H16 News
Logo

By Samreen | Published on November 10, 2025

Image Not Found
Education / November 10, 2025

ಇದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ: ತರಗತಿ 5, ವಿದ್ಯಾರ್ಥಿಗಳು 13 , ಶಿಕ್ಷಕ ಒಬ್ಬ

ಆಂಧ್ರದ ಶ್ರೀ ಸತ್ಯಸಾಯಿ ಜಿಲ್ಲೆಯ ಬಟ್ಟಲಪಲ್ಲಿ ಮಂಡಲದ ರಾಘವಂಪಲ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 5 ತರಗತಿಗಳಿಗೆ ಒಬ್ಬರೇ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

ಶ್ರೀ ಸತ್ಯಸಾಯಿ(ಆಂಧ್ರ ಪ್ರದೇಶ): ಎಲ್ಲ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಸೇರಿಸಿಕೊಂಡು ಕಳೆದ ಹಲವು ದಿನಗಳಿಂದ ಹೀಗೆ ಮಾಡುತ್ತಿರುವುದು ಇಲ್ಲಿನ ಸಮಸ್ಯೆಗೆ ಹಿಡಿದ ಕೈಗನ್ನಡಿ. 1ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಹೇಳುವಾಗ ಉಳಿದ ನಾಲ್ಕು ತರಗತಿಗಳ ಮಕ್ಕಳು ಸಹ ಅದನ್ನೇ ಕೇಳುತ್ತಾರೆ. ಇಲ್ಲಿ ದಿನವಿಡೀ ಅದೇ ರೀತಿ ನಡೆಯುತ್ತದೆ. ಪ್ರತಿ ವಿದ್ಯಾರ್ಥಿಯು ಆ ಕ್ಷಣದಲ್ಲಿ ಏನು ಕಲಿಸಲಾಗುತ್ತಿದೆಯೋ ಅದನ್ನು ಕಲಿಯಬೇಕಾದ ಪರಸ್ಥಿತಿ ಇಲ್ಲಿದೆ. 1ನೇ ತರಗತಿಯಲ್ಲಿ ಇಬ್ಬರು, 2ನೇ ತರಗತಿಯಲ್ಲಿ ನಾಲ್ಕು, 3ನೇ ತರಗತಿಯಲ್ಲಿ ಇಬ್ಬರು, 4ನೇ ತರಗತಿಯಲ್ಲಿ ಮೂರು ಮತ್ತು 5ನೇ ತರಗತಿಯಲ್ಲಿ ಇಬ್ಬರು... ಇದು ಶ್ರೀ ಸತ್ಯಸಾಯಿ ಜಿಲ್ಲೆಯ ಬಟ್ಟಲಪಲ್ಲಿ ಮಂಡಲದ ರಾಘವಂಪಲ್ಲಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ. ಶಾಲೆಯಲ್ಲಿ ಒಟ್ಟು 13 ವಿದ್ಯಾರ್ಥಿಗಳಿದ್ದು, 1ರಿಂದ 5ನೇ ತರಗತಿಯವರೆಗಿನ ಈ ಐದು ತರಗತಿಗಳಿಗೆ ಒಬ್ಬರೇ ಶಿಕ್ಷಕರು ಪಾಠ ಮಾಡುತ್ತಿದ್ದಾರೆ ಎನ್ನುವುದು ಗಮನಾರ್ಹ. ಎಸ್ಜಿಟಿ ರಾಮಮೂರ್ತಿ ಇಲ್ಲಿ ಪಾಠ ಮಾಡುವ ಶಿಕ್ಷಕರು. ಗುಣಮಟ್ಟದ ಶಿಕ್ಷಣಕ್ಕೆ ಪೆಟ್ಟು: ಓರ್ವ ಶಿಕ್ಷಕ, ಐದು ತರಗತಿಗಳು, ಒಂದು ಕೋಣೆಯಲ್ಲಿ ನಡೆಯುತ್ತಿರುವ ಶಾಲೆಯ ಈ ಚಿತ್ರಣವು ಇಡೀ ಗ್ರಾಮೀಣ ಶಾಲೆಗಳ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ. ಹೀಗಾದಲ್ಲಿ ಗುಣಮಟ್ಟದ ಶಿಕ್ಷಣವನ್ನು ಕಾಯ್ದುಕೊಳ್ಳುವುದು ಕಷ್ಟ. ಪ್ರತಿ ಮಗುವೂ ಅರ್ಹವಾದ ನಿರ್ದಿಷ್ಟ ಕಲಿಕೆಯನ್ನು ಪಡೆಯುವುದು ಅವರ ಹಕ್ಕು. ಸಂಬಂಧಪಟ್ಟ ಅಧಿಕಾರಿಗಳು ಇಂತಹ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಶಿಕ್ಷಕರ ಬಲವನ್ನು ಸೀಮಿತಗೊಳಿಸುವ ನಿಯಮ: ಇಲ್ಲಿನ ಶಿಕ್ಷಣ ಇಲಾಖೆಯ ಮಾನದಂಡಗಳ ಪ್ರಕಾರ, ಒಂದು ಶಾಲೆಯಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ, ಒಬ್ಬ ಶಿಕ್ಷಕರನ್ನು ಮಾತ್ರ ನೇಮಿಸಬಹುದು. ಆ ನಿಯಮವು ವಯಸ್ಸು ಮತ್ತು ಕಲಿಕೆಯ ಮಟ್ಟದಲ್ಲಿ ಅಗಾಧ ವ್ಯತ್ಯಾಸವಿದ್ದರೂ, ರಾಮಮೂರ್ತಿಯವರು ಎಲ್ಲಾ ತರಗತಿಗಳನ್ನು ಏಕಾಂಗಿಯಾಗಿ ನಿರ್ವಹಿಸುವಂತೆ ಮಾಡಿದೆ. ಐದನೇ ತರಗತಿಯ ಮಕ್ಕಳಿಗೆ ಒಂದನೇ ತರಗತಿಯ ಪಾಠ: ಕೊಠಡಿ ಒಂದೇ ಆಗಿದ್ದರಿಂದ ಅಲ್ಲದೇ ಶಿಕ್ಷಕರು ಒಬ್ಬರೇ ಇದ್ದುದರಿಂದ ಐದನೇ ತರಗತಿಯ ವಿದ್ಯಾರ್ಥಿಗಳು ಸಾಮಾನ್ಯವಾಗಿ ಇಡೀ ವರ್ಷ ಒಂದನೇ ತರಗತಿಯ ಮಕ್ಕಳಿಗೆ ಉದ್ದೇಶಿಸಲಾದ ಪಾಠಗಳನ್ನು ಕೇಳಬೇಕಾದ ಪರಿಸ್ಥಿತಿ ಇದೆ. ಸಾಕಷ್ಟು ಬೋಧನಾ ಸಿಬ್ಬಂದಿ ಇಲ್ಲದಿರುವುದರಿಂದ ಮಕ್ಕಳ ಕಲಿಕೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದ್ದರು, ಇರುವ ಓರ್ವ ಶಿಕ್ಷಕ ಸೇರಿದಂತೆ ಪೋಷಕರು, ಗ್ರಾಮಸ್ಥರು ಹಾಗೂ ಸ್ಥಳೀಯರು ಪರಿಸ್ಥಿತಿ ಎದುರು ಅಸಹಾಯರಾಗಿದ್ದಾರೆ. ಇನ್ನಷ್ಟು ಓದಿರಿ: ಈ ಮೃಗಾಲಯದಲ್ಲಿ ಪ್ರಾಣಿಗಳಿಗೂ ಬೆಚ್ಚಗಿನ ಹೊದಿಕೆ, ಹಾಸಿಗೆ
Sponsored Ads
image computer academy
image computer academy
image computer academy
image computer academy
LANDSCAPING IN CAD
LANDSCAPING IN CAD
HSRNEWS
HSRNEWS

Related News

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy