Belagavi news:
ದಾವಣಗೆರೆ: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಚನಾನಂದ ಸ್ವಾಮೀಜಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಠದ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನೀಡಿರುವ ಈ ಘಟನೆ ಹಿನ್ನೆಲೆಯಲ್ಲಿ ಹರಿಹರ್ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಭಕ್ತರ ದಂಡು ಸುತ್ತುವರಿದಿದೆ.
ಮಠದ ಟ್ರಸ್ಟ್ ನವರ ಷಡ್ಯಂತ್ರದಿಂದಲೇ ಈ ಪ್ರಕರಣ ದಾಖಲಿಸಲಾಗಿದೆ ಎಂದು ಭಕ್ತರು ಗಂಭೀರ ಆರೋಪ ಮಾಡಿದ್ದಾರೆ. ಸ್ವಾಮೀಜಿಯನ್ನು ಜೈಲಿಗೆ ಕಳುಹಿಸಿ ಮಠವನ್ನು ಖಾಲಿ ಮಾಡಿಸುವ ತಂತ್ರ ರೂಪಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಪ್ರಕರಣ ಸಂಪೂರ್ಣವಾಗಿ ಸುಳ್ಳು ಎಂದು ಹೇಳಿದ ಭಕ್ತರು ಸ್ವಾಮಿ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಸ್ವಾಮೀಜಿಯವರ ಪರವಾಗಿ ನಿಲ್ಲುತ್ತೇವೆ ಎಂದು ಭಕ್ತರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ ಅವರು ಮಾತನಾಡಿ, "ಹರಿಹರದಲ್ಲಿ ಲೆಕ್ಕ ಕೊಡಬೇಕು" ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಬೆಳವಣಿಗೆಯಿಂದ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ.
ಹರಿಹರ ಗ್ರಾಮಾಂತರ ಠಾಣೆಯಲ್ಲಿ ವಚನಾನಂದ ಸ್ವಾಮೀಜಿ ವಿಚಾರಣೆ ಮುಂದುವರೆದಿದೆ. ಕಳೆದ ನಾಗು ಗಂಟೆಗಳಿಂದ ಗ್ರಾಮೀಣ ವಿಭಾಗದ ಡಿವೈಎಸ್ ಪಿ ಬಸವರಾಜ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಹರಿಹರ ಗ್ರಾಮಾಂತರ ಠಾಣೆ ಎದುರು ವಚನಾನಂದ ಸ್ವಾಮೀಜಿ ಭಕ್ತರ ಜಮಾವಣೆ ಆಗಿದೆ.
ವಚನಾನಂದ್ ಶ್ರೀಗಳ ಭಕ್ತ ಹಾಗೂ " ಲೆಕ್ಕ ಕೊಡಿ ಚಳವಳಿ ಸಮಿತಿ" ಅಧ್ಯಕ್ಷ ಪರಮೇಶ್ವರ್ ಗೌಡ ಅವರ ಮಠದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಟ್ರಸ್ಟ್ ನವರ ಷಡ್ಯಂತ್ರದಿಂದಲೇ ಈ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಸ್ವಾಮೀಜಿಯನ್ನು ಜೈಲಿಗೆ ಕಳುಹಿಸಿ ಮಠವನ್ನು ಖಾಲಿ ಮಾಡಿಸುವ ತಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದವರು, ಈ ಕೇಸ್ ಸಂಪೂರ್ಣವಾಗಿ ಸುಳ್ಳು ಎಂದು ಹೇಳಿದ್ದಾರೆ. ಸ್ವಾಮೀಜಿ ಯಾರ ಮೇಲೆ ಅನಗತ್ಯ ಹಾಗೂ ಆಧಾರ ರಹಿತ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಾವು ಸ್ವಾಮೀಜಿಯ ಪರವಾಗಿಯೇ ಇರುತ್ತೇವೆ. ಮುಂದೆ ಏನಾಗುತ್ತೋ ನೋಡುತ್ತೇವೆ" ಎಂದು ಅವರು ತಿಳಿಸಿದ್ದಾರೆ. ಜಾಮೀನಿಗಾಗಿ ಒಂದು ಲಕ್ಷ ರೂಪಾಯಿ ಶ್ಯೂರಿಟಿ ಬಾಂಡ್ ನೀಡಲಾಗಿದೆ ಎಂದು ಸಹ ಹೇಳಿದ್ದಾರೆ.
ಮಠದ ಹಣ ತಿಂದವರು ಎಸಿ ರೂಮ್ನಲ್ಲಿ ಇದ್ದಾರೆ, ಆದರೆ ಭಕ್ತರು ಬಿಸಿಲಿನಲ್ಲಿ ನಿಲ್ಲಬೇಕಾಗಿದೆ ಎಂದು ಅವರು ಅಸ ಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾನೂನಿನ ಮೇಲೆ ನಮಗೆ ಸಂಪೂರ್ಣ ಭರವಸೆ ಇದೆ ಶ್ರೀಗಳು ತನಿಖೆಗೆ ಸಹಕಾರಿ ನೀಡುತ್ತಾರೆ ಎಂದು ಪರಮೇಶ್ವರ ಗೌಡ ತಿಳಿಸಿದ್ದಾರೆ.
Also Read:
ಜನ ನಾಯಗನ್ ಚಿತ್ರ ಬಿಡುಗಡೆ ತಡೆ : ನಿರ್ಮಾಪಕ ನೀಡಿದ ಹೊಸ ಮಾಹಿತಿ ಏನು?