ಡಿಸೆಂಬರ್ 23ರಂದು ಸಂಜೆ 5.30ರ ಸುಮಾರಿಗೆ ಯುವತಿ ಕೋಚಿಂಗ್ ಕ್ಲಾಸ್ ಮುಗಿಸಿ ಅಡೂರ್ನಿಂದ ಮನೆಗೆ ಸ್ಕೂಟರ್ನಲ್ಲಿ ಹೋಗುತ್ತಿದ್ದರು. ವಾಜಮುಟ್ಟಂ ಎಂಬಲ್ಲಿ ಕಾರೊಂದು ಆಕೆಯನ್ನು ಹಿಂಬಾಲಿಸಿ ಆಕೆಯ ಸ್ಕೂಟರ್ಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಯುವತಿ ಗಾಯಗೊಂಡಿದ್ದು, ಕಾರು ನಿಲ್ಲದೆ ಮುಂದೆ ಸಾಗಿತ್ತು.
ಸುತ್ತಮುತ್ತಲಿನ ಜನರು ತಕ್ಷಣ ಯುವತಿಯ ಸಹಾಯಕ್ಕೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ರಂಜಿತ್ ಇನ್ನೋವಾ ಕಾರಿನಲ್ಲಿ ಆಗಮಿಸುತ್ತಿದ್ದ. ಈ ವೇಳೆ, ತಾನು ಯುವತಿಯ ಪತಿ ಎಂದು ಪರಿಚಯ ಮಾಡಿಕೊಂಡು ಜನಸಂದಣಿಯಿಂದ ಆಕೆಯನ್ನು ಕರೆದುಕೊಂಡು ಕೊಣ್ಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಕಾಳಜಿ ತೋರಿ ನಾಟಕವಾಡಿದ್ದ.
ಯುವತಿಯ ಮನ ಗೆಲ್ಲುವ ಉದ್ದೇಶದಿಂದ ಯುವಕ ಮತ್ತು ಆತನ ಸ್ನೇಹಿತ ಅಪಘಾತದ ನಾಟಕವಾಡಿ ಸಿಕ್ಕಿಬಿದ್ದ ಘಟನೆ ಕೇರಳದ ಪತ್ತನಂತಿಟ್ಟು ಎಂಬಲ್ಲಿ ನಡೆದಿದೆ. ಈ ಘಟನೆಯ ಕುರಿತು ದಾಖಲಾದ ಪ್ರಕರಣದ ತನಿಖೆ ನಡೆಸಿದಾಗ ಇದು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯ ಎಂಬುದು ಬಯಲಾಗಿದ್ದು, ಆರೋಪಿ ರಂಜಿತ್ ಮತ್ತು ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಅಮೇಥಿ-ಪ್ರತಾಪ್ಗಢ ಬೈಪಾಸ್ ರಸ್ತೆಯಲ್ಲಿ ಟ್ರಕ್ಗೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರರಿಬ್ಬರು ಸಾವನ್ನಪ್ಪಿ, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಅಮೇಥಿ ನಿವಾಸಿಗಳಾದ ಮೋನು ಯಾದವ್ (28) ಮತ್ತು ದಿಗ್ವಿಜಯ್ ಸಿಂಗ್ (50) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಶಿವನಾಥ್ (30) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಅಮೇಥಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್ಸಿ) ದಾಖಲಿಸಲಾಗಿದೆ.
ಕೊಣ್ಣಿಯ ಮಮ್ಮೂಡುವಿನ ರಂಜಿತ್ ರಾಜನ್ (24) ಮತ್ತು ಪಯ್ಯನಮೋನಿನ ಆತನ ಸ್ನೇಹಿತ ಆಜಾಸ್ (19) ಉದ್ದೇಶಪೂರ್ವಕವಾಗಿ ಸ್ಕೂಟರ್ ಅಪಘಾತ ಮಾಡಿ ಯುವತಿಯೋರ್ವಳನ್ನು ಗಾಯಗೊಳಿಸಿದ್ದಾರೆ. ಅಪಘಾತದ ವೇಳೆ ಆಕೆಯನ್ನು ರಕ್ಷಿಸುವ ನಾಟಕವಾಗಿ ವಿಶ್ವಾಸ ಮತ್ತು ಸಹಾನುಭೂತಿ ಗಳಿಸಿದ್ದಾರೆ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಈ ಹಿಂದೆ ಯುವತಿ ಜೊತೆಗೆ ರಂಜಿತ್ ಸ್ನೇಹ ಹೊಂದಿದ್ದು, ಮತ್ತೆ ಆಕೆಯ ಜೀವನದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೇಥಿ ಪೊಲೀಸ್ ಠಾಣಾ ವ್ಯಾಪ್ತಿಯ ಅಮೇಥಿ-ಪ್ರತಾಪಗಢ ಬೈಪಾಸ್ ರಸ್ತೆಯ ಮಾ ಕಾಳಿಕಾ ಧಾಬಾ ಬಳಿ ಈ ಘಟನೆ ನಡೆದಿದೆ.
ಅಪಘಾತದ ಬೆನ್ನಲ್ಲೇ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಮೇಥಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ರವಿ ಸಿಂಗ್ ತಿಳಿಸಿದರು.
ಇನ್ನಷ್ಟು ಓದಿರಿ :
ಕುಕ್ಕೆಯಲ್ಲಿ ಆಶ್ಲೇಷ ನಕ್ಷತ್ರ ವಿಶೇಷ : ಸೆಲೆಬ್ರಿಟಿ ಭೇಟಿ