belagavi news :
ಬೆಂಗಳೂರು ಜೂನ್ 7: ಕಾಲೇಜು ಶುಲ್ಕ ಪಾವತಿಸುವ ಗಡುವಿನ ತುರ್ತು ಪರಿಸ್ಥಿತಿಯನ್ನು ಬಳಸಿಕೊಂಡು ಸೈಬರ್ ವಂಚಕರು (Cyber Crime) ವಿದ್ಯಾರ್ಥಿನಿಯೊಬ್ಬರ ಕುಟುಂಬಕ್ಕೆ 1 ಲಕ್ಷ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವಿದೇಶದಲ್ಲಿ ಎಂಬಿಬಿಎಸ್ ಓದುತ್ತಿರುವ ಯುವತಿಯ ಕಾಲೇಜು ಪ್ಲೀಸ್ ಕಟ್ಟುವ ಅಗತ್ಯವಿದೆ ಎಂದು ನಂಬಿಸಿ ವಂಚನೆ ನಡೆಸಲಾಗಿದೆ.
ಮಾಹಿತಿಯ ಪ್ರಕಾರ, ತುರ್ತು ಸಂದೇಶ ಅಥವಾ ನಕಲಿ ಸಂಪರ್ಕದ ಮೂಲಕ ಕುಟುಂಬವನ್ನು ಸಂಪರ್ಕಿಸಿದ ವಂಚಕರು, ಶುಲ್ಕವನ್ನು ತಕ್ಷಣ ಪಾವತಿಸದಿದ್ದರೆ ಸಮಸ್ಯೆ ಎದುರಾಗಬಹುದು ಎಂದು ಭಯ ಹುಟ್ಟಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ಕುಟುಂಬ ಹಣವನ್ನು ವರ್ಗಾವಣೆ ಮಾಡಿದ್ದು, ನಂತರ ಇದು ಸೈಬರ್ ವಂಚನೆ ಎಂದು ತಿಳಿದು ಬಂದಿದೆ.
ಈ ಘಟನೆ ಬಳಿಕ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ಇಂತಹ ತುರ್ತು ಸಂದರ್ಭದ ನೆಪದಲ್ಲಿ ನಡೆಯುವ ಆನ್ ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ವಿದೇಶದಲ್ಲಿ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಯ ಕಾಲೇಜು ಶುಲ್ಕ ಪಾವತಿಯ ಗಡುವಿನ ತುರ್ತು ಪರಿಸ್ಥಿತಿಯನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ಸೈಬರ್ ವಂಚಕರು ಒಂದು ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಸ್ನೇಹಿತೆಯ ಸೋಗಿನಲ್ಲಿ ಮಾತನಾಡಿದ ಮಹಿಳೆ ಈ ವಂಚನೆ ನಡೆಸಿದ್ದಾಳೆ ಎಂದು ತಿಳಿದುಬಂದಿದೆ.
ಮಾಹಿತಿಯ ಪ್ರಕಾರ, ವಂಚಕಿ ವಿದೇಶಿ ವಿನಿಮಯ ದರ ಕಡಿತವಿಲ್ಲದೆ ಹಣವನ್ನು ತಲುಪಿಸುವುದಾಗಿ ನಂಬಿಸಿ ವಿದ್ಯಾರ್ಥಿನಿಯ ಕುಟುಂಬವನ್ನು ಗೂಗಲ್ ಪ್ಲೇ ಮೂಲಕ ಹಣ ವರ್ಗಾವಣೆ ಮಾಡಲು ಪ್ರೇರೇಪಿಸಿದ್ದಾಳೆ. ಹಣ ಪಡೆದ ತಕ್ಷಣ ಆಯ್ಕೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು ನಂತರ ಸಂಪರ್ಕವೇ ಕಡಿತವಾಗಿದೆ.
ಈ ಘಟನೆ ಕುರಿತು ಸಿ.ಕೆ. ಅಚುಕಟ್ಟು ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸೈಬರ್ ವಂಚಕರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಇಂತಹ ತುರ್ತು ಪರಿಸ್ಥಿತಿ ನೆಪದಲ್ಲಿ ನಡೆಯುವ ಆನ್ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಮುಖ್ಯಾಂಶಗಳು;
ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯ ಕುಟುಂಬಕ್ಕೆ ವಂಚನೆ ಮಾಡಲಾಗಿದೆ.
ಪರೀಕ್ಷೆಯ ಶುಲ್ಕ ಪಾವತಿಸುವ ತುರ್ತು ಪರಿಸ್ಥಿತಿಯನ್ನು ಸೈಬರ್ ಖದೀಮರು ದುರುಪಯೋಗಪಡಿಸಿಕೊಂಡಿದ್ದಾರೆ.
ಸ್ನೇಹಿತೆಯ ಸೋಗಿನಲ್ಲಿ ಬಂದು ಒಂದು ಲಕ್ಷ ರೂಪಾಯಿ ಪಡೆದು ನಾಪತ್ತೆಯಾಗಿದ್ದಾರೆ.
ಪರೀಕ್ಷೆಯ ನೆಪ ಹೇಳಿ ವಂಚನೆ:
ಬೆಂಗಳೂರು ನಿವಾಸಿಯೊಬ್ಬರ ಸಂಬಂಧಿಕರ ಮಗಳು ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಪರೀಕ್ಷೆಗಳು ಹತ್ತಿರ ಬರುತ್ತಿದ್ದರಿಂದ ತುರ್ತಾಗಿ ಕಾಲೇಜಿ ಶುಲ್ಕ ಪಾವತಿಸ ಬೇಕಾಗಿತ್ತು. ನಿಗದಿತ ಸಮಯಕ್ಕೆ ಹಣ ಪಾವತಿಸದಿದ್ದರೆ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ಸಿಗುವುದಿಲ್ಲ ಎಂದು ವಿದ್ಯಾರ್ಥಿನಿ ತನ್ನ ಕುಟುಂಬಕ್ಕೆ ತಿಳಿಸಿದ್ದರು. ಈ ಸಂದರ್ಭದಲ್ಲಿ ಸೈಬರ್ ಅಪರಾಧಿಗಳು ತಮಗೆ ಪೂರಕವಾಗಿ ಬಳಸಿಕೊಂಡಿದ್ದಾರೆ.
ಸ್ನೇಹಿತೆಯ ಸೋಗಿನಲ್ಲಿ ವಂಚನೆ:
ಸ್ನೇಹಿತೆಯ ಸೋಗಿನಲ್ಲಿ ನಡೆದ ವಂಚನೆ ಪ್ರಕರಣದಲ್ಲಿ ಹಣ ವರ್ಗಾವಣೆಯ ತುರ್ತು ಪರಿಸ್ಥಿತಿಯಲ್ಲಿದ್ದ ನವೀನ್ ಕುಟುಂಬವನ್ನು "ದೀಪಿಕಾ" ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬಳು ಸಂಪರ್ಕಿಸಿದ್ದಾಳೆ.
ತಾನು ವಿದ್ಯಾರ್ಥಿನಿಯ ಸ್ನೇಹಿತ ಎಂದು ನಂಬಿಕೆ ಹುಟ್ಟಿಸಿದ ಆಕೆ, ವಿದೇಶಿ ವಿನಿಮಯ (ಫಾರೆಕ್ಸ್) ಮೂಲಕ ಹಣ ಕಳುಹಿಸುವಾಗ ಸಾಮಾನ್ಯವಾಗಿ ಆಗುವ ಶುಲ್ಕ ಕಡಿತವನ್ನು ತಪ್ಪಿಸುವುದಾಗಿ ಹೇಳಿದ್ದಾಳೆ. ಯಾವುದೇ ಕಡಿತವಿಲ್ಲದೆ ಸಂಪೂರ್ಣ ಮೊತ್ತವನ್ನು ವಿದ್ಯಾರ್ಥಿನಿಗೆ ತಲುಪಿಸಲು " ಪರ್ಯಾಯ ಮಾರ್ಗ" ಇದೆ ಎಂದು ಆಕೆ ನಂಬಿಸಿದ್ದಾಳೆ.
ಅದರಂತೆ, ತನ್ನ ಪರಿಚಿತರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿದರೆ ಹಣ ಸುರಕ್ಷಿತವಾಗಿ ಮತ್ತು ಸಂಪೂರ್ಣವಾಗಿ ತಲುಪುತ್ತದೆ ಎಂದು ಭರವಸೆ ನೀಡಿದ್ದಾಳೆ. ಈ ಮಾತುಗಳನ್ನು ನಂಬಿದ ಕುಟುಂಬವು ಸೂಚಿಸಿದ ಖಾತೆಯ ಹಣ ವರ್ಗಾವಣೆ ಮಾಡಿದೆ. ಆದರೆ ನಂತರ ಅದು ವಂಚನೆ ಎಂದು ತಿಳಿದುಬಂದಿದ್ದು, ಹಣ ಕಳೆದುಕೊಂಡಿದ್ದಾರೆ.
ದೂರು ದಾಖಲು:
ಆಕೆಯ ಮಾತನ್ನು ನಿಜವೆಂದು ನಂಬಿದ ನವೀನ್ ಮೇ 9 ರಂದು ಗೂಗಲ್ ಪೇ (Google pay) ಮೂಲಕ ಆಕೆ ನೀಡಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಒಟ್ಟು ₹1 ಲಕ್ಷವನ್ನು ವರ್ಗಾವಣೆ ಮಾಡಿದ್ದಾರೆ. ಹಣ ಖಾತೆಗೆ ಜಮಾ ಆದ ತಕ್ಷಣ ಮಹಿಳೆ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾಳೆ.
ನಂತರ ಎಷ್ಟೇ ಬಾರಿ ಸಂಪರ್ಕಿಸಲು ಪ್ರಯತ್ನಿಸಿದರು ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಈ ಸಂದರ್ಭದಲ್ಲಿ ತಮಗೆ ವಂಚನೆಯಾಗಿದೆ ಎಂಬುದು ನವೀನ್ ಕುಟುಂಬಕ್ಕೆ ಸ್ಪಷ್ಟವಾಗಿದೆ.
ಕುಟುಂಬದ ಸದಸ್ಯರೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರಣ ದೂರು ನೀಡಲು ಸ್ವಲ್ಪ ತಡವಾಗಿದೆ. ಬಳಿಕ ಹಣ ಕಳೆದುಕೊಂಡ ನವೀನ್ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Also Read:
ಸುಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಭಾವನಾತ್ಮಕ ಮಾತು: "ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ"