ದೆಹಲಿ ದಾಳಿಗೂ ಮುನ್ನ ಸಹೋದರನಿಗೆ ಮೊಬೈಲ್ ಕೊಟ್ಟು ಉಗ್ರ ಉಮರ್ ಏನು ಹೇಳಿದ್ದ
ದೆಹಲಿಯಲ್ಲಿ ಸ್ಫೋಟಕ್ಕೆ ಕಾರಣನಾಗಿದ್ದ ಉಗ್ರ ಉಮರ್ ಘಟನೆಗೂ ಮುನ್ನ ಸಹೋದರನಿಗೆ ಏನು ಹೇಳಿದ್ದ ಗೊತ್ತೇ? ಈ ಘಟನೆಯಲ್ಲಿ ಉಗ್ರ ಉಮರ್ ಹಾಗೂ 15 ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಈ ದಾಳಿ ನಡೆಸುವುದಕ್ಕೆ ಒಂದು ವಾರ ಮೊದಲು ಉಗ್ರ ಉಮರ್ ಪುಲ್ವಾಮಾನದಲ್ಲಿರುವ ತನ್ನ ಮನೆಗೆ ಹೋಗಿದ್ದ, ತನ್ನ ಮೊಬೈಲ್ ಅನ್ನು ಸಹೋದರನಿಗೆ ಕೊಟ್ಟು ಬಂದಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಫೋನ್ನಿಂದ ಉಮರ್ನ ವೀಡಿಯೊವನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಆತ ಆತ್ಮಾಹುತಿ ಬಾಂಬ್ ದಾಳಿಯನ್ನು ಹುತಾತ್ಮ ಕಾರ್ಯಾಚರಣೆ ಎಂದು ವಿವರಿಸಿದ್ದಾನೆ.
ನವದೆಹಲಿ:
ದೆಹಲಿಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ(Suicide Bomb Blast) ಸಂಭವಿಸಿತ್ತು. ಘಟನೆಯಲ್ಲಿ ಉಗ್ರ ಉಮರ್ ಹಾಗೂ 15 ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಈ ದಾಳಿ ನಡೆಸುವುದಕ್ಕೆ ಒಂದು ವಾರ ಮೊದಲು ಉಗ್ರ ಉಮರ್ ಪುಲ್ವಾಮಾನದಲ್ಲಿರುವ ತನ್ನ ಮನೆಗೆ ಹೋಗಿದ್ದ, ತನ್ನ ಮೊಬೈಲ್ ಅನ್ನು ಸಹೋದರನಿಗೆ ಕೊಟ್ಟು ಬಂದಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಹೂರ್ ಹೇಳಿರುವ ಪ್ರಕಾರ, ತನ್ನ ಬಗ್ಗೆ ಏನಾದರೂ ಸುದ್ದಿ ಬಂದರೆ ಆ ಫೋನ್ ಅನ್ನು ನೀರಿಗೆ ಎಸೆಯುವಂತೆ ತಮ್ಮನಿಗೆ ಹೇಳಿದ್ದ. ನವೆಂಬರ್ 9ರಂದು ಅಲ್ ಫಲಾಹಾ ವಿಶ್ವವಿದ್ಯಾಲಯದಲ್ಲಿ ಉಮರ್ ತನ್ನ ಒಡನಾಡಿ ಬಂಧನದ ಸುದ್ದಿಯನ್ನು ಕೇಳಿದಾಗ ಜಹೂರ್ ಭಯಗೊಂಡು ಆ ಮೊಬೈಲ್ ಅನ್ನು ತನ್ನ ಮನೆ ಬಳಿಯ ಕೊಳಕ್ಕೆ ಎಸೆದಿದ್ದ.
ಈ ಫೋನ್ನಿಂದ ಉಮರ್ನ ವೀಡಿಯೊವನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಆತ ಆತ್ಮಾಹುತಿ ಬಾಂಬ್ ದಾಳಿಯನ್ನು ಹುತಾತ್ಮ ಕಾರ್ಯಾಚರಣೆ ಎಂದು ವಿವರಿಸಿದ್ದಾನೆ. ಉಮರ್ ಸಹೋದರ ಜಹೂರ್ ಇಲಾಹಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಈ ವಿಡಿಯೋಗಳು ಸಿಕ್ಕಿವೆ. ಅಕ್ಟೋಬರ್ 26 ಹಾಗೂ 29ರ ನಡುವೆ ಉಮರ್ ತನ್ನ ಫೋನ್ ನೀಡಿದ್ದಾಗಿ ಜಹೂರ್ ಹೇಳಿದ್ದಾರೆ.
ತನಿಖಾ ಸಂಸ್ಥೆಗಳು ಉಮರ್ನ ಎರಡೂ ಫೋನ್ಗಳನ್ನು ಪತ್ತೆಹಚ್ಚಲು ಪ್ರಯತ್ನಿಸಿದಾಗ, ಅವು ಸ್ವಿಚ್ ಆಫ್ ಆಗಿದ್ದವು. ಒಂದು ಫೋನ್ನ ಕೊನೆಯ ಸ್ಥಳ ದೆಹಲಿಯಲ್ಲಿ ಮತ್ತು ಇನ್ನೊಂದು ಫೋನ್ ಪುಲ್ವಾಮಾದಲ್ಲಿತ್ತು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಹೂರ್ನನ್ನು ವಿಚಾರಣೆ ನಡೆಸುತ್ತಿರುವಾಗ, ದೆಹಲಿಯಲ್ಲಿ ಆತ್ಮಹತ್ಯಾ ದಾಳಿ ಸಂಭವಿಸಿದೆ. ಸ್ವಲ್ಪ ಸಮಯದ ನಂತರ ಫೋನ್ಗಳನ್ನು ವಶಪಡಿಸಿಕೊಳ್ಳಲಾಯಿತು.
ಎನ್ಐಎ ಮೂಲಗಳ ಪ್ರಕಾರ, ಬಂಧಿತ ಆರೋಪಿಗಳ ಮೊಬೈಲ್ ಫೋನ್ಗಳಿಂದ ಡಾ. ಉಮರ್ ಅವರ ಹಲವಾರು ವೀಡಿಯೊಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವೀಡಿಯೊಗಳನ್ನು ಮೊಬೈಲ್ನಿಂದ 11 ವ್ಯಕ್ತಿಗಳಿಗೆ ಕಳುಹಿಸಲಾಗಿತ್ತು. ಈ ಯುವಕರಲ್ಲಿ ಏಳು ಮಂದಿ ಕಾಶ್ಮೀರಿ ಮೂಲದವರು. ಎಲ್ಲರೂ ಅಲ್ ಫಲಾಹ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದವರಾಗಿದ್ದಾರೆ.
ವಿಡಿಯೋದಲ್ಲಿ ಉಮರ್ ಇಂಗ್ಲಿಷ್ನಲ್ಲಿ ಮಾತನಾಡಿದ್ದಾನೆ. ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ಹುಂಡೈ ಐ20 ಕಾರಿನಲ್ಲಿ ಡಾ. ಉಮರ್ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದ.ಇದರ ಪರಿಣಾಮವಾಗಿ 15 ಜನರು ಸಾವನ್ನಪ್ಪಿದರು ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಎಂಟು ಜನರನ್ನು ಬಂಧಿಸಲಾಗಿದ್ದು, ಅವರಲ್ಲಿ ಐದು ಮಂದಿ ವೈದ್ಯರು. ತನಿಖಾ ಸಂಸ್ಥೆಗಳು ಹೇಳುವಂತೆ ಡಾ. ಉಮರ್ ತನ್ನಂತೆಯೇ ಹೆಚ್ಚಿನ ಆತ್ಮಹತ್ಯಾ ಬಾಂಬರ್ಗಳಿಗೆ ತರಬೇತಿ ನೀಡುತ್ತಿದ್ದ. ಯುವಕರಿಗೆ ಈ ಕುರಿತು ಪ್ರೇರಣೆ ನೀಡುವ ವಿಡಿಯೋಗಳನ್ನು ಮಾಡಿ ಬ್ರೈನ್ವಾಶ್ ಮಾಡಲು ಯತ್ನಿಸುತ್ತಿದ್ದ.
ನೀರಿನಲ್ಲಿ ಫೋನ್ ಮುಳುಗಿದ್ದರಿಂದ ಹಾನಿಗೊಳಗಾಗಿತ್ತು, ಅದರ ಮದರ್ಬೋರ್ಡ್ ಕೂಡ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿತ್ತು. ಕೆಲವು ದಿನಗಳ ನಂತರ ಉಮರ್ ವಿಡಿಯೋವನ್ನು ಪಡೆಯಲಾಯಿತು. ಈ ವಿಡಿಯೋವನ್ನು ಉಮರ್ ಏಪ್ರಿಲ್ನಲ್ಲಿ ರೆಕಾರ್ಡ್ ಮಾಡಿದ್ದ. ಫೋನ್ ಅನ್ನು ಎನ್ಐಎಗೆ ಹಸ್ತಾಂತರಿಸಲಾಗಿದೆ.
ಇನ್ನಷ್ಟು ಓದಿರಿ:
ರಿಸಿನ್ ದಾಳಿಗೆ ಸಂಚು ರೂಪಿಸಿ ಸಬರಮತಿ ಜೈಲುಪಾಲಾಗಿದ್ದ ಡಾ. ಅಹ್ಮದ್ ಮೇಲೆ ಸಹ