belagavi news:
ಅಪರೂಪದ ವಿದ್ಯಮಾನವೊಂದರಲ್ಲಿ ವರನ್ನು ವಧುವಿನ ಕುಟುಂಬ ನೀಡಲು ಉದ್ದೇಶಿಸಿದ್ದ 50 ಲಕ್ಷ ರೂಪಾಯಿ ವರದಕ್ಷಿಣೆಯನ್ನು ನಿರಾಕರಿಸಿದ್ದಾರೆ.
ಉಜ್ಜಯಿನಿ (ಮಧ್ಯ ಪ್ರದೇಶ): ವರದಕ್ಷಣೆ ಕಾರಣಕ್ಕಾಗಿ ಎಷ್ಟೋ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರ ಹಾಕಿದ, ದೌರ್ಜನ್ಯ ಎಸಗಿದ ಪ್ರಕರಣಗಳನ್ನು ನಾವು ಸಮಾಜದಲ್ಲಿ ನೋಡುತ್ತೇವೆ ಆದರೆ ಇಲ್ಲೋರ್ವ ವರ 50 ಲಕ್ಷ ಮೌಲ್ಯದ ವರದಕ್ಷಿಣೆಯನ್ನು ನಿರಾಕರಿಸಿದ ಸಮಾಜಕ್ಕೆ ಮಾದರಿಯಾಗಿದ್ದಾರೆ.
ವರದಕ್ಷಣೆ ಕಾರಣದಿಂದ ಅನೇಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವ ಈ ಕಾಲದಲ್ಲಿ, ಉಜ್ಜಯಿನಿ ಜಿಲ್ಲೆ ಬದ್ನಗರ ತಹಸಿಲ್ ನ ಬಾಂಗ್ರೆಡ್ ಗ್ರಾಮದಲ್ಲಿ ನಡೆದ ಈ ಘಟನೆ ಎಲ್ಲರ ಗಮನ ಸೆಳೆದಿದೆ.
ವರನ ಕುಟುಂಬವು ಹೆಣ್ಣಿನ ಕುಟುಂಬದಿಂದ ನೀಡಲು ಉದ್ದೇಶಸಿದ್ದ ಸುಮಾರು ₹ 50 ಲಕ್ಷ ಮೌಲ್ಯದ ವರದಕ್ಷಿಣೆಯನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಮಾತ್ರವಲ್ಲ, ಆ ವರದಕ್ಷಣೆಯನ್ನು ಹಿಂದುರಿಗಿಸಿ ಸಮಾಜಕ್ಕೆ ಶಕ್ತಿಶಾಲಿ ಸಂದೇಶ ನೀಡಿದೆ.
ಈ ಅಪರೂಪದ ನಡೆ ಸ್ಥಳಿಯವಾಗಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು ವರದಕ್ಷಣೆ ಪದ್ಧತಿಗೆ ವಿರುದ್ಧವಾಗಿ ಉತ್ತಮ ಉದಾಹರಣೆ ಯಾಗಿ ಪರಿಗಣಿಸಲಾಗಿದೆ. ವರದಕ್ಷಣೆ ಬೇಡವೆಂಬ ಸ್ಪಷ್ಟ ನಿಲುವಿನಿಂದ ಈ ಕುಟುಂಬ ಸಮಾಜದಲ್ಲಿ ಸಮಾನತೆ ಮತ್ತು ಜಾಗೃತಿಗೆ ಪ್ರೇರಣೆ ನೀಡಿದೆ.
ಕ್ಷತ್ರಿಯ ಮಹಾಸಭಾದ ಜಿಲ್ಲಾಧ್ಯಕ್ಷ ಜಿತೇಂದ್ರ ಸಿಂಗ್ ರಾಜಾವತ್ ಅವರ ಪುತ್ರ ಆದರ್ಶ್ ರಾಜಾವತ್ ಅವರ ವಿವಾಹವನ್ನು ಇಂದು ಜಿಲ್ಲೆಯ ದೇಪಾಲ್ಪುರ್ ತಹಸಿಲ್ ವ್ಯಾಪ್ತಿಯಲ್ಲಿ ಬರುವ ತಮಲ್ಪುರದ ರೈತ ಮಹೇಂದ್ರ ಸಿಂಗ್ ಪನ್ವರ್ ಅವರ ಪುತ್ರಿ ಬಿಂದಿಯಾ ಕುಮಾರಿ ಅವರೊಂದಿಗೆ ನಿಶ್ಚಿಯಿಸಲಾಗಿದೆ . ಭಾನುವಾರ ನಡೆದ ನಿಶ್ಚಿತಾರ್ಥ ಸಮಾರಂಭದ ಸಮಯದಲ್ಲಿ ವರನ ಕುಟುಂಬಕ್ಕೆ ವಧುವಿನ ಕುಟುಂಬವು 50 ಲಕ್ಷ ರೂಪಾಯಿ ವರದಕ್ಷಿ ನೀಡಲು ಮುಂದಾಗಿತ್ತು.
ಬದ್ನಗರ ತಹಸಿಲ್ ಬ್ಯಾಂಗ್ರೆಡ್ ನಲ್ಲಿರುವ ರೆಸಾರ್ಟ್ ನಲ್ಲಿ ಭಾನುವಾರ ತಿಲಕ್ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ವಧುವಿನ ಕುಟುಂಬವು ₹25 ಲಕ್ಷಣಗದು ಹಾಗೂ 15 ತೊಲ ಚಿನ್ನ ಸೇರಿ ಒಟ್ಟು ಸುಮಾರು ₹50 ಲಕ್ಷ ಮೌಲ್ಯದ ವರದಕ್ಷಣೆ ನೀಡಲು ಮುಂದಾಯಿತು. ಆದರೆ ಇವರ ಆದರ್ಶ್ ದೀಪ್ ರಾಜ್ವತ್ ಮತ್ತು ಅವರ ತಂದೆ ಜಿತೇಂದ್ರ ಸಿಂಗ್ ರಾಜಾವತ ಅವರು ವರದಕ್ಷಿಣೆಯನ್ನು ಸ್ವೀಕರಿಸಲು ಸ್ಪಷ್ಟವಾಗಿ ನಿರಾಕರಿಸಿದರು.
ಈ ನಿರ್ಧಾರ ಎಲ್ಲರದ ಮನಸಲಿದಿದ್ದು ವರದಕ್ಷಣೆ ಪದ್ಧತಿಗೆ ವಿರೋಧವಾದ ಶಕ್ತಿಶಾಲಿ ಸಂದೇಶವಾಗಿ ಪರಿಗಣಿಸಲಾಗಿದೆ.
ನಮಗೆ ಯಾವುದೇ ವರದಕ್ಷಣೆ ಬೇಡ. ಇದರ ಬದಲಾಗಿ ಸಾಂಕೇತಿಕವಾಗಿ ಒಂದು ಚಿನ್ನದ ಉಂಗುರವನ್ನು ಸ್ವೀಕರಿಸುತ್ತೇವೆ ಎಂದು ವರನ ಕುಟುಂಬಕ್ಕೆ ಹೇಳಿತು. ತಂದಿದ್ದ ನಗದು ಮತ್ತು ಚಿನ್ನದ ಆಭರಣಗಳನ್ನು ವಧುವಿನ ಕುಟುಂಬಕ್ಕೆ ಅತ್ಯಂತ ಗೌರವದಿಂದ ಹಿಂತಿರುಗಿಸಲಾಯಿತು. ಇದನ್ನು ವರದಕ್ಷಣೆಯೆಂಬ ಪೆಡಂಬೂತದ ವಿರುದ್ಧದ ಹೋರಾಟದಲ್ಲಿ ಮಹತ್ವದ ಮತ್ತು ಸ್ಪೂರ್ತಿದಾಯಕ ಕ್ರಮವೆಂದು ಕಾರ್ಯಕ್ರಮಕ್ಕೆ ಬಂದಿದ್ದ ಜನರು ಶ್ಲಾಘಿಸಿದ್ದಾರೆ.
ವರದಕ್ಷಣೆ ವಿರುದ್ಧ ಶಕ್ತಿ ಶಾಲಿ ಸಂದೇಶ ವರನ ತಂದೆ ಜಿತೇಂದ್ರ ಸಿಂಗ್ ರಾಜಾವತ್ ಅಭಿಪ್ರಾಯ
ವರದಕ್ಷಿಣೆ ಸ್ಥಿರಕರಿಸಿದ ಘಟನೆ ಕುರಿತು ಮಾತನಾಡಿದ ವರನ ತಂದೆ ಜಿತೇಂದ್ರ ಸಿಂಗ್ ರಾಜಾವತ್ ಅವರು ಸಾಮಾಜಿಕ ಮಹತ್ವದ ಸಂದೇಶ ನೀಡಿದ್ದಾರೆ.
ಅವರು ಹೇಳಿದ್ದು: ವರದಕ್ಷಿಣೆ ಅಂತಹ ಸಾಮಾಜಿಕ ಅನಿಷ್ಠ ಗಳನ್ನು ಸಮಾಜದಿಂದ ಇನ್ನೂ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿಲ್ಲ ಅಂತ ಕ್ರಮಗಳನ್ನು ತೆಗೆದುಕೊಂಡರೆ ಬದಲಾವಣೆ ನಿಜಕ್ಕೂ ಸಾಧ್ಯ.
ವರದಕ್ಷಣೆ ಹೊರೆಯಿಂದಾಗಿ ಅನೇಕ ಬಡ ಕುಟುಂಬಗಳು ತಮ್ಮ ಹೆಣ್ಣು ಮಕ್ಕಳ ವಿವಾಹದ ಸಮಯದಲ್ಲಿ ದೊಡ್ಡ ತೊಂದರೆಗಳನ್ನು ಎದುರಿಸುತ್ತಿರುವುದನ್ನು ಅವರು ಗಮನಕ್ಕೆ ತಂದಿದ್ದಾರೆ. ಈ ರೀತಿಯ ಸಕಾರಾತ್ಮಕ ನಿರ್ಧಾರಗಳು ಸಮಾಜದಲ್ಲಿ ಬದಲಾವಣೆ ತರುವ ಭರವಸೆ ಯನ್ನು ನೀಡುತ್ತವೆ ಎಂದು ಅವರ ಅಭಿಪ್ರಾಯ ಪಟ್ಟಿದ್ದಾರೆ.
Also Read:
ರಿಷಬ್ ಶೆಟ್ಟಿ ಸಿನಿಮಾ ಇದೀಗ ಟಾಲಿವುಡ್ ಗೆ ಎಂಟ್ರಿ