್ಲಿದ್ದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡುತ್ತಿದ್ದು, ಅವರ ಆರೋಗ್ಯದ ಮೇಲೆ ನಿಗಾಹಿಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿಗೆ ಸಮೀಪದ ಸಿಹಿ ತಿನಿಸು ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಆ್ಯಸಿಡ್ ಬಾಟಲಿ ಅಲ್ಲಿಗೆ ಹೇಗೆ ಬಂತು ಮತ್ತು ನಿರ್ಲಕ್ಷಕ್ಕೆ ಕಾರಣವೇನು ಎಂಬ ಕುರಿತು ತನಿಖೆ ಮುಂದುವರೆದಿದೆ.
ಈ ಘಟನೆ ಅಪಾಯಕಾರಿ ರಾಸಾಯನಿಕಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿದ್ದು, ಸಾರ್ವಜನಿಕರು ಸಂಚರಿಸುವ ಸ್ಥಳಗಳಲ್ಲಿ ಇಂತಹ ವಸ್ತುಗಳನ್ನು ನೀರಿನ ಬಾಟಲಿಗಳಲ್ಲಿ ಇಡುವುದು ಎಷ್ಟು ಅಪಾಯಕಾರಿ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ನೀರೆಂದು ಭಾವಿಸಿ ಆ್ಯಸಿಡ್ ಕುಡಿದ ಮಹಿಳೆ - ಒಂದು ಸಿಪ್ ನಲ್ಲಿ ನರಕಯಾತನೆ, ಐಸಿಯುನಲ್ಲಿ ಚಿಕಿತ್ಸೆ :
ಆಭರಣ ಅಂಗಡಿಯಲ್ಲಿ ಗ್ರಾಹಕಿಗೆ ನೀಡಲಾಗಿದ್ದ ಬಾಟಲಿಯಲ್ಲಿ ನೀರಿನ ಬದಲು ಆ್ಯಸಿಡ್ ಇದ್ದ ಪರಿಣಾಮ ಮಹಿಳೆಯರೊಬ್ಬರು ಗಂಭೀರವಾಗಿ ಅಸ್ವಸ್ಥಗೊಂಡಿರುವ ಅಪಘಾತಕಾರಿ ಘಟನೆ ಉತ್ತರಪ್ರದೇಶದ ಹಾಗೂ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಮಹಿಳೆ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಆಭರಣ ಖರೀದಿಸಲು ಬಂದಿದ್ದ ಮಹಿಳೆ ಬಾಯಾರಿಕೆಯಿಂದ ಅಂಗಡಿಯ ಸಿಬ್ಬಂದಿಯ ಬಳಿ ಕುಡಿಯಲು ನೀರು ಕೇಳಿದ್ದರು. ಇದಕ್ಕಾಗಿ ಸಿಬ್ಬಂದಿ ಸಮೀಪದಲ್ಲಿದ್ದ ಸಿಹಿ ತಿನಿಸುಗಳ ಅಂಗಡಿಗೆ ತೆರಳಿ ನೀರಿನ ಬಾಟಲಿ ತಂದಿದ್ದರು. ಅಂಗಡಿ ಅವರು ಫ್ರಿಜ್ ನಲ್ಲಿದ್ದ ಸಂಪೂರ್ಣ ಫೀಲ್ ಮಾಡಲಾದ ಬಾಟಲಿಯೊಂದನ್ನು ನೀಡಿದ್ದು, ಅದನ್ನು ಮಹಿಳೆಗೆ ನೀಡಲಾಗಿದೆ.
ಬಾಟಲಿಯಲ್ಲಿದ್ದ ದ್ರವವನ್ನು ನೀರೆಂದು ಭಾವಿಸಿದ ಮಹಿಳೆ ಸ್ಟೀಲ್ ತೆರೆಯುತ್ತಿದ್ದಂತೆಯೇ ಒಂದು ಸಿಪ್ ಕುಡಿದಿದ್ದಾರೆ. ಆದರೆ ಅದು ನೀರಲ್ಲ, ಆ್ಯಸಿಡ್ ಆಗಿತ್ತು. ದ್ರವ ಗಂಟಲಿಗೆ ಇಳಿದ ತಕ್ಷಣವೇ ಮಹಿಳೆಗೆ ತೀವ್ರ ಉರಿ ಮತ್ತು ಅಸಹನಿಯ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಅಂಗಡಿಯಿಂದ ಹೊರಗೆ ಓಡಿ ಬಂದು ದ್ರವವನ್ನು ಉಗುಳಿದರೂ, ಆ್ಯಸಿಡ್ ನ ತೀವ್ರತೆಯಿಂದ ಬಾಯಿ ಮತ್ತು ಗಂಟಲಿನ ಒಳಭಾಗ ಗಂಭೀರವಾಗಿ ಸುಟ್ಟಿದೆ.
ಕೆಲವೇ ಕ್ಷಣಗಳಲ್ಲಿ ಮಹಿಳೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದು, ತಳದಲ್ಲಿದ್ದವರು ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಸದ್ಯ ಐಸಿಯುನಲ್ಲಿ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹಾಪುರ್ ಆ್ಯಸಿಡ್ ಪ್ರಕರಣ - ಸಿಹಿ ಅಂಗಡಿ ಮಾಲೀಕ ಪೊಲೀಸರ ವಶಕ್ಕೆ, ಬಾಟಲಿ ಬದಲಾವಣೆ ಬಗ್ಗೆ ತನಿಖೆ ಚುರುಕು :
ಆಭರಣದ ಅಂಗಡಿಯಲ್ಲಿ ನೀರೆಂದು ಭಾವಿಸಿ ಆಸಿಡ್ ಕುಡಿದ ಮಹಿಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ್ದಾರೆ. ಘಟನೆ ಬಳಿಕ ಪೊಲೀಸರು ಸಿಹಿ ತಿನಿಸುಗಳ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಪೊಲೀಸರು ಸಿಹಿ ಅಂಗಡಿಯಿಂದ ಕೆಲವು ಆಸಿಡ್ ಬಾಟಲಿಗಳನ್ನು ವಶಪಡಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಫ್ರಿಡ್ಜ್ ನಲ್ಲಿ ಇಡಲಾಗಿದ್ದ ಬಾಟಲಿಯೂ ಹೇಗೆ ನೀರಿನ ಬಾಟಲಿ ಎಂದು ನೀಡಲಾಯಿತು ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಭರಣ ಅಂಗಡಿ ಮಾಲೀಕ ಡೇನು, "ನಮಗೆ ತಿಳಿದ ಮಟ್ಟಿಗೆ ಬಾಟಲಿ ಸಂಪೂರ್ಣವಾಗಿ ಸೀಲ್ ಆಗಿತ್ತು. ಸಿಹಿ ಅಂಗಡಿಯವರು ನಿಂದ ತೆಗೆದುಕೊಟ್ಟ ಬಾಟಲಿಯನ್ನು ನಾವು ಹಾಗೆಯೇ ತಂದು ಗ್ರಾಹಕರಿಗೆ ನೀಡಿದ್ದೇವೆ" ಎಂದು ಹೇಳಿದ್ದಾರೆ.
ಫ್ರಿಡ್ಜ್ ನಲ್ಲಿ ನೀರಿನ ಬಾಟಲಿಗಳ ಪಕ್ಕದಲ್ಲಿ ಆಸಿಡ್ ಬಾಟಲ್ ಇಡಲಾಗಿತ್ತೇ ಅಥವಾ ಪ್ಯಾಕಿಂಗ್ ಹಂತದಲ್ಲಿ ಯಾವುದಾದರೂ ತಪ್ಪು ಸಂಭವಿಸುತ್ತೆ ಎಂಬ ಕೋನದಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳು ಸೇರಿದಂತೆ ಲಭ್ಯವಿರುವ ಸಾಕ್ಷಗಳನ್ನು ಪರಿಶೀಲಿಸಲಾಗುತ್ತಿದೆ.
ಈ ಘಟನೆ ಸಾರ್ವಜನಿಕ ಸ್ಥಳಗಳಲ್ಲಿ ರಾಸಾಯನಿಕ ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಬಾಟಲಿ ಗಳಲ್ಲಿರುವ ದ್ರವಗಳನ್ನು ಪರಿಶೀಲಿಸದೆ ಬಳಿಸುವುದರಿಂದ ಎಂತಹ ಗಂಭೀರ ಅಪಾಯ ಎದುರಾಗಬಹುದು ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ.