<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಇಂದು ಸುಪ್ರೀಂ ಕೋರ್ಟ್ನಲ್ಲಿ ಸ್ವತ: ವಾದ ಮಂಡಿಸಿದ ಮಮತಾ ಬ್ಯಾನರ್ಜಿ

ಇಂದು ಸುಪ್ರೀಂ ಕೋರ್ಟ್ನಲ್ಲಿ ಸ್ವತ: ವಾದ ಮಂಡಿಸಿದ ಮಮತಾ ಬ್ಯಾನರ್ಜಿ
Summary: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ವಿವಾದದ ಕುರಿತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ವತ: ಇಂದು ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದರು.
belagavi news:
ಮಮತಾ ಬ್ಯಾನರ್ಜಿ ಅವರು ಸುಪ್ರೀಂ ಕೋರ್ಟ್ ನಲ್ಲಿ ಸ್ವತಃ ವಾದ ಮಂಡಿಸಿ ದೇಶದ ಎಲ್ಲರ ಗಮನ ಸೆಳೆದಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಪಶ್ಚಿಮ ಬಂಗಾಳದ ಮತದಾರರನ್ನು ಸಾಮೂಹಿಕವಾಗಿ ತೆಗೆದುಹಾಕುತ್ತಿದ್ದಾರೆ. ಆದಕಾರಣ ಪಶ್ಚಿಮ ಬಂಗಾಳದವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಆದಕಾರಣ ಸುಪ್ರೀಂಕೋರ್ಟ್ ಈ ಸಮಸ್ಯೆ ಮಧ್ಯ ಪ್ರವೇಶಿಸಿತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ವತಃ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿ ದೇಶದ ಗಮನ ಸೆಳೆದಿದ್ದಾರೆ. ಅವರು ಪ್ರಜಾಪ್ರಭುತ್ವವನ್ನು ಉಳಿಸಬೇಕು ಎನ್ನುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ಮಂಡಿಸಿದ ವಾದವನ್ನು ಆಲಿಸಿ ನಿಜವಾದ ವ್ಯಕ್ತಿಗಳು ಮತದಾರರ ಪಟ್ಟಿಯಲ್ಲಿ ಉಳಿಯಬೇಕು ಎಂದು ಅಭಿಪ್ರಾಯ ಸ್ಪಷ್ಟಪಡಿಸಿದರು. ಸುಪ್ರೀಂ ಕೋರ್ಟ್ ಎಸ್ಐಆರ್ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ನೋಟಿಸ್ ಅನ್ನು ನೀಡಿದೆ. ನ್ಯಾಯಾಧೀಶ ಸೂರ್ಯಕಾಂತ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ಎಂ.ಪಾಂಚೋಲಿ ಅವರಿಂದ ನ್ಯಾಯ ಪೀಠ ನೋಟಿಸ್ ಜಾರಿಗೊಳಿಸಿದೆ.

ಫೆಬ್ರುವರಿ 9ರ ಒಳಗೆ ಅವರು ಉತ್ತರವನ್ನು ನೀಡಬೇಕೆಂದು ತಿಳಿಸಿದೆ. ಪಶ್ಚಿಮ ಬಂಗಾಳಕ್ಕೆ ಅನ್ವಯಿಸುತ್ತಿರುವ ಮಾನವ ದಂಡಗಳು ಅಸ್ಸಾಂನಲ್ಲಿ ಏಕೆ ಅನ್ವಯಿಸುತ್ತದೆ ಎಂದು ಎಸ್ಐಆರ್ ವಿಚಾರವಾಗಿ ಮಮತಾ ಬ್ಯಾನರ್ಜಿಯವರು ಬಂಗಾಳದ ಜನರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಅವರ ವಾದ ಮುಂದುವರಿಸಿ, ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ ನಾನು ಚುನಾವಣಾ ಆಯೋಗಕ್ಕೆ ಆರು ಪತ್ರಗಳನ್ನು ಬರೆದಿದ್ದೇನೆ, ಏನು ಉಪಯೋಗವಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ದೇಶದ ಸರ್ವೋಚ್ಚ ನ್ಯಾಯಾಲಯ ಮಧ್ಯೆ ಪ್ರವೇಶಿಸಿ ಪ್ರಜಾಪ್ರಭುತ್ವವನ್ನು ಉಳಿಸಿಕೊಡಬೇಕು ಎಂದು ಅವರಲ್ಲಿ ವಿನಂತಿಸಿಕೊಂಡರು. ಹಿರಿಯ ವಕೀಲ ಶಾಮ್ ದಿವಾನ್ ಅವರು ಎಸ್ಐಆರ್ ಪ್ರಕ್ರಿಯೆ ಫೆಬ್ರವರಿ 14ರಂದು ಮುಗಿಯಲಿದ್ದು, ಪರಿಹಾರ ಕ್ರಮಗಳಿಗೆ ಹೆಚ್ಚಿನ ಸಮಯ ಉಳಿದಿಲ್ಲ ಎಂದು ಆತಂಕವನ್ನು ವ್ಯಕ್ತಪಡಿಸಿದರು. ತಾರ್ಕಿಕ ವ್ಯತ್ಯಾಸಗಳನ್ನು ಉಲ್ಲಂಘಿಸುವುದು ಕಂಡು ಬಂದ ನಂತರ ಇಲ್ಲಿಯವರೆಗೆ 1.36 ಕೋಟಿ ಜನರಿಗೆ ನೋಟಿಸ್ ನೀಡಲಾಗಿದೆ ಮತ್ತು ವ್ಯತ್ಯಾಸದ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಉಲ್ಲಂಘಿಸಲು ಕಾರಣವನ್ನು ಚುನಾವಣಾ ಸಮಿತಿ ಸ್ಪಷ್ಟವಾಗಿ ತಿಳಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಚುನಾವಣಾ ಸಮಿತಿಯ ಆಧಾರವನ್ನು ಚುನಾವಣಾ ಪಟ್ಟಿ ಪರಿಷ್ಕರಣೆಗಾಗಿ ಅನುಸರಿಸುತ್ತಿಲ್ಲ. ಮತದಾರದಿಂದ ಹೆಚ್ಚಿನ ಮಾಹಿತಿ ದಾಖಲೆಗಳನ್ನು ಪಡೆಯುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು. ಚುನಾವಣಾ ಆಯೋಗ ಜೀವಂತ ವ್ಯಕ್ತಿಗಳನ್ನು ಸತ್ತಿದೆ ಎಂದು ಸದ್ಯ ನಡೆಯುತ್ತಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

2002ರ ಮತದಾರ ಪಟ್ಟಿಯೊಂದಿಗೆ ಸಂಪರ್ಕಿಸುವಾಗ ಕಂಡುಬರುವ ತಾರ್ಕಿಕ ವ್ಯತ್ಯಾಸಗಳು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಈ ವ್ಯತ್ಯಾಸಗಳಲ್ಲಿ ಪ್ರಮುಖವಾಗಿ ಪೋಷಕರ ಹೆಸರಿನಲ್ಲಿ ನೋಂದಾವಣೆಯಾಗದ ನಿದರ್ಶನಗಳು ಹಾಗೆ ಮತದಾರರು ಮತ್ತು ಅವರ ಪೋಷಕರ ನಡುವಿನ ವಯಸ್ಸಿನ ವ್ಯತ್ಯಾಸ 15 ಕಿಂತ ಕಡಿಮೆ ಅಥವಾ 50 ಕಿಂತ ಹೆಚ್ಚು ಇರುವ ಪ್ರಕರಣಗಳು ಸೇರಿವೆ. ಇಂತಹ ಸಂಗತಿಗಳು ಮತದಾರರ ಪಟ್ಟಿಯ ನಿಖರತೆಯ ಬಗ್ಗೆ ಪ್ರಶ್ನೆಗಳು ಹುಟ್ಟಿಸಿವೆ.

ಸರಿಯಾದ ದಾಖಲೆಗಳನ್ನು ಸಲ್ಲಿಸುವ ಮೂಲಕ ಹೆಸರು ವಯಸ್ಸು ಮತ್ತು ಪೋಷಕರ ವಿವರಗಳನ್ನು ತಿದ್ದುಪಡಿ ಮಾಡಿಕೊಳ್ಳುವ ಅವಕಾಶವಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ತಾರ್ಕಿಕ ವ್ಯತ್ಯಾಸಕ್ಕಾಗಿ ನೋಟಿಸ್ ನೀಡಲಾದ ಜನರ ಹೆಸರುಗಳು ತಪ್ಪಾಗಿ ದಾಖಲಾಗಿರುವುದು ಕಂಡುಬಂದಿದೆ. ಇದರಿಂದ ಅನಗತ್ಯ ಗೊಂದಲ ಮತ್ತು ಆತಂಕ ಉಂಟಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಈ ರೀತಿಯ ತಪ್ಪುಗಳನ್ನು ಸರಳ ಪ್ರಕ್ರಿಯೆ ಮೂಲಕ ಸುಲಭವಾಗಿ ಸರಿಪಡಿಸುವುದು ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರ್ಕಾರ ಪ್ರಕ್ರಿಯೆ ಮೇಲ್ವಿಚಾರಣೆಯಗಾಗಿ SDMಗಳಂತ 15 ಗ್ರೇಟು ಅಧಿಕಾರಿಗಳ ಸೇವೆಯನ್ನು ಒದಗಿಸಿದೆ. ಅದಲ್ಲದೆ ಸರ್ಕಾರಿ ನೌಕರರನ್ನು ಮಾತ್ರ ಈ ಪ್ರತಿಕ್ರಿಯೆಗೆ ನೀಡಿದೆ ಎಂದು ಚುನಾವಣಾ ಆಯೋಗದ ಪರವಾಗಿ ಹಾಜರಾಗಿದ್ದರು ಹಿರಿಯ ವಕೀಲ ರಾಕೇಶ್ ದ್ವಿವೇದಿ ದಾಳಿಯನ್ನು ತೀಕ್ಷ್ಣಗೊಳಿಸಿ ವಾದವನ್ನು ಸ್ಪಷ್ಟಪಡಿಸಿಕೊಂಡರು.

ಆಯೋಗದ ಮೇಲಿನ ತನ್ನ ದಾಳಿಯನ್ನು ತೀಕ್ಷ್ಣಗೊಳಿಸಿ ಎಸ್ಐಆರ್ ಅನ್ನು ಪ್ರಸ್ತುತ ರೂಪದಲ್ಲಿ ಮುಂದುವರಿಸುವುದರಿಂದ ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ಹೊಡೆತ ಉಂಟಾಗಬಹುದು ಮತ್ತು ಸಾಮೂಹಿಕ ಹಕ್ಕುಗಳ ನಿವಾರಣೆ ಕುರಿತಂತೆ ಮಮತಾ ಬ್ಯಾನರ್ಜಿಯವರು ಸ್ಪಷ್ಟ ವಾದ ವಾದವನ್ನು ಮಂಡಿಸಿದರು. ಎಸ್ಐಆರ್ ಮಾಡಿದ ಆರೋಪಗಳನ್ನು ಬದಿಗೆ ಸರಿಸಿದ ಬ್ಯಾನರ್ಜಿ ರಾಜ್ಯ ಸರ್ಕಾರ ಚುನಾವಣೆ ಆಯೋಗ ಹೇಳಿದ ಎಲ್ಲವನ್ನು ಒದಗಿಸಿದೆ ಎಂದು ಹೇಳಿದರು.


ಇನ್ನಷ್ಟು ಓದಿರಿ:
ಬುಧವಾರದ ಪಂಚಾಂಗ, ಭವಿಷ್ಯ: ವೈಯಕ್ತಿಕ ಸಂಬಂಧಗಳ ಬಗ್ಗೆ ಸೂಚನೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online