Belagavi news:
ಆನೇಕಲ್: ಚಿತ್ರದುರ್ಗದ Renuka Swami ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಸ್ಯಾಂಡಲ್ ವುಡ್ ನಟ Darshan ಅವರನ್ನು ಪತ್ನಿ Vijayalakshmi Darshan ಹಾಗೂ ಪುತ್ರ ವಿನೀಶ್ ಇಂದು parappana Agrahara Central prison ಕೇಂದ್ರ ಕಾರಾಗೃಹದಲ್ಲಿ ಭೇಟಿ ಮಾಡಿದರು.
ದಂಪತಿಯ 23ನೇ ಮದುವೆ ವಾರ್ಷಿಕೋತ್ಸವದ ಹಿನ್ನೆಲೆ ವಿಶೇಷ ಭೇಟಿಗೆ ಅವಕಾಶ ನೀಡುವಂತೆ ವಿಜಯಲಕ್ಷ್ಮಿ, ಮೇ 15ರಂದು ಸಲ್ಲಿಸಿದ್ದ ಮನವಿಗೆ ಜೈಲು ಅಧಿಕಾರಿಗಳು ಒಪ್ಪಿಗೆ ನೀಡಿದ್ದರು. ಈ ಹಿನ್ನೆಲೆ ಇಂದು ಪುತ್ರನೊಂದಿಗೆ ಜೈಲಿಗೆ ಆಗಮಿಸಿದ ವಿಜಯಲಕ್ಷ್ಮಿ ,ಸುಮಾರು 20 ನಿಮಿಷಗಳ ಕಾಲ ದರ್ಶನ್ ಜೊತೆ ಮಾತುಕತೆ ನಡೆಸಿದರು.
ಪತ್ನಿ ಹಾಗೂ ಪುತ್ರನನ್ನು ಕಂಡ ದರ್ಶನ್ ಬಾವು ಕರಾಗಿದ್ದು. ಕುಟುಂಬಸ್ಥರನ್ನು ತಬ್ಬಿಕೊಂಡರು ಎಂಬ ಮಾಹಿತಿ ಲಭ್ಯವಾಗಿದೆ. ಈ ಭೇಟಿ ಸ್ಯಾಂಡಲ್ ವುಡ್ ವಲಯದಲ್ಲಿ ಹಾಗೂ ಅಭಿಮಾನಿಗಳ ನಡುವೆ ಭಾರಿ ಚರ್ಚೆಗೆ ಕಾರಣವಾಗಿದ್ದು. ಜೈಲು ಹೊರಗು ಅಭಿಮಾನಿಗಳ ಜಮಾವನೆ ಕಂಡು ಬಂದಿದೆ.
ಇತ್ತೀಚಿನ ಪ್ರಕರಣದ ಬೆಳವಣಿಗೆಗಳ ನಡುವೆ ನಡೆದ ಈ ಕುಟುಂಬ ಬೇಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸ್ಯಾಂಡಲ್ವುಡ್ ನಟ Darshan ಅವರ 23ನೇ ಮದುವೆ ವಾರ್ಷಿಕೋತ್ಸವದಂದು ಪತ್ನಿ Vijayalakshmi Darshan ಹಾಗೂ ಪುತ್ರ ವಿನೀಶ್ ಭಾವುಕ ಭೇಟಿ ನೀಡಿದ ಘಟನೆ ಗಮನ ಸೆಳೆದಿದೆ. ಹಣ್ಣು-ಹಂಪಲುಗಳದಿಗೆ
ಸಂಜೆ 3:30ರ ಸುಮಾರಿಗೆ ಮ್ಯಾನೇಜರ್ ನಾಗರಾಜು ಸೇರಿದಂತೆ ಐವರು parappana Agrahara Central prison ಕೇಂದ್ರ ಕಾರಾಗೃಹಕ್ಕೆ ಆಗಮಿಸಿದ್ದರು. ಕ್ವಾರಂಟೈನ್ ಜೈಲಿನಲ್ಲಿರುವ ದರ್ಶನ್ ಅವರನ್ನು ಜೈಲು ಅಧಿಕಾರಿಯೊಬ್ಬರ ನಿಗಾದಲ್ಲಿ ಸುಮಾರು 20ನಿಮಿಷಗಳ ಕಾಲ ಭೇಟಿಯಾಗಿ ಕುಟುಂಬ ಮಾತುಕತೆ ನಡೆಸಿತು. ಈ ಭೇಟಿಯ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ ಎಂದು ಮೊಲಗಳು ತಿಳಿಸಿವೆ.
Darshan ಮತ್ತು Vijayalakshmi Darshan ಅವರು ಪ್ರೀತಿಸಿ 2003ರ ಮೇ 19ರಂದು Dharmasthala Temple ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿ ವಾಹವಾಗಿದ್ದರು. ಬೆಳಗ್ಗೆ 9:10ರಿಂದ 9:50 ನಡುವೆ ಶುಭ ಮಿಥುನ ಲಗ್ನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಯ ಮದುವೆ ಸರಳವಾಗಿ ನಡೆದಿತ್ತು .
ವಾರ್ಷಿಕೋತ್ಸವದ ವಿಶೇಷ ದಿನ ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಗಂಡನ ಕೈಹಿಡಿದಿರುವ ಫೋಟೋ ಹಂಚಿಕೊಂಡು. " ಎಂದೆಂದೂ ಜೊತೆಗಿರುವುದಾಗಿ" ಭಾವುಕ ಸಂದೇಶ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಅಭಿಮಾನಿಗಳು ದಂಪತಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಚಿತ್ರದುರ್ಗದ Renuka Swami ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಸ್ಯಾಂಡಲ್ವುಡ್ ನಟ Darshan ಸಲ್ಲಿಸಿದ್ದ ಜಾಮೀನು ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ನಟ ದರ್ಶನ್ ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರಕರಣವನ್ನು ಆದ್ಯತೆ ಮೇರೆಗೆ ವಿಚಾರಣೆ ನಡೆಸಿ ಒಂದು ವರ್ಷದೊಳಗೆ ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದೆ.
ನಿಗದಿತ ಅವಧಿಯೊಳಗೆ ಸಾಕ್ಷಿಗಳ ವಿಚಾರನೇ ಪೂರ್ಣಗೊಳ್ಳದಿದ್ದರೆ. ದರ್ಶನ್ ಮತ್ತು ಜಾಮೀನು ಅರ್ಜಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಆದೇಶ ಇದೀಗ ಪ್ರಕರಣದ ಮುಂದಿನ ಬೆಳವಣಿಗೆಗಳ ಬಗ್ಗೆ ಭಾರಿ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ತನಿಖೆ ಮತ್ತು ವಿಚಾರಣೆ ವೇಗವಾಗಿ ಮುನ್ನಡೆಯಬೇಕೆಂಬ ಸುಪ್ರೀಂ ಕೋರ್ಟ್ ಸೂಚನೆಗೆ ಕಾನೂನು ವಲಯದಲ್ಲಿ ಮಹತ್ವ ನೀಡಲಾಗುತ್ತಿದೆ. ದರ್ಶನ್ ಅಭಿಮಾನಿಗಳೂ ಈ ಬೇಡವನಿಗೆಯನ್ನು ಕಣ್ಣಿಟ್ಟಿದ್ದಾರೆ.
ಚಿತ್ರದುರ್ಗದ Renuka Swami ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಸ್ಯಾಂಡಲ್ವುಡ್ ನಟ Darshan ಅವರಿಗೆ ವಿಶೇಷ ಸಂದರ್ಶನಕ್ಕೆ ಅವಕಾಶ ನೀಡುವಂತೆ ಪತ್ನಿ Vijayalakshmi Darshan ಸಲ್ಲಿಸಿದ್ದ ಮನವಿ ಇದೀಗ ಗಮನ ಸೆಳೆದಿದೆ. ಟೀ ಕುರಿತು ಪ್ರತಿಕ್ರಿಯಿಸಿದ್ದ ಕಾರಾಗೃಹ ಇಲಾಖೆ ಡಿಜಿಪಿ Alok Kumar, ಜೈಲು ಕೈಪಿಡಿ ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ಜಾಮೀನು ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿತ್ತು. ಪ್ರಕರಣದ ಸಾಕ್ಷಿಗಳ ವಿಚಾರಣೆ ವಿಳಂಬವಾಗಿತ್ತಿರುವ ಹಿನ್ನೆಲೆಯಲ್ಲಿ , ಆದ್ಯತೆ ಮೇರೆಗೆ ವಿಚಾರಣೆ ನಡೆಸಿ ಒಂದು ವರ್ಷದೊಳಗೆ ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. ಅವಧಿಯೊಳಗೆ ವಿಚಾರಣೆ ಮುಗಿಯದಿದ್ದರೆ ದರ್ಶನ್ ಮತ್ತು ಜಾಮೀನು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ಸದ್ಯ ಜಾಮೀನು ದೊರೆಯದ ಹಿನ್ನೆಲೆ ದರ್ಶನ್ ಮಾನಸಿಕವಾಗಿ ಕುಗ್ಗಿದ್ದಾರೆ ಎನ್ನಲಾಗಿದ್ದು. ಇದೇ ಕಾರಣಕ್ಕೆ ಜೈಲಿನೊಳಗೆ ವಿಶೇಷ ಬೇಟಿಗೆ ಅವಕಾಶ ನೀಡುವಂತೆ ಮೇ 15ರಂದು ವಿಜಯಲಕ್ಷ್ಮಿ ಕಾರಾಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು. ಬೇಡವನಿಗೆ ದರ್ಶನ್ ಪ್ರಕರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
Also Read: