Belagavi news:
ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ನಡೆದ ಅನಿರೀಕ್ಷಿತ ಘಟನೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಶಾರ್ಜಾದಿಂದ ಬಂದ ಅರೇಬಿಯಾ ವಿಮಾನ ನೀಡಿದ ನಂತರ ನಡೆದ ಈ ಘಟನೆ ಭದ್ರತಾ ವ್ಯವಸ್ಥೆಗಳ ಮೇಲೂ ಪ್ರಶ್ನೆಗಳನ್ನು ಎಬ್ಬಿಸಿದೆ.
ಶಾರ್ಜಾ- ಚೆನ್ನೈ ಮಾರ್ಗದ ಏರ್ ಅರೇಬಿಯಾ ವಿಮಾನವು ರನ್ವೇಯಲ್ಲಿ ಸುರಕ್ಷಿತವಾಗಿ ಇಳಿದು ಟ್ಯಾಕ್ಸಿವೇ ಮೂಲಕ ಪಾರ್ಕಿಂಗ್ ಡೇ ಕಡೆ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ವಿಮಾನ ಇನ್ನು ಸಂಪೂರ್ಣವಾಗಿ ನಿಂತಿರದ ಸ್ಥಿತಿಯಲ್ಲೇ ಇದ್ದ ವೇಳೆ, ಪುರುಷ ಪ್ರಯಾಣಿಕನೊಬ್ಬ ಹಠಾತ್ ಆಗಿ ತುರ್ತು ನಿರ್ಗಮನ ಬಾಗಿಲನ್ನು ತೆರೆಯುವ ಮೂಲಕ ಹೊರಗೆ ಜಿಗಿದಿದ್ದಾನೆ.
ಬಿಲ್ಲರ್ ಈ ಅಚ್ಚರಿಯ ಘಟನೆ ಯಿಂದ ವಿಮಾನದೊಳಗಿನ ಸಹ ಪ್ರಯಾಣಿಕರು ಕ್ಷಣಕಾಲ ಗೊಂದಲ ಮತ್ತು ಭೀತಿಗೆ ಒಳಗಾದರು ಎಂದು ವರದಿಯಾಗಿದೆ. ವಿಮಾನ ಸಿಬ್ಬಂದಿ ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು, ಪ್ರಯಾಣಿಕನ ಈ ಅಪ್ರತಿಕ್ಷಿತ ಕ್ರಮ ಎಲ್ಲರಿಗೂ ಶಾಕ್ ನೀಡಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಘಟನೆ ವಿಮಾನ ಸಂಪೂರ್ಣವಾಗಿ ನಿಲುಗಡೆಯಾಗುವ ಮೊದಲು ನಡೆದಿರುವುದರಿಂದ ಗಂಭೀರ ಭದ್ರತಾ ಲೋಕನ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ ಮತ್ತು ಸಂಬಂಧಿತ ಅಧಿಕಾರಿಗಳು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.
ಈ ರೀತಿಯ ಘಟನೆಗಳು ಪ್ರಯಾಣ ಯಾನ ಸುರಕ್ಷಿತ ನಿಯಮಗಳ ಪಾಲನೆ ಮತ್ತು ಪ್ರಯಾಣಿಕರ ಜಾಗೃತಿ ಕುರಿತು ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿವೆ. ಮುಂದಿನ ದಿನಗಳಲ್ಲಿ ಈ ಪ್ರಯಾಣಿಕನ ಹಠ ವರ್ತನೆಯ ಹಿಂದಿನ ಕಾರಣಗಳ ಕುರಿತು ಹೆಚ್ಚಿನ ವಿವರಗಳು ಹೊರಬರುವ ನಿರೀಕ್ಷೆ ಇದೆ.
ಚೆನ್ನಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನದಲ್ಲಿನ ಅಚ್ಚರಿಯ ಘಟನೆಯ ಕುರಿತು ಹೊಸ ಮಾಹಿತಿ ಬೆಳಕಿಗೆ ಬಂದಿದೆ. ಚಾರ್ಜರ್ ಇಂದ ಬಂದ ಏನ್ ಅರೇಬಿಯಾ ವಿಮಾನದಲ್ಲಿ ತಯಾರಿಸುತ್ತಿದ್ದ ಪ್ರಯಾಣಿಕ ನೊಬ್ಬ ಹಠಾತ್ ವರ್ತನೆಯ ಹಿಂದಿನ ಕಾರಣ ಆರೋಗ್ಯ ಸಮಸ್ಯೆಯಾಗಿರಬಹುದು ಎಂದು ಪ್ರಾಥಮಿಕ ತನಿಕೆಯಲ್ಲಿ ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸಂಬಂಧಿತ ಪ್ರಯಾಣಿಕನು ಪ್ರಯಾಣದ ಅವಧಿಯಲ್ಲಿ ತೀವ್ರ ಅಸ್ವಸ್ಥತೆದಿಂದ ಬಳಲುತ್ತಿದ್ದ. ಆತ ಹಲವಾರು ಬಾರಿ "ತಮಗೆ ವಾಂತಿ ಬರುತ್ತಿದೆ" ಎಂದು ಸಿಬ್ಬಂದಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ವಿಮಾನದ ಒಳಗೆ ಎರಡು ಬಾರಿ ವಾಂತಿ ಮಾಡಿಕೊಂಡಿದ್ದರಿಂದ ಮಾನಸಿಕ ಹಾಗೂ ದೈಹಿಕ ಅಸ್ವಸ್ಥತೆ ಹೆಚ್ಚಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ವಿಮಾನ ರನ್ ವೇಯಲ್ಲಿ ಇಳಿದು ಟ್ಯಾಕ್ಸಿವೇ ಮೂಲಕ ಪಾರ್ಕಿಂಗ್ ಬೇರ್ ಕಡೆ ಸಾಗುತ್ತಿದ್ದ ಸಂದರ್ಭದಲ್ಲಿ, ನಿಮಾನ ಇನ್ನು ಸಂಪೂರ್ಣವಾಗಿ ನಿಂತಿರದ ಸ್ಥಿತಿಯಲ್ಲೇ ಈ ಘಟನೆ ನಡೆದಿದೆ. ಈ ವೇಳೆ ಪ್ರಯಾಣಿಕ ನಿಗೆ ಉಂಟಾದ ತೀವ್ರ ಅಸ್ವಸ್ಥತೆ ಮತ್ತು ಒತ್ತಡದಿಂದ ಆದ ತುರ್ತು ನಿರ್ಗಮನ ಬಾಗಿಲು ಕೆರೆಯುವ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಅಧಿಕಾರಿಗಳು ಅನುಮಾನವೆಕ್ತಪಡಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆಯೇ ವಿಮಾನ ಪೈಲೆಟ್ ತಕ್ಷಣ ನೆಲದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದರು. ನಂತರ ತ್ವರಿತವಾಗಿ ಕಾರ್ಯಪ್ರವೃತ್ತರಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಸಿಬ್ಬಂದಿ ಆ ಪ್ರಯಾಣಿಕನನ್ನು ವಶಕ್ಕೆ ಪಡೆದರು.
ಮುಂದಿನ ತನಿಖೆಗಾಗಿ ಆತನನ್ನು ಸ್ಥಳೀಯ ಪೊಲೀಸರಿಗೆ ಹತ್ತಾಂತರಿಸಲಾಗಿದೆ. ವರದಿಗಳ ಪ್ರಕಾರ, ಬಂದಿದ್ದ ಪ್ರಯಾಣಿಕನು ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ.
ಈ ಘಟನೆಯು ವಿಮಾನಯಾನ ಸುರಕ್ಷತೆ ಹಾಗೂ ಪ್ರಯಾಣಿಕರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮಹತ್ವದ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಅಧಿಕಾರಿಗಳು ಸಂಪೂರ್ಣ ತನಿಖೆ ನಡೆಸುತ್ತಿದ್ದು, ತುರ್ತು ನಿರ್ಗಮನ ಬಾಗಿಲು ತೆರೆಯುವ ಪರಿಸ್ಥಿತಿಗೆ ನಿಖರ ಕಾರಣವೇನು ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ಘಟನೆ ಯ ಪರಿಣಾಮವಾಗಿ ಸುರಕ್ಷತಾ ಕ್ರಮಗಳನ್ನು ತಕ್ಷಣ ಕಠಿಣ ಗೊಳಿಸಲಾಯಿತು. ಘಟನೆಯ ಬಳಿಕ ಭದ್ರತಾ ದೃಷ್ಟಿಯಿಂದ ಮುಖ್ಯ ರನ್ ವೇರಿಯನ್ನು ಬೆಳಗ್ಗೆ 3.23 ರಿಂದ 4.23ರ ವರೆಗೆ ಒಂದು ಗಂಟೆಕಾಲ ಮುಚ್ಚಲಾಗಿದ್ದು, ಈ ಅವಧಿಯಲ್ಲಿ ಎಲ್ಲಾ ವಿಮಾನಗಳ ಸಂಚಾರವನ್ನು ದ್ವಿತೀಯ ರನ್ ವೇಗೆ ಮರು ಮರು ನಿರ್ದೇಶಕಲಾಗಿದೆ.
ಅದೃಷ್ಟವಶಾತ್, ಈ ಘಟನೆಯಲ್ಲಿ ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ ಹಾಗೂ ಸಿಬ್ಬಂದಿ ಅಥವಾ ಪ್ರಯಾಣಿಕರಿಗೂ ಗಾಯಗಳಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೂ, ವಿಮಾನ ಸಂಪೂರ್ಣವಾಗಿ ನಿಂತಿರದ ವೇಳೆ ತುರ್ತು ನಿರ್ಗಮನದ ಬಾಗಿಲು ಕರೆಯಲ್ಪಟ್ಟಿರುವುದು ಗಂಭೀರ ಭದ್ರತಾ ಉಲ್ಲಂಘನೆಯಾಗಿ ಪರಿಗಣಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಿಮಾನ ಯಾರ ಸುರಕ್ಷಿತ ನಿಯಮಗಳ ಪಾಲನೆ ಕುರಿತು ಸಮಗ್ರ ತನಿಖೆ ಆರಂಭಿಸಲಾಗಿದೆ. ಘಟನೆ ಸಂದರ್ಭದಲ್ಲಿ ನ ಭದ್ರತಾ ಕ್ರಮಗಳು ಸಿಬ್ಬಂದಿಯ ಪ್ರತಿಕ್ರಿಯೆ ಹಾಗೂ ಪ್ರಯಾಣಿಕನ ವರ್ತನೆ ಕುರಿತು ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ.
ಈ ಘಟನೆ ವಿಮಾನಯಾನ ಕ್ಷೇತ್ರದಲ್ಲಿ ಸುರಕ್ಷಿತ ಫೋಟೋ ಕಾಲ್ ಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ತೋರಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.
Also Read:
ಗ್ಯಾಸ್ ಬೆಲೆ ಶಾಕ್! 19 ಕೆಜಿ ಕಮರ್ಷಿಯಲ್ ಸಿಲಿಂಡರ್ ದರ ಎಷ್ಟು ಗೊತ್ತಾ?