belagavi news:
"ಜಿಲ್ಲೆಯ ಕೀರ್ತಿ ಪತಾಕೆ ಇನ್ನಷ್ಟು ಎತ್ತರಕ್ಕೆ ಹಾರಿಸಿ" ಎಂದು ಸಂಸದರು ಶ್ಲಾಘನೆ ವ್ಯಕ್ತಪಡಿಸಿದ್ದು ವಿದ್ಯಾರ್ಥಿನಿಯ ಪರಿಶ್ರಮ ಮತ್ತು ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ರಾಜ್ಯ ಟಾಪರ್ ಬೃಂದಾ ಅವರ ಸಾಧನೆಗೆ ಭರ್ಜರಿ ಗೌರವ!
ಜಿಲ್ಲಾ ಬಿಜೆಪಿ ಪರವಾಗಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಪಕ್ಷದ ಪದಾಧಿಕಾರಿಗಳು ಬೃಂದಾ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು.
ವಿದ್ಯಾರ್ಥಿನಿಯ ಈ ಅಪೂರ್ವ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಜಿಲ್ಲೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ಚಿಕ್ಕಮಂಗಳೂರು: ರಾಜ್ಯ ಟಾಪರ್ ಬೃಂದಾಗೆ ಭರ್ಜರಿ ಸನ್ಮಾನ್
ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶದಲ್ಲಿ 625 ಕ್ಕೆ 625 ಅಂಕಗಳನ್ನು ಗಳಿಸಿ ರಾಜಕ್ಕೆ ಪ್ರಥಮ ಸ್ಥಾನ ಪಡೆದಿರುವ ಬೃಂದ ಅವರ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಸೋಮವಾರ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷರು ಎಂಆರ್ ದೇವರಾಜ್ ಶೆಟ್ಟಿ ಹಾಗೂ ಪಕ್ಷದ ಪದಾಧಿಕಾರಿಗಳು ಚಿಕ್ಕಮಂಗಳೂರಿನ ಕೋಟೆ ಹೊಸ ಬಡಾವಣೆಯಲ್ಲಿರುವ ಬೃಂದಾವರ ನಿವಾಸಿಕೆ ಭೇಟಿ ನೀಡಿ ಅಭಿನಂದಿಸಿದರು.
ಜಿಲ್ಲಾ ಬಿಜೆಪಿ ಪರವಾಗಿ ಬೃಂದಾ ಅವರಿಗೆ ಶಾಲು ಹೊದಿಸಿ ಗೌರವ ಸಲಿಸಲಾಗಿದು ಅವರ ಪರಿಶ್ರಮ ಮತ್ತು ನಿಷ್ಠೆಯನ್ನು ಶ್ಲಾಘಿಸಿದರು . ಈ ವೇಳೆ ನಾಯಕರು ಬೃಂದಾ ಅವರ ಬೆನ್ನು ತಟ್ಟಿ ಮುಂದಿನ ಭವಿಷ್ಯದಲ್ಲಿಯೂ ಇದೆ ರೀತಿ ಸಾಧನೆ ಮುಂದುವರಿಸಲಿ ಎಂದು ಹಾರೈಸಿದರು. ಜಿಲ್ಲೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದ ಈ ಸಾಧನೆ ಯುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು ಎಲ್ಲರಿಗೂ ಹೆಮ್ಮೆ ತಂದಿದೆ.
" ನಿಮ್ಮ ಸಾಧನೆಯಿಂದ ಜಿಲ್ಲೆಗೆ ಕೀರ್ತಿ ಸಂದಂತಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಾಧನೆಗಳ ಮೂಲಕ ಜಿಲ್ಲೆಯ ಕೀರ್ತಿ ಪತಾಕೆ ಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಿ" ಎಂದು ಸಂಸದ ಕೋಟ್ ಶ್ರೀನಿವಾಸ್ ಪೂಜಾರಿ ಹರಿಸಿ ಅಭಿನಂದಿಸಿದರು.
625ಕ್ಕೆ 625 ಅಂಕಗಳು- ಇದು ಸಾಮಾನ್ಯ ಸಾಧನೆಯಲ್ಲ!
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಗಳಿಸುವುದು ಅತ್ಯಂತ ಅಪೂರ್ವ ಸಾಧನೆ. ಈ ರೀತಿಯ ಮಹತ್ತರ ಸಾಧನೆಯನ್ನು ಮೊದಲ ಬಾರಿಗೆ ಮಾಡಿದ ವಿದ್ಯಾರ್ಥಿ ನೀವಾಗಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸಲಾಯಿತು.
ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆ ಸ್ವಲ್ಪ ಕುಸಿತ ಕಂಡಿದ್ದರು ನಿಮ್ಮ ಸಾಧನೆ ಆ ಕೊರತೆಯನ್ನು ಮರೆ ಮಾಡುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತವಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ ಆರ್ ದೇವರಾಜ್ ಶೆಟ್ಟಿ, ಈ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ಅಭಿನಂದಿಸಿ ಈ ನಿಮ್ಮ ಸಾಧನೆ ಭವಿಷ್ಯದ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದಲ್ಲಿ ಸ್ಪೂರ್ತಿ ನೀಡಲಿದೆ ಎಂದರು.
ಸನ್ಮಾನ್ ಕಾರ್ಯಕ್ರಮದಲ್ಲಿ ಹಳವರ ಉಪಸ್ಥಿತಿ: ಈ ಗೌರವ ಸಮಾರಂಭದಲ್ಲಿ ಜಿಲ್ಲಾ ಬಿಜೆಪಿ ವಕ್ತಾರ್ ಹಿರೇಮಗಳೂರು ಪುಟ್ಟಸ್ವಾಮಿ ಪ್ರಕೋಷ್ಟಗಳ ಸಂಚಾಲಕ ಚಾಮಿನ್, ಬಿಎಸ್ಎನ್ಎಲ್ ಸಲಹಾ ಸಮಿತಿ ಸದಸ್ಯ ವಿನೋದ್ ಭೋಗಸೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯುವ ಮೋರ್ಚಾ ನಗರ ಅಧ್ಯಕ್ಷ ಜೀವನ್ ಕೋಟೆ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಶಶಿ ಆಲ್ದೂರು, ಸಂಸದರ ಆಪ್ತ ಸಹಾಯಕರಾದ ಸೌರಭ ಹಾಗೂ ಯತೀಶ್ ಕೂಡ ಭಾಗವಹಿಸಿ ಬೃಂದಾ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದರು.
ಎಸ್ ಎಸ್ ಎಲ್ ಸಿ ಫಲಿತಾಂಶ: ಇತ್ತೀಚಿಗೆ 2025 26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ -1 ರ ಫಲಿತಾಂಶ ಬಿಡುಗಡೆಯಾಗಿತ್ತು. ಮೊದಲ ಬಾರಿಗೆ ಪರೀಕ್ಷೆ ಬರೆದಿದ್ದ 7,70,209 ವಿದ್ಯಾರ್ಥಿಗಳ ಪೈಕಿ 7,24,794 ಮಂದಿ ಉತ್ತೀರ್ಣರಾಗಿದ್ದರು. ಕಳೆದ ಸಾಲಿಗೆ ಹೋಲಿಸಿದರೆ ಶೇ. 14.06 ರಷ್ಟು ಫಲಿತಾಂಶದಲ್ಲಿ ಸುಧಾರಣೆಯಾಗಿದೆ.
ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಕನ್ನಡ (98.40) ಮತ್ತು ಉಡುಪಿ (98.18) ಮೊದಲೆರಡು ಅಗ್ರಸ್ಥಾನ ಪಡೆದರೆ, ಕಲ್ಬುರ್ಗಿ (85.06) ಮತ್ತು ಮಧುಗಿರಿ (90.26) ಕೊನೆಯ ಸ್ಥಾನಗಳಿಗೆ ಜಾರಿವೆ. 7 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳಿಸಿದ್ದಾರೆ.
Also Read: