Belagavi News:
ಬೆಂಗಳೂರು: ಮುಖ್ಯಮಂತ್ರಿ ಹುದ್ದೆ ತ್ಯಜಿಸಿದ ನಂತರ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗುತ್ತಿದೆಯೇ ಅಥವಾ ಅವರು ಸೈಡ್ ಲೈನ್ ಆಗುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ರಾಜಕೀಯದ ವೇಗ ಮತ್ತು ನಾಯಕತ್ವದ ಅನಿವಾರ್ಯತೆಯನ್ನು ರೈಲಿನ ಉದಾಹರಣೆಯೊಂದಿಗೆ ವಿವರಿಸಿದರು.
" ಇದು ಅತ್ಯಂತ ವೇಗವಾಗಿ ಓಡುತ್ತಿರುವ ಕಾಲ. ನಾವು ಕೂಡ ಆ ಸ್ಪೀಡ್ ಗೆ ತಕ್ಕಂತೆ ಓಡಬೇಕು. ಒಂದು ವೇಳೆ ಓಡಿದಿದ್ದರೆ ಟ್ರೈನ್ ಮಿಸ್ ಆಗುತ್ತದೆ. ರಾಜಕಾರಣ ಅಂದರೆ ಹಾಗೇನೇ," ಎಂದು ಅವರು ಹೇಳಿದರು.
ಸತೀಶ್ ಜಾರಕಿಹೊಳಿ ಅವರ ಈ ಮಾರ್ಮಿಕ ಹೇಳಿಕೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದ್ದು ನಾಯಕತ್ವ ಮತ್ತು ಕಾಲಾನುಸಾರ ನಡೆಯುವ ಅಗತ್ಯತೆಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
ಒಮ್ಮೆ ಟ್ರೈನ್ ಮಿಸ್ ಆದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ಬೇಕಿದ್ದರೆ ತುಮಕೂರಿಗೋ ಅಥವಾ ಅರಸೀಕೆರೆಗೂ ಯಾವುದಾದರೂ ಗಾಡಿಯಲ್ಲಿ (ವಾಹನದಲ್ಲಿ) ಹೋಗಿಯಾದರೂ ಆ ರೈಲನ್ನು ಹಿಡಿಯಬೇಕು. ಒಂದು ವೇಳೆ ನಾವು ರೈಲು ಹಿಡಿಯದೇ ಇದ್ದರೆ, ಜನರು ನಮ್ಮನ್ನು ಮರೆತುಬಿಡುತ್ತಾರೆ. ಇದು ನಮ್ಮ ವೈಯಕ್ತಿಕವಾಗಿ ಹೇಳುತ್ತಿರುವ ಮಾತಲ್ಲ. ಜನರದ್ದೆ ಆದ ಮಾತು ಎಂದು ಸತೀಶ್ ಜಾರಕಿಹೊಳಿ ವಿಶ್ಲೇಷಿಸಿದರು.
ಸತೀಶ್ ಜಾರಕಿಹೊಳಿ ಅವರ ಈ ಹೇಳಿಕೆ ರಾಜಕೀಯದಲ್ಲಿ ನಿರಂತರ ಚುರುಕುತನ ಮತ್ತು ಜನಸಂಪರ್ಕದ ಅಗತ್ಯತೆಯನ್ನು ಒತ್ತಿಹೇಳುವಂತಾಗಿದ್ದು, ಸಿದ್ದರಾಮಯ್ಯ ಸೈಡ್ ಲೈನ್ ಚರ್ಚೆಯ ನಡುವೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಅವರು ಮೈಸೂರಲ್ಲೇ ಕೂತು ರಾಜಕಾರಣ ಮಾಡಬಹುದು, ಅದರಲ್ಲಿ ತಪ್ಪಿಲ್ಲ. ಆದರೆ, ಜನರ ಸಂಪರ್ಕ ಎಲ್ಲಿಯವರೆಗೆ ಇರುತ್ತದೆಯೋ, ಅಲ್ಲಿಯ ತನಕ ಮಾತ್ರ ಒಬ್ಬರು ಲೀಡರ್ ಆಗಿ ಉಳಿಯಲು ಸಾಧ್ಯ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಅವರ ಈ ಹೇಳಿಕೆ ರಾಜಕೀಯ ನಾಯಕತ್ವದಲ್ಲಿ ಜನಸಂಪರ್ಕದ ಮಹತ್ವವನ್ನು ಒತ್ತಿಹೇಳುವಂತಾಗಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಗಮನ ಸೆಳೆಯುತ್ತಿದೆ.
Also Read:
ಹಳೆಯ ವಿದ್ಯಾರ್ಥಿಗಳಿಂದ ಭಾವನಾತ್ಮಕ ಗೌರವ : ನಿವೃತ್ತ ದೈಹಿಕ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ