belagavi news :
ಹೈದರಾಬಾದ್ ಗೆ ಆಗಮಿಸಿದ ಕರ್ನಾಟಕದ ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸ ರಾಜು ಅವರು ತೆಲಂಗಾಣದ ನೀರಾವರಿ ಸಚಿವ ಎನ್ ಉತ್ತಮ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು. ಕೃಷ್ಣ ನದಿಗೆ ಕರ್ನಾಟಕವು ಪ್ರಸ್ತಾಪಿಸಿರುವ ಹೊಸ ಅಣೆಕಟ್ಟು ಹಾಗೂ ಸಂಬಂಧಿತ ಯೋಜನೆಗಳನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂಬ ವಿಷಯದಲ್ಲಿ ಉಭಯ ರಾಜ್ಯಗಳ ನಡುವೆ ಸಮಲೋಚನೆ ನಡೆಯಿತು.
ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ಪ್ರಸ್ತಾವಿತ ಅಣೆಕಟ್ಟು ಯೋಜನೆಯ ಕುರಿತು ವಿವರವಾದ ಪ್ರಸ್ತುತಿ ನೀಡಿದರು. ಈ ವೇಳೆ ತೆಲಂಗಾಣ ಸಚಿವರು ಹಾಗೂ ಸಾರ್ವಜನಿಕ ಪ್ರತಿನಿಧಿಗಳು ತಮ್ಮ ರಾಜ್ಯದ ಜನರ ಅಭಿಪ್ರಾಯಗಳು ಮತ್ತು ಕಳವಳಗಳನ್ನು ಮುಂದಿಟ್ಟುಕೊಂಡು ಚರ್ಚೆ ನಡೆಸಿದರು. ಜಲ ಹಂಚಿಕೆ ಹಾಗೂ ಅಂತರ್ ರಾಜ್ಯ ನೀರಾವರಿ ಯೋಜನೆಗಳ ಕುರಿತು ವಿವಿಧ ಅಂಶಗಳು ಸಭೆಯಲ್ಲಿ ಗಮನ ಸೆಳೆದವು.
ಸಭೆಯ ಬಳಿಕ ಮಾತನಾಡಿದ ತೆಲಂಗಾಣ ಸಚಿವ ಎನ್ ಉತ್ತಮ ಕುಮಾರ್ ರೆಡ್ಡಿ, ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಅಂಶಗಳನ್ನು ಮುಖ್ಯಮಂತ್ರಿಯ ಎ. ರೇವಂತ್ ರೆಡ್ಡಿ ಅವರಿಗೆ ವರದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ನಂತರ ಉಭಯ ರಾಷ್ಟ್ರಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಾಮೂಹಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಮತ್ತು ತೆಲಂಗಾಣ ನಡುವಿನ ಜಲವಿವಾದ ಹಾಗೂ ಸಹಕಾರದ ಈ ಚರ್ಚೆ ಮುಂದಿನ ದಿನಗಳಲ್ಲಿ ಮಹತ್ವದ ನಿರ್ಣಯಗಳಿಗೆ ದಾರಿ ಮಾಡಿಕೊಡಲಿದೆ ಎಂದು ನಿರೀಕ್ಷೆ ವ್ಯಕ್ತವಾಗಿದೆ. ತೆಲಂಗಾಣದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಯೋಜನಾ ವಿನ್ಯಾಸಗಳನ್ನು ಯೋಜಿಸಬೇಕು ಎಂದು ಉತ್ತಮ ರೆಡ್ಡಿ ಇದೇ ವೇಳೆ, ಕರ್ನಾಟಕದ ಸಚಿವರು ಮತ್ತು ಅಧಿಕಾರಿಗಳ ತಂಡಕ್ಕೆ ಒತ್ತಿ ಹೇಳಿದ್ದರು.
ನೀರಾವರಿ ಹಕ್ಕುಗಳನ್ನು ರಕ್ಷಿಸುವುದು ಮತ್ತು ಭವಿಷ್ಯದ ನೀರಿನ ಅವಶ್ಯಕತೆಗಳನ್ನು ರಚಿಸುವುದು ಪ್ರಮುಖ ಆದ್ಯತೆಗಳಾಗಿವೆ ಎಂದು ಅವರು ಇದೇ ವೇಳೆ ಕರ್ನಾಟಕದ ಟೀಮ್ ಗೆ ಮನವರಿಕೆ ಮಾಡಿಕೊಟ್ಟರು. ಅಂತರ್-ರಾಜ್ಯ ಸಮನ್ವಯದ ಮೂಲಕ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಗುರಿಯೊಂದಿಗೆ ಕರ್ನಾಟಕ ಸರ್ಕಾರ ಹಲವು ಪ್ರಸ್ತಾವನೆಗಳನ್ನು ಮುಂದಿಟ್ಟಿದೆ ಎಂದು ಸಭೆಯಲ್ಲಿ ವಿವರಿಸಲಾಗಿದೆ. ಈ ಕುರಿತು ನಡೆದ ಉನ್ನತ ಮಟ್ಟದ ಚರ್ಚೆಯಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳು ಹಾಗೂ ಸಚಿವರು ಭಾಗವಹಿಸಿದ್ದರು.
ಪರಸ್ಪರ ತಿಳಿವಳಿಕೆ ಮತ್ತು ಸಹಕಾರದ ಮಹತ್ವವನ್ನು ಎತ್ತಿ ಹೇಳಿದ ತೆಲಂಗಾಣ ನೀರಾವರಿ ಸಚಿವ ಎನ್ ಉತ್ತಮ್ ಕುಮಾರ್ ರೆಡ್ಡಿ, ಕೃಷ್ಣಾ ನದಿ ನೀರಿನ ಬಳಕೆ ಸರ್ಕಾರ ಮತ್ತು ಸಮನ್ವಯದ ಮೂಲಕ ಆಗಬೇಕು ಎಂದು ತಿಳಿಸಿದ್ದಾರೆ. ಜಲ ಹಂಚಿಕೆ ವಿಷಯದಲ್ಲಿ ಉಭಯ ರಾಜ್ಯಗಳ ನಡುವಿನ ಸಂವಾದ ಮುಂದುವರಿಯಬೇಕೆಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದೆ.
ಕರ್ನಾಟಕ ಮತ್ತು ತೆಲಂಗಾಣದ ಹಿತ್ತಾಸಕ್ತಿಗಳನ್ನು ಸಮತೋಲನಗೊಳಿಸುವ ಒಪ್ಪಂದದತ್ತ ಎರಡು ರಾಜ್ಯಗಳು ಕೆಲಸ ಮಾಡಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತರ್-ರಾಜ್ಯ ಜಲ ನಿರ್ವಹಣೆ ಮತ್ತು ದೀರ್ಘಕಾಲಿನ ಪರಿಹಾರಗಳ ಕುರಿತು ಮುಂದಿನ ಹಂತದ ಚರ್ಚೆಗಳು ಇನ್ನಷ್ಟು ಮಹತ್ವ ಪಡೆದುಕೊಳ್ಳುವ ಸಾಧ್ಯತೆ ಇದೆ.
ಈ ಸಭೆಯ ಕುರಿತು ಮಾಹಿತಿ ಹಂಚಿಕೊಂಡಿರುವ ಕರ್ನಾಟಕದ ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸ್ ರಾಜು, ಇಂದು ತೆಲಂಗಾಣ ಸಚಿವಾಲಯದಲ್ಲಿ ನಡೆದ ಉನ್ನತ ಮಟ್ಟದ ಅಂತರ್-ರಾಜ್ಯ ಗಳು ಸಭೆಯಲ್ಲಿ ಭಾಗವಹಿಸಿದ್ದೇವೆ ಎಂದು ತಿಳಿಸಿದ್ದಾರೆ. ರಾಯಚೂರು ತಾಲೂಕು ಮತ್ತು ಜಿಲ್ಲೆ ವ್ಯಾಪ್ತಿಯ ಕೊರತ್ಕುಂಡ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯ ಸಾಧ್ಯತೆಗಳ ಕುರಿತು ತೆಲಂಗಾಣದ ನೀರಾವರಿ ಮತ್ತು ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಸಚಿವ ಎನ್ ಉತ್ತಮ ರೆಡ್ಡಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕ್ರಮವು ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಜನ ಸಂಪನ್ಮೂಲ ನಿರ್ವಹಣೆ,ನೀರಾವರಿ ವಿಸ್ತರಣೆ,ಕುಡಿಯುವ ನೀರಿನ ಸುರಕ್ಷತೆ,ಸುಸ್ಥಿರ ಕೃಷಿ ಹಾಗೂ ಪ್ರದೇಶದ ಜನರ ಅಂತರ್ಜಲ ಮರುಪೂರಣದಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವ ಬೋಸರಾಜು ತಮ್ಮ 'ಎಕ್ಸ್' ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ರೈತರು ಹಾಗೂ ಜನರ ಹಿತಾಸಕ್ತಿಗಾಗಿ ಸದಾ ಸಹಕಾರದ ಮನೋಭಾವದಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.ಈ ಸಭೆಯಲ್ಲಿ ಅಂತರ್ ರಾಜ್ಯ ಜಲ ಯೋಜನೆಗಳ ಮುಂದಿನ ಹಂತಕ್ಕೆ ದಾರಿ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.
Also Read:
' ಗೋವನ್ನು ರಾಷ್ಟ್ರೀಯ ಪ್ರಾಣಿ ಮಾಡಿ': ಮುಸ್ಲಿಂ ಸಂಘಟನೆಗಳ ಬಿಗ ಘೋಷಣೆ, ಚರ್ಚೆಗೆ ಕಾರಣ