Belagavi News :
ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ 'ಸಿಗಂದೂರು ಸೇತುವೆ' ಚೌಡೇಶ್ವರಿ ದೇವಾಲಯವನ್ನು ಸಂಪರ್ಕಿಸುವ ಹಾಗೂ ಶರಾವತಿ ಹಿನ್ನೀರಿನ ಮೇಲೆ ನಿರ್ಮಾಣಗೊಂಡಿರುವ ಐತಿಹಾಸಿಕ 'ಸಿಗಂದೂರು ಸೇತುವೆ' ಸಾರ್ವಜನಿಕ ಸೇವೆಗೆ ಮುಕ್ತವಾಗಿ ಒಂದು ವರ್ಷ ಪೂರ್ಣಗೊಳಿಸಿದೆ.
ಸೇತುವೆಯ ಮೊದಲ ವರ್ಷದ ಸಂಭ್ರಮವನ್ನು ಮಲೆನಾಡಿನ ಗಡಿಭಾಗದ ಜನರು ವಿಶೇಷ ರೀತಿಯಲ್ಲಿ ಆಚರಿಸಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಹಲವು ವರ್ಷಗಳ ನಿರೀಕ್ಷೆಯ ಬಳಿಕ ನಿರ್ಮಾಣಗೊಂಡ ಈ ಸೇತುವೆ, ಸ್ಥಳೀಯ ಜನರ ಸಂಚಾರಕ್ಕೆ ಹೊಸ ಸಂಪರ್ಕ ಕಲ್ಪಿಸುವುದರ ಜೊತೆಗೆ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ.
'ಸಿಗಂದೂರು ಸೇತುವೆಯಿಂದಾಗಿ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಪ್ರಯಾಣದ ಅನುಕೂಲತೆ ಹೆಚ್ಚಾಗಿದ್ದು, 'ಸಿಗಂದೂರು ದೇವಾಲಯಕ್ಕೆ ಆಗಮಿಸುವ ಭಕ್ತರು ಹಾಗೂ ಸ್ಥಳೀಯರಿಗೆ ಹೆಚ್ಚಿನ ನೆರವಾಗಿದೆ. ಸೇತುವೆಯ ಒಂದು ವರ್ಷದ ಪ್ರಯಾಣವನ್ನು ಸ್ಮರಣೀಯವಾಗಿಸಲು ವಿಶೇಷ ವಿದ್ಯುತ್ ದೀಪಾಲಂಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಳೆದ ವರ್ಷ ಜುಲೈ ತಿಂಗಳಲ್ಲಿ ಉದ್ಘಾಟನೆಗೊಂಡಿದ್ದ ಸುಂದರ್ ಕೇಬಲ್ ಸೇತುವೆ ಇದೀಗ ತನ್ನ ಮೊದಲ ವರ್ಷದ ಸಂಭ್ರಮದಲ್ಲಿದೆ. ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇಡೀ 'ಸಿಗಂದೂರು ಸೇತುವೆಗೆ ವಿಶೇಷ ವಿದ್ಯುತ್ ದೀಪಾಲಂಕಾರ" ಮಾಡಲಾಗಿದ್ದು, ಸೇತುವೆ ರಾತ್ರಿ ವೇಳೆ ಬಣ್ಣಬಣ್ಣದ ಬೆಳಕಿನಿಂದ ಕಂಗೊಳಿಸುತ್ತಿದೆ.
ಎಲ್ಇಡಿ ದೀಪಗಳಿಂದ ಅಲಂಕೃತಗೊಂಡ ಸೇತುವೆಯು ಶರಾವತಿ ಹಿನ್ನೀರಿನ ನಡುವೆ ಅದ್ಭುತ ದೃಶ್ಯವನ್ನು ಸೃಷ್ಟಿಸಿದ್ದು, ನೋಡಲು ಸ್ವರ್ಗಲೋಕದಂತೆ ಭಾಸವಾಗುತ್ತಿತ್ತು. ಕತ್ತಲಿನ ನಡುವೆ ಬೆಳಕಿನ ವೈಭವದಲ್ಲಿ ಮಿನುಗಿದ ಸೇತುವೆಯ ರಮಣೀಯ ದೃಶ್ಯಗಳು ಸ್ಥಳೀಯರು ಹಾಗೂ ಪ್ರವಾಸಿಗರ ಗಮನ ಸೆಳೆದಿವೆ.
'ಸಿಗಂದೂರು ಸೇತುವೆಯ ಈ ಮನಮೋಹಕ ದೃಶ್ಯಗಳನ್ನು ಡ್ರೋನ್ ಕ್ಯಾಮೆರಾ ಮೂಲಕ ಸೆರೆಹಿಡಿಯಲಾಗಿದ್ದು, ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಶರಾವತಿ ಹಿನ್ನೀರಿನ ಸೌಂದರ್ಯದೊಂದಿಗೆ ಸೇತುವೆ ಬೆಳಕಿನ ಅಲಂಕಾರವು ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.
ಒಂದು ವರ್ಷದ ಯಶಸ್ವಿ ಪಯಣದ ಸಂಭ್ರಮದಲ್ಲಿ ಕಂಗೊಳಿಸುತ್ತಿರುವ 'ಸಿಗಂದೂರು ಸೇತುವೆ' ಇದೀಗ ಮಲೆನಾಡಿನ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಗುರುತಿಸಿಕೊಳ್ಳುತ್ತಿದೆ.