ಪ್ರತಿಯೊಬ್ಬರೂ ಆಹಾರ ಸೇವಿಸುವಾಗ ಒಂದಲ್ಲಾ ಒಂದು ದಿನ ಆಹಾರ ಗಂಟಲಿನಲ್ಲಿ ಸಿಲುಕಿಕೊಳ್ಳೋದು ಸಾಮಾನ್ಯ. ಕೆಲವೊಮ್ಮೆ ಇದು ಜೀವಕ್ಕೆ ಹಾನಿಯಾಗಬಲ್ಲದು. ಆಹಾರ ತಿನ್ನುವಾಗ ಬೇಗ ಬೇಗನೇ ತಿನ್ನುವುದು ಅಥವಾ ಆಹಾರ ತಿನ್ನುವಾಗ ಮಾತನಾಡುವುದರಿಂದ ಆಹಾರ ಗಂಟಲಿನಲ್ಲಿ ಸಿಲುಕಿಕೊಳ್ಳುತ್ತದೆ. ಆಗ ಉಸಿರುಗಟ್ಟಿದಂತಾಗುತ್ತದೆ. ಕೆಲವೊಮ್ಮೆ ಇದು ವಿಪರೀತ ನೋವಿನಿಂದ ಕೂಡಿರುತ್ತದೆ. ತಕ್ಷಣಕ್ಕೆ ಏನು ಮಾಡಬೇಕೆಂದು ತಿಳಿಯದೇ, ಕೆಲವರು ನೀರು ಕುಡಿಯಲು ಸಲಹೆ ನೀಡುತ್ತಾರೆ. ಇನ್ನೂ ಕೆಲವರು ತಲೆ ಮೇಲೆ ಎರಡೇಟು ಹೊಡೆಯುತ್ತಾರೆ. ಆದರೆ ಆಹಾರ ಗಂಟಲಿನಲ್ಲಿ ಸಿಲುಕಿಕೊಂಡಾಗ ನೀವು ತಕ್ಷಣ ಮಾಡಬೇಕಾದುದ್ದೇನು ಎನ್ನುವುದನ್ನು ನಾವು ತಿಳಿಯೋಣ.
ವೈದ್ಯರು ಏನಂತಾರೆ : ನಿಮ್ಮ ಸುತ್ತಲೂ ಯಾರೂ ಇಲ್ಲದಾದ ಆಹಾರವು ಶ್ವಾಸನಾಳದಲ್ಲಿ ಸಿಲುಕಿಕೊಂಡರೆ ಅಥವಾ ಗಂಟಲಿನಲ್ಲಿ ಏನಾದರೂ ಸಿಲುಕಿಕೊಂಡರೆ ಮಾಡಬೇಕಾದ ಮೊದಲ ಮತ್ತು ಉತ್ತಮ ಕೆಲಸಗಳನ್ನು ವೈದ್ಯರು ತಿಳಿಸಿದ್ದಾರೆ. ಆರ್ಥೋ ಮತ್ತು ಕ್ರೀಡಾ ಶಸ್ತ್ರಚಿಕಿತ್ಸಕ ಒಬೈದೂರ್ ರೆಹಮಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಹಾರ ಗಂಟಲಿನಲ್ಲಿ ಸಿಲುಕಿಕೊಂಡಾಗ ತಕ್ಷಣ ಏನು ಮಾಡಬೇಕು ಹಾಗೂ ಏನನ್ನು ಮಾಡಬಾರದು ಎನ್ನುವುದನ್ನು ತಿಳಿಸಲಾಗಿದೆ. ಸಮತಟ್ಟಾಗಿ ಮಲಗಬೇಡಿ, ಇದು ಉಸಿರುಕಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ.
ಗಾಬರಿಗೊಂಡು ಓಡಾಡಬೇಡಿ, ಇದು ದೇಹದ ಆಮ್ಲಜನಕವನ್ನು ಬೇಗನೆ ಖಾಲಿ ಮಾಡುತ್ತದೆ.ನಿಮ್ಮ ಗಂಟಲಿನಲ್ಲಿ ಏನಾದರೂ ಸಿಲುಕಿಕೊಂಡಾಗಲೆಲ್ಲಾ ಮೊದಲು ಮಾಡಬೇಕಾದ ಕೆಲಸವೆಂದರೆ ನೀರು ಕುಡಿಯುವುದನ್ನು ತಪ್ಪಿಸುವುದು ಎಂದು ವೈದ್ಯರು ಹೇಳುತ್ತಾರೆ. ಇದು ಅಡಚಣೆಯನ್ನು ಇನ್ನಷ್ಟು ಹದಗೆಡಿಸಬಹುದು.
ನಿಮ್ಮ ಬೆರಳುಗಳನ್ನು ಗಂಟಲಿನಲ್ಲಿ ಇಡಬೇಡಿ, ಇದು ತುಂಡನ್ನು ಮತ್ತಷ್ಟು ಕೆಳಕ್ಕೆ ತಳ್ಳಬಹುದು ಮತ್ತು ಊತವನ್ನು ಹೆಚ್ಚಿಸಬಹುದು.
ಇನ್ನಷ್ಟು ಓದಿರಿ:
೭೫ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಹಿರಿಯ ನಟಿ ಗಿರಿಜಾ ಲೋಕೇಶ್