ತಿರುಮಲ ಲಡ್ಡುವಿನಲ್ಲಿ ತುಪ್ಪ ಕಲಬೆರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಬಂದ ಸಿಬಿಐ ವರದಿಗಳ ನಂತರ ವಿವಾದವು ಹೆಚ್ಚಾಗಿದೆ. ಲಡ್ಡು ತಯಾರಿಸುವಾಗ ಹಲವು ರಾಸಾಯನಿಕಗಳನ್ನು ಬಳಸಲಾಗಿದೆ ಎಂದು ಸಿಬಿಐ ತಿಳಿಸಿದೆ . ಆದ್ದರಿಂದ ವಾದಗಳು ಭುಗಿಲೆದ್ದಿವೆ.
ಆಂಧ್ರದ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಇದೀಗ ಮತ್ತೆ ಈ ಸಮಸ್ಯೆಯು ಕಾಡುತ್ತಿದೆ. ತಿರುಮಲ ತಿರುಪತಿ ದೇವಸ್ಥಾನದ ಮಂಡಳಿಯ ಮಾಜಿ ಅಧ್ಯಕ್ಷರು ಲಡ್ಡು ತಯಾರಿಸುವಾಗ ಬಳಸುವ ತುಪ್ಪದಲ್ಲಿ ಕಲಬೆರಿಕೆ ನಡೆದಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಆದ್ದರಿಂದ ವಿರೋಧ ಹೆಚ್ಚಾಗುತ್ತಿದೆ. ಕರ್ನಾಟಕದ ವ್ಯಾಸರಾಜ ಮಠದ ಮುಖ್ಯಸ್ಥರಾದ ಶ್ರೀ ವಿದ್ಯಾಶ್ರೀತ ತೀರ್ಥ ಸ್ವಾಮೀಜಿ ಅವರು ಈ ಬಗ್ಗೆ ಪ್ರಧಾನಿ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ. ‘ಯಾರು ಈ ತಪ್ಪಿಗೆ ಕಾರಣರಾಗಿದ್ದಾರೋ ಅವರಿಗೆಲ್ಲ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
ಎಸ್ಐಟಿ ವರದಿ ತುಪ್ಪವನ್ನು ತಾಳೆ ಎಣ್ಣೆ, ತಾಳೆ ಕರ್ನಲ್ ಮತ್ತು ಎಣ್ಣೆ ಮತ್ತು ಇತರೆ ಕೆಲವು ವಸ್ತುಗಳೊಂದಿಗೆ ಕಲಬೆರಿಕೆ ಮಾಡಿರುವುದಾಗಿ ವರದಿಯನ್ನು ನೀಡಿದೆ. ಅನೇಕ ಜನರು ಕೆಲವು ಅಧಿಕಾರಿಗಳು ಮತ್ತು ಮೂರನೇ ವ್ಯಕ್ತಿಗಳು ಕಲಬೆರಕೆ ತುಪ್ಪದ ಪೂರೈಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅವರ ಹೆಸರುಗಳನ್ನು ಆರೋಪಿ ಪಟ್ಟಿಯಲ್ಲಿ ಬರೆಯಲಾಗಿದೆ ಎಂದು ಅವರು ದೆಹಲಿ ಮೂಲದ ಸುದ್ದಿ ವಾಹಿನಿಯೊಂದಿಗೆ ತಿಳಿಸಿದ್ದಾರೆ.
ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಮಾಡಲಾಗುತ್ತಿತ್ತು ಎಂದು ಆಂಧ್ರ ಮಾಜಿ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಆಪ್ತ ಸಂಬಂಧಿಯೂ ಆಗಿರುವ ಸುಬ್ಬಾರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ. ಲಡ್ಡು ಮಾದರಿಯಲ್ಲಿ ರಾಸಾಯನಿಕಗಳು ಮತ್ತು ಇತರ ಪದಾರ್ಥಗಳಿಗೆ ವಿಶೇಷ ತನಿಕಾ ತಂಡ ಸಲ್ಲಿಸಿದ ವರದಿಯನ್ನು ತಾವು ಒಪ್ಪುದಾಗಿ ಸಾರ್ವಜನಿಕವಾಗಿ ಅವರು ತಿಳಿಸಿದ್ದಾರೆ. ಈ ಕೆಲಸದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಅವರು ನಿರಾಕರಿಸಿದ್ದು, ಅಂತರ ಕಾಯ್ದುಕೊಂಡಿದ್ದಾರೆ.
ಟಿಟಿಡಿ ಮಾಜಿ ಅಧ್ಯಕ್ಷರು ತಮ್ಮ ಪಾಲ್ಗೊಳ್ಳುವಿಕೆಯನ್ನು ಅಲ್ಲಗಳೆದರು, ಅವರ ಅಧಿಕಾರದ ಸಮಯದಲ್ಲಿ ನಡೆದ ತಪ್ಪನ್ನು ಒಪ್ಪಿಕೊಂಡಿದ್ದಾರೆ.ಹಾಗಾಗಿ ವೈಎಸ್ಆರ್ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಹಿಂದಿನ ಮಂಡಳಿ ಈ ಅಜಾಗರೂಕತೆಗೆ ಹೇಗೆ ಅವಕಾಶ ನೀಡಿತು ಎಂಬುದು ಕುರಿತು ಇದೀಗ ಹೊಸ ಚರ್ಚೆ ಹುಟ್ಟಿದೆ . ತಿರುಮಲ ಲಡ್ಡು ಪ್ರಸಾದದಲ್ಲಿ ತುಪ್ಪ ಕಲಬೆರಿಕೆ ಬಗ್ಗೆ ವರದಿ ಬಂದ ನಂತರ ಹಲವಾರು ಹಿರಿಯಗಳು ತೀವ್ರವಾಗಿ ಖಂಡಿಸಿದ್ದಾರೆ.
ತಮಿಳುನಾಡಿನ ಮನ್ನಾರ್ಗುಡಿ ಮಠದ ಮುಖ್ಯಸ್ಥ ಸಂಪತ್ ಕುಮಾರ್ ರಾಮಾನುಜ ಜಿಯರ್ ಸ್ವಾಮೀಜಿಯವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. “ಭಕ್ತಿ ಇಲ್ಲದ ಜನರ ಈ ಕೃತ್ಯದಿಂದಾಗಿ, ಪ್ರಸಾದವನ್ನು ಸೇವಿಸುವ ಲಕ್ಷಾಂತರ ಭಕ್ತರ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರಬಹುದು ಮತ್ತು ಅವರ ಭಾವನೆಗಳಿಗೆ ಎಷ್ಟು ಆಳವಾಗಿತ್ತದೆ ಎಂಬುದನ್ನು ಪರಿಗಣಿಸಬೇಕು. ಇಂಥ ಕೆಲಸದಲ್ಲಿ ಭಾಗಿಯಾಗಿರುವವರನ್ನು ಶಿಕ್ಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕರ್ನಾಟಕದ ವ್ಯಾಸ ರಾಜ ಮಠದ ಮುಖ್ಯಸ್ಥ ಶ್ರೀ ವಿದ್ಯಾಶ್ರೀತ ತೀರ್ಥ ಸ್ವಾಮೀಜಿ ಈ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. “ಪ್ರಜ್ಞೆಗಳನ್ನು ಪೂರೈಸುವ ಭಗವಾನ್ ವೆಂಕಟೇಶ್ವರನನ್ನು ಪ್ರಪಂಚದಾದ್ಯಂತ ಕೋಟ್ಯಾಂತರ ಭಕ್ತರು ಪೂಜಿಸುತ್ತಾರೆ. ಅವರ ಪ್ರಸಾದ ತಯಾರಿಕೆಯಲ್ಲಿ ಅಪಚಾರ ನಡೆದಿದೆ. ಇದು ಹಿಂದೂ ಧರ್ಮದ ಅನುಯಾಯಿಗಳ ಭಾವನೆಗಳಿಗೆ ತುಂಬಾ ನೋವನ್ನು ಉಂಟು ಮಾಡಿದೆ. ಈ ಗಂಭೀರ ತಪ್ಪಿಗೆ ಕಾರಣರಾದ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಕೇಂದ್ರಕ್ಕೆ ಒತ್ತಾಯಿಸುತ್ತೇನೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
ತಮಿಳುನಾಡಿನ ಶ್ರೀ ಪೆರಂ ಬಂದೂರಿನ ಎಂಬಾರ್ ಜಿಯರ್ ಸ್ವಾಮಿ ಅವರು ಈ ಕೃತ್ಯಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಪವಿತ್ರ ಪ್ರಸಾದದಲ್ಲಿ ಕಲಬೆರಿಕೆ ತುಪ್ಪ ಬಳಸುವುದು ಹೇಯ ಕೃತ್ಯ. ತಪ್ಪುಗಳು ಮುಂದುವರೆದರೆ ಅದು ಜಗತ್ತಿನ ಕಲ್ಯಾಣಕೆ ಹಾನಿ ಮಾಡುತ್ತದೆ ಎಂದು ಅವರು ಗುಡುಗಿದರು. ಪ್ರಾಣಿಗಳ ಕೊಬ್ಬು ಮತ್ತು ರಾಸಾಯನಿಕಗಳಿಂದ ತಯಾರಿಸಿದ ಮಿಶ್ರಣವನ್ನು ಬಳಸಿದ ವಿರುದ್ಧ ಕಠಿಣ ಕಮ ಕೈಗೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ತಿರುಮಲ ಲಡ್ಡು ತಯಾರಿಕೆಯಲ್ಲಿ ಕಲಬೆರಕೆಯ ತುಪ್ಪವನ್ನು ಬಳಸಿ ಲಡ್ಡು ತಯಾರಿಸುತ್ತಿರುವುದು ಈಗ ಬಂದ ವರದಿಯಿಂದ ತಿಳಿದು ಬಂದಿದೆ. ಈ ಕೃತ್ಯಕ್ಕೆ ಸಂಬಂಧಿಸಿದ ಎಲ್ಲರ ಮೇಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಲ್ಲರೂ ಆಗ್ರಹಿಸುತ್ತಿದ್ದಾರೆ.
ಇನ್ನಷ್ಟು ಓದಿರಿ:
ಹೈದರಾಬಾದ್ ನಲ್ಲಿ ಹಲೀಮ್ ಪರಿಮಳ ಜೋರಾಗಿದೆ: ರಂಜಾನ್ ನಲ್ಲಿ 1000 ಕೋಟಿ ರೂ. ವಹಿವಾಟು ನಿರೀಕ್ಷೆ