belagavi news:
ದೇವನಹಳ್ಳಿಯಲ್ಲಿ ಯುವತಿಯೋಬ್ಬಳು ತನ್ನ ತಾಯಿಯ ತಂಗಿಯ ಮಗನಾದ ಸೋದರ ಸಂಬಂಧಿಯನ್ನೇ ಪ್ರೀತಿಸಿ ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೇ 29 ರಂದು ಬೇರೊಬ್ಬರೊಂದಿಗೆ ನಿಶ್ಚಿಯವಾಗಿದ್ದ ಮದುವೆಯನ್ನು ನಿರಾಕರಿಸಿ ತನ್ನ ಪ್ರೀತಿಯ ನನ್ನೇ ವರಿಸಿದ ಘಟನೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.
ಜನಸಂಖ್ಯೆ ಈ ಹಿನ್ನಲೆಯಲ್ಲಿ ನವ ದಂಪತಿ ಇದೀಗ ಕ್ಷಣಿಕೆ ರಕ್ಷಣೆಗೆ ಕೋರಿ ಚಿಕ್ಕಬಳ್ಳಾಪುರ ಪೊಲೀಸರನ್ನು ಸಂಪರ್ಕಿಸುವುದಾಗಿ ತಿಳಿದುಬಂದಿದೆ.
ಚಿಕ್ಕಬಳ್ಳಾಪುರ ಮೇ 7: ಪ್ರೀತಿ ಕುರುಡು ಎಂಬ ಮಾತಿಗೆ ಸಾಕ್ಷಿಯಂತೆ, ವರಸೆಯಲ್ಲಿ ಅಕ್ಕ - ತಮ್ಮನಾಗಬೇಕಾದವರೇ ಪ್ರೀತಿಸಿ ಮದುವೆಯಾಗಿ ಕುಟುಂಬಕ್ಕೆ ಶಾಕ್ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾವಕನಹಳ್ಳಿಯ ಶಶಿಕಲಾ (29) ಮತ್ತು ಹೊಸಕೋಟೆ ತಾಲೂಕಿನ ಹಳೆಊರಿನ ಪ್ರವೀಣ್ (24)ಅವರು ಕುಟುಂಬ ಹಾಗೂ ಸಮಾಜದ ವಿರೋಧದ ನಡೆಯು ವಿವಾಹವಾಗಿದ್ದಾರೆ.
ಮದುವೆಯ ನಂತರ ತಮ್ಮ ಸುರಕ್ಷತೆಗೆ ಭಯ ವ್ಯಕ್ತಪಡಿಸಿರುವ ಈ ನವ ದಂಪತಿ, ರಕ್ಷಣೆ ನೀಡುವಂತೆ ಚಿಕ್ಕಬಲ್ಲಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.
ಮುಖ್ಯಾಂಶಗಳು:
ಶಶಿಕಲಾ ಮತ್ತು ಪ್ರವೀಣ್ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಮೇ 29 ರಂದು ಶಶಿಕಲಾಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಗದಿಯಾಗಿತ್ತು.
ಶಶಿಕಲಾ ತಾಯಿಯ ತಂಗಿಯ ಮಗ ಪ್ರವೀಣನನ್ನೇ ಮದುವೆಯಾಗಿದ್ದಾಳೆ.
ಪೋಷಕರ ವಿರೋಧದ ನಡುವೆ ಮದುವೆ:
ಶಶಿಕಲಾ ಮತ್ತು ಪ್ರವೀಣ್ ಸಂಬಂಧಿಕರಾಗಿದ್ದು, ಶಶಿಕಲಾಳ ತಾಯಿಯ ತಂಗಿಯ ಮಗನೇ ಪ್ರವೀಣ್. ಅಂದರೆ, ವರಸೆಯಲ್ಲಿ ಇವರಿಬ್ಬರು ಅಕ್ಕ- ತಮ್ಮನಾಗಬೇಕಾಗಿದವರು.
ಇವರ ಪ್ರೀತಿಯ ವಿಷಯ ತಿಳಿದ ಬಳಿಕ ಕುಟುಂಬ ಸದಸ್ಯರು ಈ ಸಂಬಂಧವನ್ನು ಸಮಾಜದಲ್ಲಿ ಒಪ್ಪಲಾಗುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರು ಜೊತೆಗೆ ಶಶಿಕಲಾಗಿ ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿ ಮೇ 29ಕ್ಕೆ ಮದುವೆ ನಿಗದಿ ಪಡಿಸಲಾಗಿತ್ತು. ಆದರೆ ಮದುವೆಗೆ ಕೆಲವೇ ದಿನಗಳ ಮುನ್ನ ಶಶಿಕಲ ಮಳೆಯಿಂದ ಹೊರ ಬಂದು ಪ್ರವೀಣ್ ಅನ್ನು ಮದುವೆಯಾಗಿದ್ದಾಳೆ.
ಪೊಲೀಸ್ ರಕ್ಷಣೆ ಕೋರಿದ ನವ ಜೋಡಿ:
ಮದುವೆಯಾದ ಬಳಿಕ ಈ ಜೋಡಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ." ನಾವು ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದೇವೆ, ನಮ್ಮನ್ನು ನಮ್ಮ ಜೀವನ ನಡೆಸಲು ಬಿಡಬೇಕು" ಎಂದು ಶಶಿಕಲಾ ಹೇಳಿಕೆ ನೀಡಿದ್ದಾರೆ.
ಇತ್ತ ಪೋಷಕರು ಈ ಮದುವೆಯಿಂದ ಕುಟುಂಬಕ್ಕೆ ಅವಮಾನವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದು ಪ್ರಕರಣ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.
Also Read: