Belagavi News:
ದೇವಸ್ಥಾನಕ್ಕೆ ಪ್ರವೇಶಿಸುವಾಗ ಮೆಟ್ಟಿಲುಗಳನ್ನು ಮುಟ್ಟಿ ನಮಸ್ಕರಿಸುವುದು ಮತ್ತು ದರ್ಶನದ ನಂತರ ಅವುಗಳ ಮೇಲೆ ಕುಳಿತುಕೊಳ್ಳುವುದು ಕೇವಲ ಸಂಪ್ರದಾಯವಲ್ಲ, ಅದರ ಹಿಂದೆ ಆಳವಾದ ಆಧ್ಯಾತ್ಮಿಕ ನಂಬಿಕೆ ಅಡಗಿದೆ ಎಂದು ಧಾರ್ಮಿಕ ನಂಬಿಕೆಗಳಲ್ಲಿ ಹೇಳಲಾಗಿದೆ. ಇದು ದೈವಿಕ ಶಕ್ತಿಗೆ ಗೌರವ ಸೂಚಿಸುವ ಒಂದು ಪ್ರಮುಖ ಆಚರಣೆ ಎಂದು ಪರಿಗಣಿಸಲಾಗಿದೆ.
ಭಕ್ತರು ದೇವಸ್ಥಾನಕ್ಕೆ ಪ್ರವೇಶಿಸುವ ಮೊದಲು ಪಾದರಕ್ಷೆಗಳನ್ನು ಹೊರಗಿಡುವುದು, ಕೈ ಕಾಲುಗಳನ್ನು ತೊಳೆದುಕೊಳ್ಳುವುದು ಹಾಗೂ ಕೆಲವೊಮ್ಮೆ ತಲೆಯನ್ನು ಮುಚ್ಚಿಕೊಳ್ಳುವುದು ಸಾಮಾನ್ಯವಾಗಿದೆ. ಇದರ ಜೊತೆಗೆ, ದೇವಸ್ಥಾನದ ಮೊದಲ ಮೆಟ್ಟಿಲನ್ನು ಕೈಯಿಂದ ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುವ ಸಂಪ್ರದಾಯವು ಬಹಳಷ್ಟು ಕಡೆಗಳಲ್ಲಿ ಅನುಸರಿಸಲಾಗುತ್ತದೆ. ಇದು ದೇವರ ಪಾದಗಳಿಗೆ ಸಮಾನವಾದ ಪವಿತ್ರತೆಯನ್ನು ಮೆಟ್ಟಿಲುಗಳಿಗೆ ನೀಡುವ ನಂಬಿಕೆಯ ಭಾಗವಾಗಿದೆ.
ಮೆಟ್ಟಿಲುಗಳನ್ನು ಮುಟ್ಟುವ ಹಿಂದಿನ ಆಧ್ಯಾತ್ಮಿಕ ಅರ್ಥ :
ಧಾರ್ಮಿಕ ನಂಬಿಕೆಗಳ ಪ್ರಕಾರ ದೇವಸ್ಥಾನದ ಮೆಟ್ಟಿಲುಗಳು ಭಗವಂತನ ಪಾದಸ್ಪರ್ಶದ ಪ್ರತೀಕವಾಗಿವೆ. ಅವುಗಳನ್ನು ಮುಟ್ಟುವುದು ಅಹಂಕಾರವನ್ನು ತ್ಯಜಿಸುವ ಸಂಕೇತವಾಗಿದ್ದು, ದೇವರ ಸನ್ನಿಧಿಗೆ ಶರಣಾಗುವುದನ್ನು ಸೂಚಿಸುತ್ತದೆ. ಭಕ್ತನು ದೇವಾಲಯ ಪ್ರವೇಶಿಸಿದಾಗ ತನ್ನ ಮನಸ್ಸಿನ ನಕಾರಾತ್ಮಕತೆಯನ್ನು ಬಿಟ್ಟು ಶುದ್ಧ ಮನಸ್ಸಿನಿಂದ ಒಳಗೆ ಪ್ರವೇಶಿಸಬೇಕು ಎಂಬ ಸಂದೇಶವು ಇದರ ಹಿಂದೆ ಇದೆ.
ದರ್ಶನ ನಂತರ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವ ಕಾರಣವೇನು :
ದರ್ಶನ ಮುಗಿದ ಬಳಿಕ ಕೆಲ ಭಕ್ತರ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವುದು ಸಹ ಒಂದು ನಂಬಿಕೆಯ ಭಾಗವಾಗಿದೆ. ದರ್ಶನದಿಂದ ಪಡೆದ ಧನಾತ್ಮಕ ಶಕ್ತಿ ದೇಹದಲ್ಲಿ ಸ್ಥಿರವಾಗಲು ಇದು ಸಹಾಯಕ ಎಂದು ನಂಬಲಾಗುತ್ತದೆ. ಇದರಿಂದ ಮನಸ್ಸಿಗೆ ಶಾಂತಿ, ಸಮಾಧಾನ ಮತ್ತು ಆಧ್ಯಾತ್ಮಿಕ ತೃಪ್ತಿ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಆಧ್ಯಾತ್ಮಿಕ ಶುದ್ಧೀಕರಣದ ಸಂಕೇತ:
ದೇವಸ್ಥಾನ ಪ್ರವೇಶಿಸುವ ಮುನ್ನ ಮೆಟ್ಟಿಲುಗಳನ್ನು ಮುಟ್ಟುವುದು ಕೇವಲ ಶಾರೀರಿಕ ಕ್ರಿಯೆಯಲ್ಲ, ಅದು ಮಾನಸಿಕ ಶುದ್ಧೀಕರಣದ ಸಂಕೇತವಾಗಿದೆ. ಇದು ಭಕ್ತನ ಮನಸ್ಸನ್ನು ದೇವರ ಕಡೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಎಂದು ಧಾರ್ಮಿಕ ಗ್ರಂಥಗಳು ಮತ್ತು ಸಾಂಪ್ರದಾಯಗಳು ಹೇಳುತ್ತವೆ.
ಒಟ್ಟಿನಲ್ಲಿ, ದೇವಸ್ಥಾನದ ಮೆಟ್ಟಿಲುಗಳನ್ನು ಮುಟ್ಟಿನಮಸ್ಕರಿಸುವ ಸಂಪ್ರದಾಯವು ಭಕ್ತಿ, ವಿನಯ ಮತ್ತು ಆಧ್ಯಾತ್ಮಿಕ ಜಾಗೃತಿಯ ಪ್ರತಿಕವಾಗಿ ಪರಿಗಣಿಸಲಾಗಿದೆ. ಭಕ್ತಿಯ ಈ ಸಂಪ್ರದಾಯಗಳು ಇಂದಿಗೂ ಹಲವಾರು ದೇವಸ್ಥಾನಗಳಲ್ಲಿ ಶ್ರದ್ಧೆಯಿಂದ ಪಾಲಿಸಲಾಗುತ್ತಿವೆ.
ದೇವಸ್ಥಾನಗಳನ್ನು ಹಿಂದೂ ಧರ್ಮದಲ್ಲಿ ಕೇವಲ ಕಲ್ಲಿನ ಕಟ್ಟಡಗಳಾಗಿ ನೋಡಲಾಗುವುದಿಲ್ಲ. ಅವು ದೈವಿಕ ಮತ್ತು ಧನಾತ್ಮಕ ಶಕ್ತಿಯಿಂದ ತುಂಬಿರುವ ಪವಿತ್ರ ಸ್ಥಳಗಳಾಗಿವೆ ಎಂಬ ನಂಬಿಕೆ ಇದೆ. ಆದ್ದರಿಂದ ದೇವಸ್ಥಾನ ಪ್ರವೇಶಿಸುವಾಗ ಭಕ್ತರ ಶರೀರ, ಮನಸ್ಸು ಮತ್ತು ಭಾವನೆಗಳು ಸಂಪೂರ್ಣ ಶುದ್ಧವಾಗಿರಬೇಕು ಹಾಗೂ ಭಕ್ತಿಭಾವದಿಂದ ಕೂಡಿರಬೇಕು ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ದೇವಸ್ಥಾನ ಪ್ರವೇಶದ ಪ್ರತಿಯೊಂದು ಆಚರಣೆಗೂ ಆಧ್ಯಾತ್ಮಿಕ ಅರ್ಥವನ್ನು ನೀಡಲಾಗಿದೆ.
ದೇವಸ್ಥಾನಕ್ಕೆ ಪ್ರವೇಶಿಸುವಾಗ ಮೊದಲು ಮೆಟ್ಟಿಲನ್ನು ಮುಟ್ಟಿ ನಮಸ್ಕರಿಸುವ ದೈಹಿಕ ಗೌರವದ ಸಂಕೇತವೆಂದು ನಂಬಲಾಗುತ್ತದೆ. ಈ ಕ್ರೀಮಿಯ ಮೂಲಕ ಭಕ್ತನು ದೇವರ ಸನ್ನಿಧಿಗೆ ವಿನಯದಿಂದ ಶರಣಾಗುತ್ತಿರುವ ಭಾವನೆಯನ್ನು ವ್ಯಕ್ತಪಡಿಸುತ್ತಾನೆ. ಇದು ದೇವರ ಪಾದಕ್ಕೆ ಸಮಾನವಾದ ಪವಿತ್ರ ಸ್ಥಳಕ್ಕೆ ಗೌರವ ಸಲ್ಲಿಸುವ ರೂಪವಾಗಿ ಪರಿಗಣಿಸಲಾಗಿದೆ.
ಮೆಟ್ಟಿಲುಗಳನ್ನು ಮುಟ್ಟುವುದರ ಹಿಂದೆ ನಕಾರಾತ್ಮಕ ಕಥೆಯನ್ನು ತ್ಯಜಿಸುವ ಅರ್ಥವು ಅಡಗಿದೆ . ಭಕ್ತನು ತನ್ನೊಳಗಿನ ಕೆಟ್ಟ ಆಲೋಚನೆಗಳು, ಅಹಂಕಾರ ಮತ್ತು ಅಶಾಂತ ಮನಸ್ಥಿತಿಯನ್ನು ಹೊರಗೇ ಬಿಟ್ಟು , ಉದ್ದ ಮನಸ್ಸಿನಿಂದ ದೇವರ ದರ್ಶನಕ್ಕೆ ಸಿದ್ದರಾಗಬೇಕು ಎಂಬ ಸಂದೇಶವನ್ನು ಇದು ನೀಡುತ್ತದೆ. ಇದು ಮಾನಸಿಕ ಶುದ್ಧೀಕರಣ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ.
ಅಹಂಕಾರದ ವಿಸರ್ಜನೆ ಕೂಡ ಈ ಆಚರಣೆಯ ಪ್ರಮುಖ ಭಾಗವಾಗಿದೆ. ಮೆಟ್ಟಿಲುಗಳಿಗೆ ತಲೆಬಾಗಿ ನಮಸ್ಕರಿಸುವುದು ಮನುಷ್ಯನು ತನ್ನ ಅಹಂಕಾರ, ಕೋಪ ಮತ್ತು ಮಚ್ಚರವನ್ನು ದೇವರ ಪಾದದ ಬಳಿ ತ್ಯಜಿಸುತ್ತಿರುವುದನ್ನು ಸೂಚಿಸುತ್ತದೆ. ಇದು ಸಂಪೂರ್ಣ ಶರಣ ಗತಿಯ ಭಾವನೆಯನ್ನು ಪ್ರತಿನಿಧಿಸುತ್ತದೆ ಮತ್ತು ಭಕ್ತನ ಮನಸ್ಸಿನಲ್ಲಿ ವಿನಯ ಹಾಗೂ ಭಕ್ತಿಭಾವವನ್ನು ಮೂಡಿಸುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಪ್ರಕಾರ ದೇವಸ್ಥಾನದ ಮೊದಲ ಮೆಟ್ಟಿಲುಗಳು ಭಗವಂತನ ಪಾದಕ್ಕೆ ಸಮಾನವಾಗಿವೆ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ದೈವಿಕ ಶಕ್ತಿಗಳು ವಾಸಿಸುತ್ತವೆ ಎಂಬ ನಂಬಿಕೆಯು ಇದೆ. ಆದರಿಂದ ಮೆಟ್ಟಿಲುಗಳನ್ನು ಮುಟ್ಟುವುದು ಕೇವಲ ಒಂದು ಸಂಪ್ರದಾಯವಲ್ಲ, ಅದು ಭಕ್ತಿಯ ಆಳವಾದ ಸಂಕೇತವಾಗಿದೆ.
ಒಟ್ಟಿನಲ್ಲಿ, ದೇವಸ್ಥಾನ ಮೆಟ್ಟಿಲುಗಳನ್ನು ಮುಟ್ಟಿ ನಮಸ್ಕರಿಸುವ ಸಂಪ್ರದಾಯವು ದೈವಿಕ ಗೌರವ, ಮಾನಸಿಕ ಶುದ್ಧೀಕರಣ, ಅಹಂಕಾರ ವಿಸರ್ಜನೆ ಮತ್ತು ಸಂಪೂರ್ಣ ಶರಣಾಗತಿಯ ಆಧ್ಯಾತ್ಮಿಕ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಇದು ಭಕ್ತನನ್ನು ದೇವರ ಕಡೆಗೆ ಇನ್ನಷ್ಟು ಹತ್ತಿರ ಮಾಡುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿ ಪ್ರಚಲಿತವಾಗಿದೆ.
ದೇವಸ್ಥಾನ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವ ರಹಸ್ಯ ಏನು? ದೈವಿಕ ಶಕ್ತಿ ಮತ್ತು ಶಾಸ್ತ್ರಗಳ ನಂಬಿಕೆ :
ದೇವಸ್ಥಾನದಲ್ಲಿ ದೇವರ ದರ್ಶನ ಮುಗಿಸಿದ ನಂತರ ಭಕ್ತರು ಕೆಲಕಾಲ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವ ಸಂಪ್ರದಾಯವನ್ನು ಅನೇಕ ಕಡೆಗಳಲ್ಲಿ ಕಾಣಬಹುದು. ಇದು ಸಾಮಾನ್ಯವಾಗಿ ಕಾಣುವ ಕ್ರಿಯೆಯಾದರೂ, ಇದರ ಹಿಂದೆ ಆಳವಾದ ಆಧ್ಯಾತ್ಮಿಕ ಮತ್ತು ಶಾಸ್ತ್ರೀಯ ನಂಬಿಕೆ ಅಡಗಿದೆ ಎಂದು ಧಾರ್ಮಿಕ ವಿದ್ವಾಂಸರು ಹೇಳುತ್ತಾರೆ.
ಪ್ರಾಚೀನ ಪರಂಪರೆಯ ಪ್ರಕಾರ, ದೇವಸ್ಥಾನದ ಗೋಪುರ ಅಥವಾ ಶಿಖರವನ್ನು ದೇವರ ಮುಖ್ಯ ಭಾಗವೆಂದು ಮತ್ತು ಮೆಟ್ಟಿಲುಗಳನ್ನು ದೇವರ ಚರಣ ಕಮಲಗಳೆಂದು ಪರಿಗಣಿಸಲಾಗುತ್ತದೆ. ಈ ನಂಬಿಕೆಯ ಆಧಾರದ ಮೇಲೆ ಭಕ್ತರು ದರ್ಶನದ ನಂತರ ಆ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವ ಸಂಪ್ರದಾಯವನ್ನು ಅನುಸರಿಸುತ್ತಾರೆ ಎಂದು ಹೇಳಲಾಗುತ್ತದೆ.
ದೈವಿಕ ಶಕ್ತಿ ದೇಹಕ್ಕೆ ಪ್ರವೇಶಿಸುವ ನಂಬಿಕೆ:
ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವಸ್ಥಾನದ ಗರ್ಭಗುಡಿಯಿಂದ ಹೊರಹೊಮ್ಮುವ ದೈವಿಕ ತರಂಗಗಳು ಮತ್ತು ಧನಾತ್ಮಕ ಶಕ್ತಿ ಮೆಟ್ಟಿಲುಗಳ ಸುತ್ತಲೂ ಹರಡಿರುತ್ತದೆ. ಈ ಸ್ಥಳದಲ್ಲಿ ಕೆಲಕಾಲ ಕುಳಿತುಕೊಳ್ಳುವುದರಿಂದ ಆ ಶಕ್ತಿ ಭಕ್ತನ ದೇಹಕ್ಕೆ ಪ್ರವೇಶಿಸಿ ಮನಸ್ಸಿಗೆ ಶಾಂತಿ, ನೆಮ್ಮದಿ ಮತ್ತು ಮಾನಸಿಕ ಸಮತೋಲನ ನೀಡುತ್ತದೆ ಎಂದು ಹೇಳಲಾಗುತ್ತದೆ.
ಶಿಖರ ಮತ್ತು ಮೆಟ್ಟಿಲುಗಳ ಆಧ್ಯಾತ್ಮಿಕ ಅರ್ಥ:
ಶಸ್ತ್ರಗಳ ವಿವರಣೆಯಂತೆ, ಶಿಖರವು ದೇವರ ಮುಖದ ಪ್ರತಿಕವಾಗಿದ್ದು, ಮೆಟ್ಟಿಲುಗಳು ಭಗವಂತನ ಪಾದಕಮಲಗಳ ಸಂಕೇತವಾಗಿದೆ. ಆದ್ದರಿಂದ ದರ್ಶನದ ನಂತರ ಭಕ್ತರು ಪಾದ ಭಾಗಕ್ಕೆ ಸಮೀಪವಾಗಿ ಕುಳಿತುಕೊಳ್ಳುವುದು ಆದ್ಯಾತ್ಮಿಕವಾಗಿ ಶುಭಕರವೆಂದು ಪರಿಗಣಿಸಲಾಗಿದೆ.
ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವ ಸಂಪ್ರದಾಯವು ಕೇವಲ ದೈವಿಕ ವಿಶ್ರಾಂತಿ ಅಲ್ಲ, ಅದು ಭಕ್ತನ ಮನಸ್ಸಿಗೆ ಶಾಂತಿ ನೀಡುವ ಮತ್ತು ದೇವರೊಂದಿಗೆ ಆಳವಾದ ಭಕ್ತಿ ಭಾವವನ್ನು ಅನುಭವಿಸುವ ಒಂದು ವಿಧಾನವಾಗಿದೆ ಎಂದು ನಂಬಲಾಗುತ್ತದೆ. ಇದರಿಂದ ದರ್ಶನದ ನಂತರ ಅನುಭವ ಮತ್ತಷ್ಟು ಆಧ್ಯಾತ್ಮಿಕವಾಗುತ್ತದೆ ಎಂದು ಹೇಳಲಾಗುತ್ತದೆ.
ಒಟ್ಟಿನಲ್ಲಿ, ದೇವಸ್ಥಾನ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವ ಸಂಪ್ರದಾಯವು ದೈವಿಕ ಶಕ್ತಿ ಸ್ವೀಕಾರ, ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಅನುಭವದ ಸಂಕೇತವಾಗಿ ಹಿಂದೂ ಧರ್ಮದಲ್ಲಿ ಮಹತ್ವ ಪಡೆದಿದೆ.
Also Read:
ವರ್ಚುಯಲ್ ಮೂಲಕ ಕೋರ್ಟ್ ಗೆ ಹಾಜರಾದ ಅಲ್ಲು ಅರ್ಜುನ್; ಕಾಲ್ತುಳಿತ ಪ್ರಕರಣದ ವಿಚಾರಣೆ ಮುಂದೂಡಿಕೆ.