belagavi news :
ಕೈಯಲ್ಲಿ ದೇಶದ ಪ್ರತಿಷ್ಠಿತ ಐಐಟಿ ಖರಗ್, ಆರಾಮದಾಯಕ ಜೀವನ-ಇವೆಲ್ಲವೂ ಇದ್ದರೂ ಇಬ್ಬರು ಸ್ನೇಹಿತರು ತಮ್ಮ ಕನಸಿನ ಹಾದಿಯನ್ನು ಆರಿಸಿಕೊಂಡಿದ್ದಾರೆ. ಕಾರ್ಪೊರೇಟ್ ಜಗತ್ತಿನ ಸುರಕ್ಷಿತ ವೃತ್ತಿ ಜೀವನಕ್ಕೆ ವಿದಾಯ ಹೇಳಿ, ಬೆಂಗಳೂರಿನಲ್ಲಿ ಸ್ವತಃ ಕೆಫೆ ಆರಂಭಿಸಿರುವ ಮೂಲಕ ಅವರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆಯುತ್ತಿದ್ದಾರೆ.
ಅಮೇರಿಕಾದಲ್ಲಿ ಉತ್ತಮ ಭವಿಷ್ಯ ಮತ್ತು ಹೆಚ್ಚಿನ ಸಂಬಳದ ಅವಕಾಶಗಳಿದ್ದರೂ, ತಮ್ಮದೇ ಆದ ಉದ್ಯಮ ಕಟ್ಟಬೇಕು ಎಂಬ ಕನಸು ಇವರನ್ನು ಭಾರತಕ್ಕೆ ಮರಳುವಂತೆ ಮಾಡಿತು. ಉದ್ಯೋಗದ ಭದ್ರತೆಯನ್ನು ಬಿಟ್ಟು ಉದ್ಯಮಶೀಲತೆಯ ಸವಾಲುಗಳನ್ನು ಸ್ವೀಕರಿಸಿದ ಈ ಸ್ನೇಹಿತರು ಬೆಂಗಳೂರಿನಲ್ಲಿ ವಿಶಿಷ್ಟ ಕೆಫೆಯನ್ನು ಆರಂಭಿಸಿದ್ದಾರೆ. ಗ್ರಾಹಕರಿಗೆ ಕೇವಲ ಆಹಾರ ಮತ್ತು ಕೆಫೆ ನೀಡುವುದಲ್ಲದೆ, ಉತ್ತಮ ಅನುಭವವನ್ನು ನೀಡುವ ಉದ್ದೇಶದಿಂದ ತಮ್ಮ ವ್ಯವಹಾರವನ್ನು ರೂಪಿಸಿದ್ದಾರೆ.
ಇವರ ನಿರ್ಧಾರ ಕೆಲವರಿಗೆ ಆಶ್ಚರ್ಯ ಮೂಡಿಸಿದರು, ಆಸಕ್ತಿ ಮತ್ತು ಕನಸುಗಳಿಗಾಗಿ ದೊಡ್ಡ ಸಂಬಳವನ್ನು ತ್ಯಜಿಸಬಹುದು ಎಂಬುದನ್ನು ಈ ಯುವಕರು ಸಾಬೀತುಪಡಿಸಿದ್ದಾರೆ. ಇದೀಗ ಅವರ ಯಶೋಗಾಥೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾವಿರಾರು ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿ ಪರಿಣಮಿಸಿದೆ.
"ಕನಸು ದೊಡ್ಡದಾಗಿದ್ದರೆ, ಸಂಬಳಕ್ಕಿಂತ ತೃಪ್ತಿ ಮುಖ್ಯ" ಎಂಬ ಸಂದೇಶವನ್ನು ಈ ಇಬ್ಬರು ಸ್ನೇಹಿತರ ಪಯಣ ಸ್ಪಷ್ಟವಾಗಿ ಕೇಳುತ್ತಿದೆ. ಕಾರ್ಪೊರೇಟ್ ಉದ್ಯಮದಿಂದ ಉದ್ಯಮಿಗಳ ಆಗುವವರೆಗೂ ದಿನ ಇವರ ಕಥೆ ಇದೀಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.
ದೇಶದ ಪ್ರತಿಷ್ಠಿತ ಐಐಟಿ ಖರಗ್ ಪುರ್ ಮತ್ತು ಐಐಟಿ ಬೆಂಗಳೂರು ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ್ದ ಇಬ್ಬರು ಯುವಕರು ಅಮೆರಿಕಾದ ಹೆಸರಾಂತ ಕಾರ್ಪೊರೇಟ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ರೆಸ್ಯೂಮ್ ನೋಡಿದರೆ ಯಾವುದೇ ಬಹು ರಾಷ್ಟ್ರೀಯ ಕಂಪನಿಯು ಕೋಟಿ ಕೋಟಿ ರೂಪಾಯಿ ಪ್ಯಾಕೇಜ್ ನೀಡಲು ಸಿದ್ಧವಾಗುವಷ್ಟು ಪ್ರತಿಭೆ ಅವರಲ್ಲಿತ್ತು. ಆದರೆ, ಕೇವಲ ಹೆಚ್ಚಿನ ಸಂಬಳ ಮತ್ತು ಐಷಾರಾಮಿ ಜೀವನವೇ ಯಶಸ್ಸಿನ ಮಾನದಂಡವಲ್ಲ ಎಂಬುದನ್ನು ಅವರು ತಮ್ಮ ನಿರ್ಧಾರದಿಂದ ಸಾಬೀತುಪಡಿಸಿದ್ದಾರೆ.
ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಕಾರ್ಪೊರೇಟ್ ಜಗತ್ತಿನ ಭದ್ರವಾದ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಈ ಸ್ನೇಹಿತರು ತಮ್ಮದೇ ಆದ ಉದ್ಯಮ ಕಟ್ಟುವ ಕನಸಿನೊಂದಿಗೆ ಬೆಂಗಳೂರಿಗೆ ಮರಳಿದರು. ಭಾರತದ ಸ್ಮಾರ್ಟ್ ಆಪ್ ರಾಜಧಾನಿ ಎಂದೇ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಅವರು ವಿಶಿಷ್ಟ ಕೆಫೆ ಆರಂಭಿಸುವ ಮೂಲಕ ಉದ್ಯಮಶೀಲತೆಯ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದ್ದಾರೆ.
ಲಕ್ಷಾಂತರ ರೂಪಾಯಿ ಸಂಬಳ, ವಿದೇಶದ ಸುಖ ಸೌಕರ್ಯ ಮತ್ತು ಭರವಸೆಯ ಭವಿಷ್ಯವನ್ನು ಬದಿಗೊತ್ತಿ, ತಮ್ಮ ಆಸಕ್ತಿ ಮತ್ತು ಕನಸಿಗೆ ಆದ್ಯತೆ ನೀಡಿದ ಈ ಯುವಕರ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಯುವಕರಿಗೆ ಸ್ಪೂರ್ತಿ ಆಗುತ್ತಿದೆ.
ಪ್ರಸ್ತುತ ಈ ಇಬ್ಬರು ಸ್ನೇಹಿತರು ಬೆಂಗಳೂರಿನಲ್ಲಿ ಸ್ವತಃ ಕೆಫೆ ಒಂದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇವರ ಈ ಯಶೋಗಾಥೆ ಲಿಕ್ಡ್ ಇನ್ ಹಾಗೂ ಎಕ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿದೆ. ಸಾಮಾನ್ಯವಾಗಿ ಐಐಟಿ ಮತ್ತು ಐಐಎಂ ನಂತಹ ಪ್ರತಿಷ್ಠಿತ ಸಂಸ್ಥೆಗಳಿಂದ ಪದವಿ ಪಡೆದವರು ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಅಥವಾ ಕೋಟಿ ರೂಪಾಯಿ ಪ್ಯಾಕೇಜ್ ಗಳೊಂದಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಮಿಂಚುವುದು ಸಾಮಾನ್ಯ. ಆದರೆ, ಈ ಇಬ್ಬರು ಯುವಕರು ಅದೇ ಹಾದಿಯನ್ನು ಅನುಸರಿಸದೇ, ನಮ್ಮ ಕನಸಿನ ಬೆನ್ನತ್ತಿ ಉದ್ಯಮಶೀಲತೆಯ ಮಾರ್ಗವನ್ನು ಆರಿಸಿಕೊಂಡಿರುವುದು ನೆಟ್ಟಿಗರ ಗಮನ ಸೆಳೆದಿದೆ.
ಅಮೆರಿಕಾದ ಪ್ರತಿಷ್ಠಿತ ಉದ್ಯೋಗ ಮತ್ತು ಆಕರ್ಷಕ ಸಂಬಳವನ್ನು ತೊರೆದು, ತಳಮಟ್ಟದಿಂದಲೇ ಆಹಾರ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಹೊಸ ಗುರುತು ಮೂಡಿಸಲು ಮುಂದಾಗಿರುವ ಅವರ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. "ಹೆಚ್ಚಿನ ಸಂಬಳ ಎಲ್ಲವನ್ನು ಕೊಡಬಹುದು, ಆದರೆ ಮನಸ್ಸಿಗೆ ತೃಪ್ತಿ ಕೊಡುವುದು ಕನಸುಗಳನ್ನು ನನಸಾಗಿಸುವ ಪ್ರಯತ್ನ"ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇವರ ಸಾಹಸಮಯ ನಿರ್ಧಾರವನ್ನು ಕೊಂಡಾಡಿರುವ ನೆಟ್ಟಿಗರು, ಸುರಕ್ಷಿತ ವೃತ್ತಿ ಜೀವನವನ್ನು ಬಿಟ್ಟು ಹೊಸ ಸವಾಲುಗಳನ್ನು ಸ್ವೀಕರಿಸಲು ಅಪಾರ ಧೈರ್ಯ ಬೇಕು ಎಂದು ಹೇಳಿದ್ದಾರೆ. ಉದ್ಯೋಗದ ಭದ್ರತೆಯನ್ನು ಮೀರಿ ತಮ್ಮ ಆಸಕ್ತಿಯನ್ನು ವೃತ್ತಿಯನ್ನಾಗಿಸಿಕೊಂಡ ಈ ಯುವಕರ ಕಥೆ ಈಗ ಸಾವಿರಾರು ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿ ಪರಿಣಮಿಸಿದೆ."ಕನಸು ಕಾಣುವುದು ಮುಖ್ಯ, ಆದರೆ ಅದನ್ನು ನನಸಾಗಿಸಲು ಧೈರ್ಯದಿಂದ ಹೆಜ್ಜೆ ಇಡುವುದು ಇನ್ನೂ ಮುಖ್ಯ" ಎಂಬ ಸಂದೇಶವನ್ನು ಇವರ ಪಯಣ ಸಾರುತಿದೆ.
Also Read:
ಇರಾನ್ ಯುದ್ಧ ಅಂತ್ಯಕ್ಕೆ ಟ್ರಂಪ್ ಹೊಸ ಪ್ರಸ್ತಾಪ: 60 ದಿನಗಳ ಕದನ ವಿರಾಮಕ್ಕೆ ಒಪ್ಪಂದ ಪರಿಷ್ಕರಣೆ?