Belagavi News :
ಮಸೂರಿನಲ್ಲಿ ಕಳೆದ ತಿಂಗಳು ಸಂಭವಿಸಿದ ನವಿಲುಗಳ ಸರಣಿ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂಬುದು (ಎಫ್ ಎಸ್ ಎಲ್) ವರದಿಯಿಂದ ದೃಢಪಟ್ಟಿದೆ. H5N1 ವೈರಸ್ ಸೋಂಕಿನಿಂದ ಈ ಸಾವುಗಳು ಸಂಭವಿಸಿದ್ದಾಗಿ ಸ್ಪಷ್ಟವಾಗಿದ್ದು, ಜಿಲ್ಲೆಗಳಲ್ಲಿ ಆತಂಕ ಹೆಚ್ಚಿಸಿದೆ.
ಹಿನ್ನೆಲೆ ಜಿಲ್ಲಾಡಳಿತವು 10 ಕಿ.ಮೀ ವ್ಯಾಪ್ತಿಯ 33 ಹಳ್ಳಿಗಳಲ್ಲಿ ಘೋಷಿಸಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಐದು ರಾಪಿಡ್ ರೆಸ್ಪಾನ್ಸ್ ತಂಡಗಳನ್ನು ರಚಿಸಿ ನಿಗ ವಹಿಸಲಾಗುತ್ತಿದೆ. ಪ್ರಭಾವಿತ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಪರಿಶೀಲನೆ ನಡೆಯುತ್ತಿದ್ದು, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಡಲು ಕ್ರಮ ಕೈಗೊಳ್ಳಲಾಗಿದೆ.
ಇದಲ್ಲದೆ, ಕೋಳಿ ಫಾರ್ಮ್ ಗಳಲ್ಲಿ ಬಯೋ ಸೆಕ್ಯೂರಿಟಿ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಪಶು ಸಂಗೋಪನ ಇಲಾಖೆ ಸೂಚಿಸಿದೆ. ಯಾವುದೇ ಅಸಹಜ ಹಕ್ಕಿಗಳು ಕಂಡು ಬಂದಲ್ಲಿ, ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ರೈತರು ಮತ್ತು ಕೋಳಿ ಸಾಕಾಣಿಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ.
ಜನರು ಅರ್ಥ ಹಕ್ಕಿಗಳ ಸಂಪರ್ಕದಿಂದ ದೂರವಿರಬೇಕು ಹಾಗೂ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸರಣಿಯಾಗಿ ಸಂಭವಿಸುತ್ತಿದ್ದ ನವಿಲುಗಳ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ರಕ್ತ ಹಾಗೂ ಅಂಗಾಂಗಗಳ ಮಾದರಿಯನ್ನು (ಎಸ್ ಎಸ್ ಎಲ್) ವಿಧಿ ವಿಜ್ಞಾನ ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಲಾಗಿದ್ದು,ವರದಿಯಲ್ಲಿ ಶಂಕು ಇರುವುದು ಖಚಿತವಾಗಿದೆ. ಇದರಿಂದಾಗಿ ಜನರು ಮತ್ತು ರೈತರು ಯಾವುದೇ ಹೊಸ ತರಹದ ಪಕ್ಷಿ ಕಂಡಲ್ಲಿ ಅಧಿಕಾರಿಗಳಿಗೆ ವರದಿ ಮಾಡುವುದು ಒಳ್ಳೆಯದು ಎಂದು ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ನವಿಲುಗಳ ಸರಣಿ ಸಾವು ಆರಂಭದಲ್ಲಿ ಬಿಸಿಲಿನ ತಾಪ ಮತ್ತು ನಿರ್ಜಲೀಕರಣದಿಂದ ಸಂಭವಿಸಿರಬಹುದು ಎಂದು ಶಂಕಿಶಲಾಗಿತ್ತು. ಕಳೆದ ಏಪ್ರಿಲ್ 16 ರಿಂದ ತುಮಕೂರು ತಾಲೂಕಿನ ಅತ್ಯಂತ ನವಿಲುಗಳ ಹಾವುಗಳು ವರದಿಯಾಗಿದ್ದು,ಕೇವಲ 11 ದಿನಗಳಲ್ಲಿ ಸುಮಾರು 44 ನವಿಲುಗಳು ಮೃತಪಟ್ಟಿದ್ದವು. ವಿಶೇಷವಾಗಿ ಬೊಮ್ಮನಹಳ್ಳಿ ಮತ್ತು ಮಾಚೇನಹಳ್ಳಿ ಸುತ್ತಮುತ್ತಲಿನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹೆಚ್ಚಿನ ಸಾವುಗಳು ಕಂಡುಬಂದಿದ್ದವು.
ಆದರೆ ಪ್ರಕರಣದ ನಿಜವಾದ ಕಾರಣ ಇದೀಗ ಬಯಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಹಕ್ಕಿ ಜ್ವರದ ಆದ್ಯತೆಯನ್ನು ತಳ್ಳಿ ಹಾಕಲಾಗದ ಕಾರಣ, ಮಾದರಿಗಳನ್ನು ಕಳುಹಿಸಲಾಗಿತ್ತು. ಇದೀಗ ಬಂದಿರುವ ವರದಿಯಲ್ಲಿ H5N1 ವೈರಸ್ ಶಂಕು ಇರುವುದನ್ನು ದೃಢಪಡಿಸಲಾಗಿದೆ. ಈ ಬೆಳವಣಿಗೆ ಸಾರ್ವಜನಿಕರಲ್ಲಿ ಹಾಗೂ ರೈತರಲ್ಲಿ ಆತಂಕ ಹೆಚ್ಚಿಸಿದೆ.
ಹಕ್ಕಿ ಜ್ವರ ದೃಢಪಟ್ಟ ಹಿನ್ನೆಲೆ ಪಶು ಸಂಗೋಪನ ಇಲಾಖೆ ಮತ್ತು ಆಡಳಿತದ ತಕ್ಷಣ ಹೈಅಲರ್ಟ್ ಘೋಷಿಸಿದ್ದು,ಶಂಕು ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋಳಿ ಫಾರ್ಮಗಳಲ್ಲಿ ಬಯೋ ಸೆಕ್ಯೂರಿಟಿ ಹೆಚ್ಚಿಸಲು ಸೂಚನೆ ನೀಡಲಾಗಿದ್ದು, ಯಾವುದೇ ಅಸಹಜ ಹಕ್ಕಿಗಳ ಸಾವು ಕಂಡುಬಂದಲ್ಲಿ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಜನರು ಸತ್ತ ಹಕ್ಕಿಗಳ ಸಂಪರ್ಕದಿಂದ ದೂರವಿರಬೇಕು ಹಾಗೂ ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ತುಮಕೂರಿನಲ್ಲಿ ಹಕ್ಕಿ ಜ್ವರ ಆತಂಕದ ಹಿನ್ನೆಲೆ ಜಿಲ್ಲಾಡಳಿತವು ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾಧಿಕಾರಿಗಳ ರಚನೆಯಂತೆ ರಾಪಿಡ್ ರೆಸ್ಪಾನ್ಸ್ ಟೀಮಗಳನ್ನು ರಚಿಸಲಾಗಿದ್ದು, ಪ್ರಭಾವಿತ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗುತ್ತಿದೆ.
ಉರ್ಡಿಗೆರೆ, ಗುಳೂರು, ಬೊಮ್ಮನಹಳ್ಳಿ ಮತ್ತು ಪಿಜಿ ಪಾಳ್ಯ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಬರುವ 33 ಹಳ್ಳಿಗಳಲ್ಲಿ ಸಂಕು ಹರಡುವುದನ್ನು ತಡೆಯಲು ಐದು ಪ್ರತ್ಯೇಕ ಆರ್ ಆರ್ ಟಿ ಗಳನ್ನು ಆಯೋಜಿಸಲಾಗಿದೆ. ಪ್ರತಿಯೊಂದು ತಂಡದಲ್ಲಿ ಪೀಡಿಓ ಪಶು ಸಂಗೋಪನ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸೇರಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ,ಪ್ರದೇಶಾದ್ಯಂತ ಸುರಕ್ಷಿತ ಕ್ರಮಗಳನ್ನು ಬಲಪಡಿಸಲಾಗಿದೆ.
ಇದಲ್ಲದೆ ಸುತ್ತಮುತ್ತಲಿನ ಕೋಳಿ ಫಾರ್ಮಗಳಲ್ಲಿನ ನಾಟಿ ಕೋಳಿಗಳ ರಕ್ತದ ಮಾದರಿಗಳನ್ನು ಪರೀಕ್ಷಣೆ ಕಳುಹಿಸಿ ನಿರ್ಧರಿಸಲಾಗಿದೆ. ಕೋಳಿಗಳಲ್ಲೂ ಧೃಡಪಟ್ಟರೆ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ.
Also Read: