<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಮಮತಾ ಬ್ಯಾನರ್ಜಿಗೆ ಮತ್ತೊಂದು ಸಂಕಷ್ಟ: 20 ಟಿಎಂಸಿ ಸಂಸದರು ಎನ್ಡಿಎ ಕಡೆಗೆ?

ಮಮತಾ ಬ್ಯಾನರ್ಜಿಗೆ ಮತ್ತೊಂದು ಸಂಕಷ್ಟ: 20 ಟಿಎಂಸಿ ಸಂಸದರು ಎನ್ಡಿಎ ಕಡೆಗೆ?
Summary: A development that has created a stir in West Bengal politics has come to light. Reports that 20 TMC members have written a letter to the Lok Sabha Speaker are causing a stir in political circles.

belagavi news :

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸುವ ಬೆಳವಣಿಗೆ ನಡೆದಿದೆ ಎಂದು ವರದಿಗಳು ಹರದಾಡುತ್ತಿವೆ. ತೃಣ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಅಸಮಾಧಾನ ತೀವ್ರಗೊಂಡಿದ್ದು, ಪಕ್ಷದ ಸಂಸದೀಯ ಘಟಕದಲ್ಲಿಯೇ ದೊಡ್ಡ ಬಿರುಕು ಮೂಡಿರುವ ಸಾಧ್ಯತೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿದೆ.

ವಿಧಾನಸಭಾ ಚುನಾವಣೆಯ ಬಳಿಕ ಟಿಎಂಸಿ ಈಗಾಗಲೇ ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲೇ, 20 ಸದಸ್ಯರು ಲೋಕಸಭಾ ಸ್ಪೀಕರ್ ಗೆ ಪತ್ರ ಸಲ್ಲಿಸಿದ್ದಾರೆ ಎನ್ನುವ ಸುದ್ದಿ ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಈ ಪತ್ರದಲ್ಲಿ ಲೋಕಸಭೆಯಲ್ಲಿ ಪ್ರತ್ಯೇಕ ಬಣ ರಚಿಸುವ ಉದ್ದೇಶವನ್ನು ವ್ಯಕ್ತಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಉಪೇಂದ್ರ ಯಾದವ್ ಅವರ ನಿವಾಸದಲ್ಲಿ ನಡೆದ ಮಹತ್ವದ ಸಭೆಯ ಬಳಿಕ ಹಿರಿಯ ಟಿಎಂಸಿ ಸಂಸದ ಕಾಕೋಲಿ ಘೋಷ್ ದಾಸ್ತಿದಾರ್ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಸಲ್ಲಿಸಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಬೆಳವಣಿಗೆಯಿಂದ ಟಿಎಂಸಿ ನಾಯಕತ್ವದ ಮೇಲೆ ಒತ್ತಡ ಹೆಚ್ಚಾಗಿದ್ದು, ಪಕ್ಷದ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ.

Sponsored

ಇನ್ನೊಂದೆಡೆ, ಈ ಬೆಳವಣಿಗೆಗಳು ಎನ್ಎ ಡಿ ಗೆ ರಾಜಕೀಯ ಲಾಭ ತಂದುಕೊಡಬಹುದೇ ಎಂಬ ಚರ್ಚೆಯು ನಡೆಯುತ್ತಿದೆ. ಮಮತಾ ಬ್ಯಾನರ್ಜಿ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಿದ್ದ ಸಮಯದಲ್ಲೇ ಈ ಬೆಳವಣಿಗೆ ನಡೆದಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಆದರೆ, ಈ ರೀತಿಯ ವರದಿಗಳ ಕುರಿತು ಅಧಿಕೃತ ದೃಢೀಕರಣ ಮತ್ತು ಸಂಬಂಧಿತ ಪಕ್ಷಗಳ ಸ್ಪಷ್ಟ ಪ್ರತಿಕ್ರಿಯೆಗಾಗಿ ಕಾಯುವುದು ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಟಿಎಂಸಿಯ ಒಳ ರಾಜಕೀಯ ಯಾವ ತಿರುವು ಪಡೆಯಲಿದೆ ಎಂಬುದರ ಮೇಲೆ ರಾಷ್ಟ್ರೀಯ ರಾಜಕೀಯದ ಗಮನ ಕೇಂದ್ರೀಕೃತವಾಗಿದೆ.

ಸ್ಪೀಕರ್ ಗೆ ಪತ್ರ ಬರೆದಿರುವ ಟಿಎಂಸಿ ಸದಸ್ಯರು ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ್ದಾರೆ. ರಾಜಕೀಯ ವಲಯದ ಮೂಲಗಳ ಪ್ರಕಾರ, ಪತ್ರ ಬರೆದಿರುವ ಈ 20 ಪ್ಲಸ್ ಸಂಸದರು ಟಿಎಂಸಿ ಇಂದ ಸಂಪೂರ್ಣವಾಗಿ ಹೊರಬಂದು ಹೊಸ ಸ್ವತಂತ್ರ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಸಾಧ್ಯತೆಗಳು ದಟ್ಟವಾಗಿವೆ. ಸಂಸತ್ತಿನಲ್ಲಿ ತಮ್ಮ ಸಂಸದ ಸ್ಥಾನಕ್ಕೆ ಯಾವುದೇ ಧಕ್ಕೆ ಬರದಂತೆ ಕಾನೂನು ಬದ್ಧವಾಗಿ ಪಕ್ಷದಿಂದ ಹೊರಬರಲು ಬೇಕಾದ ಅಗತ್ಯ ಸಂಖ್ಯಾಬಲವನ್ನು ಕ್ರೋಡಿಕರಿಸಲು ಈ ಬಂಡಾಯದ ಗುಂಪು ಯತ್ನಿಸುತ್ತಿದೆ ಎಂದು ವರದಿಯಾಗಿದೆ. ಈ ಹಿಂದೆ ಆಮ್ ಆದ್ಮಿ ಪಕ್ಷದಲ್ಲಿ ರಾಘವ್ ಚಡ್ಡಾ ನೇತೃತ್ವದ ಅತೃಪ್ತರ ಬಣ ಇದೆ ಪ್ಲಾನ್ ಮಾಡಿತು.

ಮಾಹಿತಿಗಳ ಪ್ರಕಾರ, ಟಿಎಂಸಿಯ 20 ಸಂಸದರು ಲೋಕಸಭಾ ಸ್ಪೀಕರ್ ಹೋಂ ಬಿರ್ಲಾ ಅವರಿಗೆ ಪತ್ರ ಸಲ್ಲಿಸಿದ್ದು, ಟಿಎಂಸಿ ಸಂಸದೀಯ ಪಕ್ಷದೊಳಗೆ ತಮ್ಮ ಸಂಬಂಧವನ್ನು ಕಡಿದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಮಧ್ಯಾಹ್ನ 12.53ಕ್ಕೆ ಈ ಪತ್ರ ಸಲ್ಲಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

Sponsored

ಲೋಕಸಭೆಯಲ್ಲಿ ಟಿಎಂಸಿಗೆ ಒಟ್ಟು 28 ಸಂಸದರು ಇದ್ದು, ಅವರಲ್ಲಿ 20 ಮಂದಿ ಈ ಕ್ರಮಕ್ಕೆ ಬೆಂಬಲ ನೀಡಿದ್ದಾರೆ ಎಂದು ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ತಿಳಿಸಿದ್ದಾರೆ. ಆದರೆ, ಪತ್ರಿಕೆ ಸಹಿ ಹಾಕಿರುವ ಎಲ್ಲಾ ಸಂಸದರ ಅಧಿಕೃತ ಪಟ್ಟಿ ಇನ್ನೂ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ, ಕಾಕೋಲಿ ಘೋಷ್ ದಸ್ತಿದಾರ್, ಪ್ರಸೂನ್ ಬ್ಯಾನರ್ಜಿ, ಪಾರ್ಥ ಬೌಮಿಕ್, ಶರ್ಮಿಳಾ ಸರ್ಕಾರ್, ಅಜಿತ್ ಮಾಲ್, ಜಗದೀಶ್ ಬಸು ನಿಯಾ , ಕಾಲಿಪಾದ ಸೋರೆನ್, ಅರೂಪ ಚಕ್ರವರ್ತಿ, ರಚನಾ ಬ್ಯಾನರ್ಜಿ ಹಾಗೂ ನಟ - ಸಂಸದ ದೇವ್ ಸೇರಿದಂತೆ ಹಲವು ಪ್ರಮುಖ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ ಎಂದು ಹೇಳಲಾಗುತ್ತಿದೆ.

ಇದಕ್ಕೂ ಮುನ್ನ ಟಿಎಂಸಿಯ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬೆಳವಣಿಗೆ ಪಕ್ಷದೊಳಗಿನ ಅಸಮಾಧಾನ ಬಗ್ಗೆ ಚರ್ಚೆಗೆ ಕಾರಣವಾಗಿತ್ತು. ಇದೀಗ ಲೋಕಸಭಾ ಸದಸ್ಯರ ಈ ನಡೆ ಟಿಎಂಸಿ ನಾಯಕತ್ವಕ್ಕೆ ಮತ್ತೊಂದು ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.

ಈ ಬೆಳವಣಿಗೆಗಳು ಪಶ್ಚಿಮ ಬಂಗಾಳದ ರಾಜಕೀಯ ಸಮೀಕರಣಗಳ ಮೇಲಷ್ಟೇ ಅಲ್ಲ ರಾಷ್ಟ್ರೀಯ ರಾಜಕೀಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ, ಈ ಎಲ್ಲ ವರದಿಗಳ ಕುರಿತು ಅಧಿಕೃತ ದೃಢೀಕರಣ ಮತ್ತು ಸಂಬಂಧಿತ ನಾಯಕರ ಸ್ಪಷ್ಟ ಪ್ರತಿಕ್ರಿಯೆಗಾಗಿ ಕಾಯುವುದು ಅಗತ್ಯವಾಗಿದೆ.

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಮತ್ತೊಂದು ಬೆಳವಣಿಗೆ ಬೆಳಕಿಗೆ ಬಂದಿದೆ. ಹಿರಿಯ ಟಿಎಂಸಿ ಸಂಸದೆ ಕಾಗೋಲಿ ಘೋಷ್ ದಸ್ತಿದಾರ್ ಸಲ್ಲಿಸಿರುವ ಪತ್ರದಲ್ಲಿ, ತಾವು ನೇರವಾಗಿ ಬಿಜೆಪಿಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎನ್ನಲಾಗಿದೆ. ಆದರೆ, ಎನ್ ಡಿ ಎ ಮೈತ್ರಿಕೂಟದ ಭಾಗವಾಗಿಯೂ ಉದ್ದೇಶವನ್ನು ವ್ಯಕ್ತಪಡಿಸುವುದಾಗಿ ವರದಿಗಳು ಹೇಳುತ್ತಿವೆ.

Sponsored

ಇದರ ಅರ್ಥ, ಈ ಸಂಸದರು ತೃಣ ಮೂಲಕ ಕಾಂಗ್ರೆಸ್ ನಿಂದ ಪ್ರತ್ಯೇಕ ಗುಂಪಾಗಿ ಕಾರ್ಯನಿರ್ವಹಿಸುತ್ತಾ ಏನ್ ಡಿ ಎ ಗೆ ಬೆಂಬಲ ನೀಡಲು ಮುಂದಾಗಿದ್ದಾರೆ ಎಂಬುದಾಗಿದೆ. ಒಂದು ವೇಳೆ ಈ ಮನವಿಯನ್ನು ಲೋಕಸಭಾ ಸ್ಪೀಕರ್ ಅಂಗೀಕರಿಸಿದರೆ, ಟಿ ಎಂ ಸಿ ಸಂಸದೀಯ ಪಕ್ಷದಲ್ಲಿ ಅಧಿಕೃತ ವಿಭಜನೆ ಸಂಭವಿಸುವ ಸಾಧ್ಯತೆ ಇದೆ. ಇದರಿಂದ ಲೋಕಸಭೆಯಲ್ಲಿ ಟಿಎಂಸಿಎಸ್ ಸಂಖ್ಯಾಬಲ ಹಾಗೂ ರಾಜಕೀಯ ಪ್ರಭಾವದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಮಾಹಿತಿಗಳ ಪ್ರಕಾರ, ಲೋಕಸಭಾ ಸ್ಪೀಕರ್ ಹೋಂ ಬಿರ್ಲಾ ಅವರು ಇಂದು ಸಂಸತ್ ಭವನದಲ್ಲಿ ಇರದ ಕಾರಣ, ಸಂಸದರು ತಮ್ಮ ಪತ್ರವನ್ನು ನೇರವಾಗಿ ಸಲ್ಲಿಸುವ ಬದಲು ಸ್ಪೀಕರ್ ಕಚೇರಿಗೆ ನೀಡಿದ್ದಾರೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗಳು ಮುಂದುವರೆದಿವೆ.

ಇದಕ್ಕೂ ಮೊದಲು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲೂ ಇದೇ ರೀತಿಯ ಬೆಳವಣಿಗೆ ನಡೆದಿತ್ತು ಎಂದು ಹೇಳಲಾಗುತ್ತಿದೆ. ವಿಧಾನಸಭಾ ಚುನಾವಣೆಯ ಬಳಿಕ ರಿತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ ಹಲವು ಶಾಸಕರು ಪ್ರತ್ಯೇಕ ಬಣ ರಚಿಸಿರುವುದಾಗಿ ಸ್ಪೀಕರ್ ಗೆ ಪತ್ರ ಸಲ್ಲಿಸಿದರು ಎನ್ನಲಾಗಿದೆ. ಈ ಬೆಳವಣಿಗೆಯ ನಂತರ ಇದೀಗ ಸಂಸದೀಯ ಪಕ್ಷದಲ್ಲೂ ವಿಭಜನೆಯ ಸಾಧ್ಯತೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ.

ಒಟ್ಟಾರೆ, ಈ ಬೆಳವಣಿಗೆಗಳು ತೃಣ ಮೂಲ ಕಾಂಗ್ರೆಸ್ನ ಆಂತರಿಕ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಆದರೆ, ಈ ಎಲ್ಲಾ ಮಾಹಿತಿಗಳ ಕುರಿತು ಅಧಿಕೃತ ದಾಖಲೆಗಳು, ಸಂಬಂಧಿತ ನಾಯಕರ ಹೇಳಿಕೆಗಳು ಮತ್ತು ಸಂಸತ್ತಿನ ಅಧಿಕೃತ ನಿರ್ಧಾರಗಳು ಹೊರಬರುವವರೆಗೆ ಎಚ್ಚರಿಕೆಯಿಂದ ಪರಿಗಣಿಸುವುದು ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆಗಳು ಯಾವ ದಿಕ್ಕು ಪಡೆಯಲಿವೆ ಎಂಬುದರ ಮೇಲೆ ರಾಷ್ಟ್ರೀಯ ರಾಜಕೀಯದ ಗಮನ ಕೇಂದ್ರೀಕೃತವಾಗಿದೆ.

Sponsored

Also Read:

Dowry Dispute Shock: ವಧುವಿನ ತಂದೆ ಹೃದಯಾಘಾತದಿಂದ ಮೃತ್ಯ, ವರನ ಕಡೆಯವರಿಗೆ ಥಳಿತ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online